ಬೀದರ – ದೂರದ ಉಡುಪಿಯಲ್ಲಿ ಸರ್ಕಾರಿ ಕಾಲೇಜೊಂದರಲ್ಲಿ ನಡೆದ ಹಿಜಾಬ್ ಭಾನಗಡಿ ಈಗ ಗಡೀ ಜಿಲ್ಲೆ ಬೀದರ್ ಗೂ ಕಾಲಿಟ್ಟಿದ್ದು, ಹಿಜಾಬ್ ವಿರುದ್ಧ ಪ್ರತಿಭಟಿಸಿ 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬಂದಿದ್ದಾರೆ.
ಬೀದರ್ ನ ನೌಬಾದ್ ನಲ್ಲಿರುವ ಸರಕಾರಿ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ತಾವೂ ಕೇಸರಿ ಶಾಲು ಧರಿಸಿಕೊಂಡು ಬರುತ್ತೆವೆಂದು ಕೇಸರಿ ಶಾಲು ಧರಿಸಿಕೊಂಡು ಒಂದು ಗಂಟೆಯ ಪಾಠ ಕೇಳಿ ಹೊರಬಂದರು.
ಇದರಿಂದ ಎಲ್ಲೆಡೆ ಹಿಜಾಬ್ ವಿವಾದ ಪಸರಿಸಿದಂತಾಗಿದ್ದು ಕೆಲವೇ ಕೆಲವು ವಿದ್ಯಾರ್ಥಿನಿಯರ ಅವಿವೇಕತನಕ್ಕೆ ಇಡೀ ರಾಜ್ಯವೀಗ ಧರ್ಮದ ಆಧಾರದ ಮೇಲೆ ಪಾಠ ಕೇಳುವಂಥ ಪರಿಸ್ಥಿತಿ ಬಂದೊದಗಿದೆ ಎನ್ನಬಹುದು.
ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ