ಚುಟುಕುಗಳು

Must Read

ಸ್ಮರಣೆ

ಬಾವುಟ ಹಾರಿಸಿದ
ಮಂತ್ರಿಗಳು ಮಾಡಿದರು
‘ಗಾಂಧಿ ಸ್ಮರಣೆ ‘
ಎದುರು ರಸ್ತೆಯ ಬಾರೊಂದರಲಿ
ನಡೆದಿತ್ತು…
ಭರ್ಜರಿ ಸೇಂದಿ ಸ್ಮರಣೆ…

ಹುಚ್ಚ

ಬಟ್ಟೆ ಗಂಟುಗಳ
ಹಿಮಾಲಯ ಪರ್ವತ
ಮೆದುಳ ತುಂಬಾ
ಥಕ ದಿಂ-ಥಕ ದಿಂ
ಭಾವಗಳ ಭರತನಾಟ್ಯ,
ಶೃತಿಯಿಲ್ಲದ ಗಾನ
ಹಾಡುವ ಆತ ದಿನವೂ
ರಸ್ತೆಯ ಅಂಚಿನಲ್ಲಿ
ಹುಡುಕುತ್ತಿದ್ದಾನೆ
ಬೆಂಕಿ ಅಪಘಾತದಲ್ಲಿ
ಭಸ್ಮವಾದ…
ತನ್ನ ಹೆಂಡತಿ-ಮಕ್ಕಳನ್ನು!!!
ರಾತ್ರಿ-ಹಗಲೆನ್ನದೆ
ಮಳೆ-ಚಳಿ-ಗಾಳಿಗಳ ಮಧ್ಯೆ…

ಅಚ್ಚರಿ..ಅಚ್ಚರಿ

ಯುವಶಕ್ತಿ ಸಿಡಿದೇಳಬೇಕು
ಎಂಬ ಕರೆ ಕೇಳಿ
ನಮ್ಮೂರ ಯುವಕರು ಸಿಡಿದೆದ್ದು,
ಬಾರಿಗೆ ನುಗ್ಗಿ ‘ಗುಂಡು’ಹಾಕಿ
ಊರೊಳಗೆ ನುಗ್ಗಿ
ರಾತ್ರೋರಾತ್ರಿ
ಹಲವರ ತೆಂಗು-,ಮಾವು
ತೋಟಗಳಿಗೆ ನುಗ್ಗಿ,
ಮರಗಳಿಗೆ ಲಗ್ಗೆ ಹಾಕಿ
ರಸದೌತಣ ಮಾಡಿದರು…

ಡಾ.ಭೇರ್ಯ ರಾಮಕುಮಾರ್,
ಸಾಹಿತಿಗಳು, ಪತ್ರಕರ್ತರು
ಮೊ:94496 80583
63631 72368

Latest News

ಕವನ : ಹೃದಯ ವೀಣೆ

ಹೃದಯ ವೀಣೆಶುರುವಾಗಿದೆ ಆಸೆಗಳ ಆಂದೋಲನ ಅತಿಯಾಗಿ ಹೇಳಲಾಗದೆ ಉಳಿದಿವೆ ಅದೆಷ್ಟೋ ಮಾತುಗಳು ಮುದುರಿ ಹೋಗಿವೆ ಎದೆಯ ಗೂಡೊಳಗೆ ಬಂದೊಮ್ಮೆ ಮೀಟು ಹೃದಯ ವೀಣೆ ಕಾಯುತಿವೆ ನಿನ್ನ ಬರುವಿಗಾಗಿ ಭಾವಲತೆಗಳು ನೀ ಬಂದು ಸಂತೈಸು ಮಿಡಿಯುವ ಮನವ ಬಂದುಬಿಡೊಮ್ಮೆ ಅಂತರಂಗದ ಹೂ ಬನಕೆ ಮಧುವರಿಸಿ ಬರುವ ದುಂಬಿಯಂತೆ ಮಿಲನವಾಗಲಿ ಮಧುರ ಪ್ರೇಮಕಾವ್ಯ ಕಾಯುತಿದೆ ಮನವು ಬಾಹುಬಂಧನದ ಬೆಸುಗೆ ತವಕದ...

More Articles Like This

error: Content is protected !!
Join WhatsApp Group