- Advertisement -
ಸಿಂದಗಿ: ಪಟ್ಟಣದ ವಾರ್ಡ್ 13ರಲ್ಲಿರುವ ಪಕ್ಷದ ಕಾರ್ಯಕರ್ತ ಶಿವಾನಂದ ರೂಡಗಿ ಅವರ ಮನೆಯ ಮೇಲೆ ಧ್ವಜವನ್ನು ಹಾರಿಸುವ ಮೂಲಕ ಬಿಜೆಪಿ ಸಂಸ್ಥಾಪನಾ ದಿನವನ್ನು ಆಚರಿಸಿ ಸಿಹಿ ಹಂಚಿ ಸಂಭ್ರಮಿಸಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಈರಣ್ಣ ರಾವೂರ ಹಾಗೂ ಮಂಡಲ ಪ್ರಭಾರಿ ಚಿದಾನಂದ್ ಚಲವಾದಿ ಹಾಗೂ ಶಾಸಕ ರಮೇಶ್ ಭೂಸನೂರ್ ಹಾಗೂ ರಾಜ್ಯ ಲಿಂಬೆ ಅಭಿವೃದ್ಧಿ ಅಧ್ಯಕ್ಷ ಅಶೋಕ್ ಅಲ್ಲಾಪುರ್, ರವಿಕಾಂತ ನಾಯ್ಕೋಡಿ, ಸುರೇಶ್ ಮಳಲಿ, ಗುರು ತಳವಾರ್, ಬಿ.ಎಚ್.ಬಿರಾದಾರ, ಶ್ರೀಶೈಲ ಗೌಡ ಬಿರಾದಾರ, ಮಲ್ಲು ಪೂಜಾರಿ, ರಾಜಕುಮಾರ ಗೌಂಡಿ, ಅರವಿಂದ್ ಹಡಗಲಿ, ಪ್ರಮುಖ ಶಿವಕುಮಾರ್ ಬಿರಾದಾರ, ಸೇರಿದಂತೆ ಹಲವರು ಉಪಸ್ಥಿತರಿದ್ದರು.