ಮುನವಳ್ಳಿಃ ಸಮೀಪದ ಹೂಲಿಕಟ್ಟಿ ಸಿ.ಆರ್.ಸಿ ಯ ಸಂಪನ್ಮೂಲ ವ್ಯಕ್ತಿಯಾದ ಎಸ್.ಸಿ.ಕುರಿ ಇವರ ಸುಪುತ್ರ ವಿಶಾಲ್ ಕುರಿ ಈತನು ೨೦೨೧-೨೨ ನೇ ಸಾಲಿನ ನೀಟ್ ಪರೀಕ್ಷೆಯಲ್ಲಿ ೫೮೦ ಅಂಕಗಳನ್ನು ಪಡೆದು ಎಂ.ಬಿ.ಬಿ.ಎಸ್. ವ್ಯಾಸಂಗಕ್ಕೆ ಸರಕಾರಿ ಕೋಟಾದಡಿ ರಾಜ್ಯದ ಪ್ರತಿಷ್ಠಿತ ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ ಒಂದಾದ ಶಿವಮೊಗ್ಗ (ಸಿಮ್ಸ) ವೈದ್ಯಕೀಯ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವನು. ಕಳೆದ ವರ್ಷ ಪ್ರಯತ್ನಿಸಿದ ಇವನು ಸೀಟು ಸಿಗದೇ ನಿರಾಶನಾಗದೇ ಸತತ ಓದಿನ ಮೂಲಕ ತನ್ನ ವೈದ್ಯಕೀಯ ವ್ಯಾಸಾಂಗದ ಕನಸನ್ನು ಈ ವರ್ಷ ನನಸು ಮಾಡಿಕೊಂಡಿರುವನು., ಇವನ ಈ ಸಾಧನೆಗೆ ಸವದತ್ತಿ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಅರ್ಜುನ ಕಂಬೋಗಿ.ಕ್ಷೇತ್ರ ಸಮನ್ವಯಾಧಿಕಾರಿಗಳಾದ ಎಂ.ಬಿ.ಬಳಿಗಾರ.ಹಾಗೂ ಎಲ್ಲಾ ಬಿ.ಆರ್.ಪಿ.ವಿಕಲಚೇತನ ಸಂಪನ್ಮೂಲ ಶಿಕ್ಷಕರು ಮತ್ತು ಸಿ.ಆರ್.ಪಿಯವರು. ಸವದತ್ತಿ ತಾಲೂಕಿನ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ಎಚ್.ಆರ್.ಪೆಟ್ಲೂರ.ಹಾಗೂ ಪದಾಧಿಕಾರಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕದ ಅಧ್ಯಕ್ಷರಾದ ಡಾ.ವೈ.ಎಂ.ಯಾಕೊಳ್ಳಿ.ಅಕ್ಷರದಾಸೋಹ ಸಹಾಯಕ ನಿರ್ದೇಶಕರಾದ ಸಿ.ವೈ.ತುಬಾಕಿ. ಮೊದಲಾದವರು ಅಭಿನಂದಿಸಿದ್ದಾರೆ.
Latest News
ಕವನ : ಪ್ರೀತಿಸಿದ ತಪ್ಪಿಗೆ
ಪ್ರೀತಿಸಿದ ತಪ್ಪಿಗೆ...
ಇಂದು ಈ ಮುಸ್ಸಂಜೆಯಲಿ....
ಯಾರೋ ಎಲ್ಲೋ
ಪ್ರೀತಿಸುವ ಹೃದಯಕೆ
ನೋವುಣಿಸಿರಬೇಕು...
ಅಕಾಲದಲ್ಲಿ ಆಕಾಶ
ಆರ್ಭಟಿಸಿ ಭೋರ್ಗರೆದು
ಹೀಗೆ ಸುರಿಯಬೇಕಾದರೆ...
ಸದ್ದಿಲ್ಲದೇ ಒಡೆದ
ಎದೆ ತುಣುಕುಗಳು
ಮುಗಿಲಲಿ ಶೋಕಗೀತೆ
ನುಡಿಸುತಿವೆ....ಯಾರೋ ಎಲ್ಲೋ
ಹೂವಂತ ಮನಸನು
ಮಾತಿನ ಮುಳ್ಳುಗಳಿಂದ
ಚುಚ್ಚಿ ನೋಯಿಸಿರಬೇಕು...
ಹೆಪ್ಪುಗಟ್ಟಿದ ದುಃಖ
ಕಪ್ಪು ಮೋಡದ ಒಡಲ
ಬಗೆದು...

