ಬೀದರ – ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಅವರು ಬನಾಯೇಂಗೆ ಮಂದಿರ್ವೆಂಬ ಹಾಡಿಗೆ ಸಕತ್ ಮೈ ಮರೆತು ಹೆಜ್ಜೆ ಹಾಕಿರುವ ವಿಡಿಯೋ ಈಗ ಪುಲ್ ಚರ್ಚೆಯಲ್ಲಿ ಇದೆ.
ಜಿಲ್ಲೆಯ ಕಮಲನಗರ ತಾಲೂಕಿನ ಮುರ್ಕಿ ಗ್ರಾಮದಲ್ಲಿ ಸಂತ ಸೇವಾಲಾಲ್ ಮಹಾರಾಜರ ಮೂರ್ತಿ ಸ್ಥಾಪನೆ ನಿಮಿತ್ತ ಮೆರವಣಿಗೆಯಲ್ಲಿ ಬಂದ ಸಚಿವ ಪ್ರಭು ಚವ್ಹಾಣ ಅವರು ಬಂಜಾರಾ ಸಾಂಪ್ರದಾಯಿಕ ಉಡುಗೆ ತೊಟ್ಟು ಸಕತ್ ಸ್ಟೇಪ್ ಹಾಕಿದರು.
ಸಚಿವರೊಂದಿಗೆ ಸ್ಥಳೀಯ ಮಹಿಳೆಯರು, ಬೆಂಬಲಿಗರು ಮೈ ಮರೆತು ಕುಣಿದು ಕುಪ್ಪಳಿಸಿದ್ದಾರೆ. ಸಚಿವರ ಡಾನ್ಸ್ ವೀಡಿಯೋ ವೈರಲ್ ಆಗಿದ್ದು ಸಮಾರಂಭಕ್ಕೆ ಹೊಸ ಮೆರುಗು ತಂದು ಕೊಟ್ಟಿದೆ.