ಭಾರೀ ಮಳೆಗೆ ತಂಪಾದ ಬೀದರ

Must Read

ಬೀದರ – ಭಾರೀ ಬಿಸಿಲಿನಿಂದ ತತ್ತರಿಸಿದ್ದ ಗಡಿ ಜಿಲ್ಲೆ ಬೀದರಿನ ಭಾಲ್ಕಿ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಇಂದು ಧಾರಾಕಾರ ಮಳೆ ಸುರಿದು ವಾತಾವರಣವನ್ನು ತಂಪಾಗಿಸಿತು.

ಇದರಿಂದ ಕೊಂಚಮಟ್ಟಿಗೆ ಜನರಿಗೆ ಸೆಕೆಯಿಂದ ಬಿಡುಗಡೆ ಸಿಕ್ಕಂತಾಯಿತು. ಭಾಲ್ಕಿ ತಾಲ್ಲೂಕಿನ ಕಟಕಚಿಂಚೊಳಿ ಗ್ರಾಮದ ಜನರು ಹಲವು ದಿನಗಳ ಬಿರು ಬಿಸಿಲಿನ ತಾಪದಿಂದ ಮುಕ್ತರಾದಂತಾಗಿ ನಿಟ್ಟುಸಿರು ಬಿಟ್ಟರು.

ಜಿಲ್ಲೆಯಲ್ಲಿ ಸಿಡಿಲು, ಗುಡುಗಿನಿಂದ ಕೂಡಿದ, ಬಿರುಗಾಳಿ ಸಹಿತ ಭಾರಿ ಮಳೆಯು ಸುಮಾರು ಒಂದು ಗಂಟೆ ಕಾಲ ಸುರಿಯಿತು. ಭಾಲ್ಕಿ ತಾಲೂಕಿನ ವಿವಿಧೆಡೆ ಕೂಡ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಏಕಾಏಕಿ ವಾತಾವರಣದಲ್ಲಿ ತಂಪು ತುಂಬಿತು.

ಕಳೆದ ಕೆಲವು ದಿನಗಳಿಂದ ಬೀದರ ಜಿಲ್ಲೆಯು ಬಿರು ಬಿಸಿಲುನಿಂದ ಕಂಗೆಟ್ಟು ಹೋಗಿತ್ತು. ಸುಮಾರು ೪೫ ಡಿಗ್ರಿಯಷ್ಟು ಬಿಸಿಲಿನ ತಾಪಮಾನ ಜನತೆ ತತ್ತರಗೊಳ್ಳುವಂತೆ ಮಾಡಿತ್ತು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group