ಸಿಂದಗಿ: ಹನ್ನೆರಡನೇ ಶತಮಾನದಲ್ಲಿಯೇ ಸಮಾಜದ ಏಳ್ಗೆಗಾಗಿ ಸಮಾನತೆಯನ್ನು ಬಯಸಿದ ಶರಣ ಮಡಿವಾಳ ಮಾಚಿದೇವರ ಜೀವನ ಚರಿತ್ರೆ ಬಹಳ ಅರ್ಥ ಪೂರ್ಣವಾಗಿದೆ ಅವರ ವಚನಗಳನ್ನು ಓದುವ ಮೂಲಕ ತತ್ವ ಆದರ್ಶಗಳು ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಆದರ್ಶ ವ್ಯಕ್ತಿಯಾಗಿ ಬಾಳಬೇಕು ಎಂದು ತಹಶೀಲ್ದಾರ ನಿಂಗಣ್ಣ ಬಿರಾದಾರ ಹೇಳಿದರು.
ಪಟ್ಟಣದ ತಹಶೀಲ್ದಾರ ಕಚೇರಿಯ ಸಭಾಭವನದಲ್ಲಿ ಮಂಗಳವಾರ ಶ್ರೀ ಶರಣ ಮಡಿವಾಳ ಮಾಚಿದೇವರ ಜಯಂತ್ಯುತ್ಸದಲ್ಲಿ ಅವರು ಮಾಚಿದೇವರ ಭಾವ ಚಿತ್ರಕ್ಕೆ ಪೂಜಾ ನೆರವೇರಿಸಿ ಅವರು ಮಾತನಾಡಿ, ಕಲ್ಯಾಣ ಕ್ರಾಂತಿ ಬಳಿಕ ಎಲ್ಲ ಶರಣರ ವಚನಗಳು ಸಂರಕ್ಷಿಸುವಲ್ಲಿ ಶರಣ ಮಡಿವಾಳ ಮಾಚಿದೇವರ ಹೋರಾಟ ಶ್ಲಾಘನೀಯವಾದದು ಎಂದು ಬಣ್ಣಿಸಿದರು.
ಈ ಸಮಾರಂಭದಲ್ಲಿ ಶಿರಸ್ತೇದಾರರಾದ ಸುರೇಶ ಮ್ಯಾಗೇರಿ, ಸಿ ಬಿ ಬಾಬನಗರ, ಆಯ್.ಎ.ಮಕನದಾರ, ಪಿ.ಕೆ.ಹುಡೇದ, ರಾಮನಗೌಡ ರಾಂಪೂರ, ಎಂ.ಕೆ.ಪೂಜಾರಿ, ಅಬ್ಬಸಾಲಿ ಅಂಗಡಿ, ಚೇತನ ಬೋಸಗಿ, ನಿವೃತ ಗುಮಸ್ತ ಗುರುನಾಥ ರಡ್ಡಿ, ಮಡಿವಾಳ ಸಮಾಜದ ಮುಖಂಡ ಹಿರಿಯ ಶಿಕ್ಷಕ ಸಾಹಿತಿ ಬಸವರಾಜ ಅಗಸರ,ರಂಗನಾಥ ಪರೀಟ,ಮಡಿವಾಳ ಸಮಾಜದ ತಾಲೂಕಾ ಅಧ್ಯಕ್ಷ ಈರಣ್ಣ ಅಗಸರ ಯರಗಲ್ಲ್,ಶಂಕರ ಅಗಸರ,ಶ್ಯಾಮರಾವ್ ರಾಂಪೂರ, ಮಲ್ಲು ಅಗಸರ, ಸಿ ಬಿ ಮಡಿವಾಳರ, ಶರಣು ಅಗಸರ, ಶಾಂತು ಖೈನೂರ,ಮಲ್ಲು ಅರಳಗುಂಡಗಿ, ಶಾಂತು ಖೈನೂರ, ಸುರೇಶ ಕೋರವಾರ, ಗೋಲ್ಲಾಳ ಅಗಸರ ಹಾಗೂ ಮಡಿವಾಳ ಸಮಾಜದ ಮುಖಂಡರು ಹಾಗೂ ತಾಲೂಕಾ ಅಧಿಕಾರಿಗಳು ಭಾಗವಹಿಸಿದರು.