Homeಸುದ್ದಿಗಳುವಿದ್ಯಾ ರೆಡ್ಡಿ ಅವರಿಗೆ ಕರುನಾಡ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ

ವಿದ್ಯಾ ರೆಡ್ಡಿ ಅವರಿಗೆ ಕರುನಾಡ ಸಾಹಿತ್ಯ ರತ್ನ ರಾಜ್ಯಪ್ರಶಸ್ತಿ

ಫೆಬ್ರುವರಿ 2ರಂದು ಧಾರವಾಡದ ರಂಗಾಯಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಧಾರವಾಡ ಹಾಗೂ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಕಾರಟಗಿ ಇವರ ಸಹಯೋಗದಲ್ಲಿ ನಡೆದ ವಿವಿಧ ರಂಗಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ನಡೆಯಿತು. ಗೋಕಾವಿಯ ಸಾಹಿತಿಗಳಾದ ಶ್ರೀಮತಿ ವಿದ್ಯಾ ರೆಡ್ಡಿ ಅವರಿಗೆ ರಾಜ್ಯಮಟ್ಟದ ಕರುನಾಡ ಸಾಹಿತ್ಯ ರತ್ನ ಪ್ರಶಸ್ತಿಯನ್ನು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಮಂಜಮ್ಮ ಜೋಗತಿ ಪ್ರಶಸ್ತಿ ಪ್ರದಾನ ಮಾಡಿದರು.

ಶ್ರೀ ಡಾ. ಬಸವರಾಜ ದೇವರು ಕಾರ್ಯಕ್ರಮದ ದಿವ್ಯ ಸಾನ್ನಿಧ್ಯವನ್ನು ವಹಿಸಿದ್ದರು. ಕರ್ನಾಟಕ ರೇಷ್ಮೆ ಮಾರಾಟ ಮಂಡಲ ನಿಗಮದ ಅಧ್ಯಕ್ಷರಾದ ಸವಿತಾ ಅಮರಶೆಟ್ಟಿ, ರಂಗಾಯಣದ ನಿರ್ದೇಶಕರಾದ ರಮೇಶ್ ಪರವಿ ನಾಯ್ಕರ್, ಕನ್ನಡ ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಮಂಜುಳಾ ಎಲಿಗಾರ, ಅಧ್ಯಕ್ಷರಾದ ಜೆ ನಾಗರಾಜ ಪೂಜಾರ, ಯಮನೂರಪ್ಪ ಜಾಲಗಾರ, ಆರತಿ ದೇವಶಿಖಾಮಣಿ ಮತ್ತಿತರರು ಇದ್ದರು.

RELATED ARTICLES

Most Popular

error: Content is protected !!
Join WhatsApp Group