ಸಿಂದಗಿ: ಪಟ್ಟಣದ ವಿದ್ಯಾನಗರ ಒಂದನೆಯ ಕ್ರಾಸ್ ನಲ್ಲಿ ಹನುಮಾನ ಜಯಂತಿ ಮಾಡಲಾಗುವುದು. ಈ ವೇಳೆ ಹಲವಾರು ಕಾರ್ಯಕ್ರಮ ಜರುಗಲಿದ್ದು ಈ ಕಾರ್ಯಕ್ರಮದಲ್ಲಿ ಪಂಚಾಮೃತ ಪಾದ ಪೂಜೆ ನಡೆಯಲಿದ್ದು ವಿವಿಧ ಪ್ರಕಾರದ ವಾದ್ಯಗಳಿಂದ ವಿಜೃಂಭಣೆಯಿಂದ ಪೂಜೆ ನಡೆಯುವುದು ಕಾರಣ ಈ ಕಾರ್ಯಕ್ರಮದಲ್ಲಿ ಭಕ್ತಾದಿಗಳು ಬಾಗವಹಿಸಬೇಕು ಎಂದು ದೇವಸ್ಥಾನದ ಸಮಿತಿ ತಿಳಿಸಿದ್ದಾರೆ.
ಈ ಪೂಜಾ ಕಾರ್ಯಕ್ರಮದಲ್ಲಿ ಅನೀಲ್ಗೌಡ ಬಿರಾದಾರ, ಕೆ. ವಿ. ಕುಲಕರ್ಣಿ ಡಾ. ಗಿರೀಶ್ ಕುಲಕರ್ಣಿ, ಡಾ, ದತ್ತು ಕುಲಕರ್ಣಿ, ಉಪ್ಪಿನ ಸಾಹುಕಾರ, ಕಾಜಪಟೇಲ ಬಿರಾದಾರ, ಎಸ. ಎನ್. ಬಿರಾದಾರ, ಗುರುಗೌಡ ಪಾಟೀಲ, ಬಿ. ಜಿ ಬಿರಾದಾರ, ಮಹೇಶ್ ಹೂಗಾರ, ಸಿದ್ದಬಸವ ಕುಂಬಾರ, ಚಂದ್ರಶೇಖರ ಅಮಲಿಹಾಳ, ಭೀಮನಗೌಡ್ರು, ಗುರು ದಶವಂತ ಸೇರಿದಂತೆ ಹಲವರ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ಜರುಗುವುದು ಕಾರಣ ಭಕ್ತಾದಿಗಳು ಹೆಚ್ಚಿನ ಸಂಖ್ಯೆ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗುವಂತೆ ಪತ್ರಿಕಾಪ್ರಕಟಣೆಯಲ್ಲಿ ವಿನಂತಿಸಿಕೊಂಡಿದ್ದಾರೆ.