ಅಂಡಮಾನ್ ಜೈಲಿಗೆ ಭೇಟಿ ನೀಡಿದ ಸಂಸದ ಈರಣ್ಣ ಕಡಾಡಿ

Must Read

ಬೆಂಗಳೂರು – ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಇಂದು ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರಿಗೆ ಸಿಂಹ ಸ್ವಪ್ನರಾಗಿದ್ದ ವೀರ ಸಾವರ್ಕರ್ ಸೇರಿದಂತೆ ಸಹಸ್ರಾರು ಸ್ವಾತಂತ್ರ್ಯ ಹೋರಾಟಗಾರರನ್ನು ಬಂಧಿಸಿಟ್ಟಿದ್ದ ಅಂಡಮಾನಿನ್ ಸೆಲ್ಯುಲಾರ್ ಜೈಲಿಗೆ ಭೇಟಿ ನೀಡಿದರು.

ಬ್ರಿಟೀಷರು ಭಾರತೀಯ ಜನರಿಂದಲೇ ಜೈಲು ನಿರ್ಮಿಸಿದ್ಧರು. ಭಾರತೀಯರನ್ನೇ ಬಂಧಿಸುತ್ತಿದ್ದರು, ಭಾರತೀಯ ಜನರಿಂದಲೇ ಖೈದಿಗಳನ್ನು ಹೊಡೆಸುತ್ತಿದ್ದರು ಇದೆಂಥ ವಿಪರ್ಯಾಸ.

ಖೈದಿಗಳ ಯಾತನೆಯ ಬದುಕು ನೆನೆದು ಮತ್ತು ಹಗ್ಗಕ್ಕೆ ಚುಂಬಿಸಿ ನಗು ನಗುತ್ತಾ ಪ್ರಾಣ ತ್ಯಾಗ ಮಾಡಿದ ಹಲವು ಯುವ ಸ್ವಾತಂತ್ರ್ಯ ಸೇನಾನಿಗಳ ನೆನೆದು ಕಣ್ಣುಗಳು ತುಂಬಿ ಬಂದವು, ಮನಸ್ಸು ಭಾರವಾಯಿತು ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಅಂದು ಬ್ರಿಟಿಷರ ಎದುರು ಹೋರಾಟ ಮಾಡಿ ಬಲಿದಾನಗೈದ ಆ ಎಲ್ಲ ವೀರರ ಬಲಿದಾನ ವ್ಯರ್ಥವಾಗದಂತೆ ಮಾಡುವ ಗುರುತರ ಹೊಣೆ ನಮ್ಮೆಲ್ಲರ ಮೇಲಿದೆ ಎಂಬುದನ್ನು ಮತ್ತೊಮ್ಮೆ ನೆನಪಿಸಿಕೊಳ್ಳೋಣ ಎಂದು ಕಡಾಡಿ ಹೇಳಿದರು.

Latest News

ಕವನ : ಅನುಬಂಧ

ಅನುಬಂಧಕಾಣದ ದಾರಿಯಲ್ಲಿ ಬೆಸೆದ ನಂಟು, ಹೆಸರಿಲ್ಲದಿದ್ದರೂ ಹೃದಯಕ್ಕೆ ಪರಿಚಿತವಾದ ಬಂಧ… ಕಾಲದ ಹೊಳೆ ಹರಿದರೂ ಕಳೆಯದ ಗುರುತು, ಗಂಟು ಅದು ಅನುಬಂಧ. ಮೌನದಲ್ಲೂ ಮಾತಾಡುವ ಸಂಬಂಧ, ಬಂಧ.. ಕಣ್ಣಂಚಿನ ನೀರನ್ನೂ ಓದುತ್ತದೆ ಒರೆಸುತ್ತದೆ. ಹೃದಯ ಮುರಿದು ನೊಂದ ಕ್ಷಣದಲ್ಲಿ ಅದೃಶ್ಯವಾಗಿ ಕೈ ಹಿಡಿದುಕೊಳ್ಳುತ್ತದೆ. ಮಣ್ಣಿನ ವಾಸನೆಯಂತೆ ಸಹಜ, ಬೆಳಗಿನ ಬೆಳಕಿನಂತೆ ಮೃದುವು. ನಗುವಿನಲ್ಲೂ,...

More Articles Like This

error: Content is protected !!
Join WhatsApp Group