ಕವನ: ಮರೆಯಲಾಗದ ಮಹಾನುಭಾವರು

Must Read

ಮರೆಯಲಾಗದ ಮಹಾನುಭಾವರು

ಬದುಕಿನ ಭವಣೆಯ ಮೀರಿ ನಿಂತ
ಮಹಾನುಭಾವ ತಲ್ಲೂರ ರಾಯನಗೌಡರ
ನೆನಪು ಮತ್ತೆ ಮತ್ತೆ ಬರುತಿದೆ
ಸ್ವಾತಂತ್ರ್ಯ ಸಮಾಜವಾದಿಗಳ ನೆನಪಿನೊಳಗೆ

ಚಿತ್ತಿ ನಕ್ಷತ್ರ ನಾಲ್ಕನೆಯ ಚರಣ
ಪೆಬ್ರುವರಿ ೨೮. ೧೯೨೦
ಧರೆಯೊಳು ತಲ್ಲೂರ ಗ್ರಾಮದ
ಶರಣ ದಂಪತಿ ಲಿಂಗನಗೌಡ-ಬಸಮ್ಮ
ಉದರದೊಳು ಮೂಡಿದ ನಕ್ಷತ್ರವಿದು

ಬಾಲ್ಯದೊಳು ತಾಯಿಯ ಅಗಲಿಕೆಯ
ನೋವು ಉಂಡು ಅಜ್ಜಿಯ ಆಶ್ರಯದಿ
ಬೆಳೆಯುತಲಿ ಶಿಕ್ಷಣ ಪಡೆಯಿತು
ಸ್ವಾತಂತ್ರ್ಯ ದಿನಗಳಲಿ
ಮಹಾತ್ಮಾ ಗಾಂಧೀಜಿಯವರ ಪ್ರಭಾವ ವಲಯದಿ

ಉಕ್ಕುವ ಸ್ವಾತಂತ್ರ್ಯ ಹೋರಾಟದ ಕಿಚ್ಚು
ಎಲ್.ಎಲ್.ಬಿ.ಕಲಿಕೆಯ ತಿಲಾಂಜಲಿ
ದುಮ್ಮಿಕ್ಕಿ ಸ್ವಾತಂತ್ರ್ಯ ಹೋರಾಟದೊಳು
ತಲೆಮರೆಸಿಕೊಂಡು ಕುರುಬನ ವೇಷದೊಳು
ಕುಟುಂಬದ ಸಂಪರ್ಕ ಸಾಧಿಸುತ

ಬ್ರಿಟಿಷರಿಗೆ ಸಿಂಹಸ್ವಪ್ನವಾಗುತ
ಜನರ ಮನದಲಿ ಬೇರೂರಿ
ಗುಡ್ಡಗಾಡುಗಳಲಿ ತಂಡದೊಡನೆ
ತಿರುಗುತಲಿ ಮೊಳಗಿಸುತ ಸ್ವಾತಂತ್ರ್ಯ ದ ಕಿಚ್ಚು
ದೇಸಗತಿಗಳ ವಿರುದ್ದ ಬೋರ್ಗರೆದ ರಾಯನಗೌಡ

ಕಷ್ಟ ಸುಖಗಳ ನಡುವೆ
ಸ್ವಾತಂತ್ರ್ಯದ ಹೋರಾಟದೊಳು
ಜೈಲು ಸೇರಿತು ಹೋರಾಟದ ಜೀವ
ಸ್ವಾತಂತ್ರ್ಯ ಪಡೆಯುತ ಮರಳಿತು
ಸುಮ್ಮನೇ ಕೂರದ ಮನಸು ಹೊರಳಿತು
ಕಿತ್ತೂರ ಇತಿಹಾಸದೆಡೆಗೆ

ಬೈಲಹೊಂಗಲದೊಳು ಉದಯಿಸಿತು
ಕಿತ್ತೂರ ರಾಣಿ ಚನ್ನಮ್ಮ ವಿಶ್ವಸ್ಥ ಮಂಡಲ
ಹುಡುಕಿ ತಗೆಯಿತು ಸಂಶೋಧಕನ ತೆರದಿ
ಕಿತ್ತೂರ ಇತಿಹಾಸ ಸಾಗರದಾಚೆಗೂ ಪಯಣಿಸಿ
ಭಾರತಕೆ ತಂದಿತು ಕಿತ್ತೂರ ಶೋಧ

ಬಹುಮುಖ ವ್ಯಕ್ತಿತ್ವದ ರಾಯನಗೌಡ
ಸಮಾಜಮುಖಿಯಾಗಿ ರಾಜಕೀಯದೊಳು
ಆಸಕ್ತಿ ಬೆಳೆಸುತಲಿ ಚುನಾವಣೆಯ ಹೊಸ್ತಿಲು
ತುಳಿಯುತ ಪರಾಜಯ ಕಾಣುತ
ಜನಪದ ಸಾಹಿತ್ಯದೊಳು ಕಂಡಿತು ಹೊಸ ಬೆಳಕು

ದೇಶಗತಿ ಊರಿನ ಜನನಾಯಕ
ವಿವಿಧ ಸಂಘ ಸಂಸ್ಥೆಗಳ ಅಧಿಪತಿ
ಸಮಾಜಮುಖಿ ಸೇವೆಗೈಯುತ
ಕರ್ನಾಟಕ ಏಕೀಕರಣದ ಕಿಚ್ಚಿನಲಿ
ಪಾ.ಪು.ರವರ ಒಡನಾಟದೊಳು
ಏಕೀಕರಣದೊಳು ನೀಡುತ ಕೊಡುಗೆಯ

ಜನಪರ ಪ್ರಗತಿಗೆ ಹಗಲಿರುಳು
ಸೇವೆಗೈಯುತಲಿ ರೈತರ ಕಣ್ಮಣಿ
ಬಿಚ್ಚು ಮಾತಿನ ಬಂಟ.ಮಡದಿ ಬಸಮ್ಮಳ ಹೃದಯವಂತ
ಮರೆಯಲಾಗದ ಮಹಾನುಭಾವ ನಮ್ಮ ರಾಯನಗೌಡರು
ಕಿತ್ತೂರು ನಾಡಿಗೆ ಹೊಸ ಅಧ್ಯಾಯ
ದೊರಕಿಸಿದ ಮಹಾನುಭಾವರಾಗಿರುವಿರಿ

ಅರಿಯದಾಯಿತು ಈ ನಾಡು
ತಮ್ಮ ಸೇವೆಗಳ ಕುರುಹುಗಳ
ಜೀವಿತದ ಕೊನೆಯ ಅವಧಿಗಳು
ಗುರುತಿಸದ ಜ್ಞಾನ ಪ್ರಭೆ ಮಂಕಾದ ಹೃದಯ
ನಕ್ಷತ್ರದ ತೆರೆದಿ ಲೀನವಾಯಿತು
ಸ್ಮರಣೆಗಳ ಲೋಕದಲಿ ನಮ್ಮನ್ನೆಲ್ಲ ಅಗಲಿ.


ವೈ.ಬಿ.ಕಡಕೋಳ
ಮುನವಳ್ಳಿ
೯೪೪೯೫೧೮೪೦೦.
೮೯೭೧೧೧೭೪೪೨

Latest News

ಕವನ : ಬೆಳಕಿನ ದೀಪಾವಳಿ

ಬೆಳಕಿನ ದೀಪಾವಳಿ ಬೆಳಕು ಸರಿದು ನೇಸರನ ಅಸ್ತದೊಡನೆ ಜಗಕೆ ಜಗಮಗಿಸುವ ದೀಪಗಳ ದರ್ಶನ ಬಾನಂಚಿನಲಿ ಶಬ್ದಗಳ ನಡುವೆ ಬೆಳಕಿನ ಚಿತ್ತಾರ ಮೂಡಿಸುವ ಹಬ್ಬ ಬೆಳಕಿನ ದೀಪಾವಳಿತಮವ ಕಳೆದು ಜ್ಯೋತಿ ಬೆಳಗುವ ನಾಡಿನಪವಿತ್ರ ಹಬ್ಬ ತಳಿರು ತೋರಣ ಕಟ್ಟಿ ಮನೆಯನು ಸಿಂಗರಿಸಿ ಹಬ್ಬದಡುಗೆಯ ಸವಿಯುಣ್ಣುವ ಮನದ ಖುಷಿಯ...

More Articles Like This

error: Content is protected !!
Join WhatsApp Group