Homeಸುದ್ದಿಗಳುಈ ದೇಶ ಅಂಬೇಡ್ಕರ ಅವರದ್ದು - ಓವೈಸಿ

ಈ ದೇಶ ಅಂಬೇಡ್ಕರ ಅವರದ್ದು – ಓವೈಸಿ

ಬೀದರ – ಈ ಭಾರತ ದೇಶ ಬಾಬಾಸಾಹೇಬ ಅಂಬೇಡ್ಕರ ಅವರದ್ದು ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಆದರೆ ಇಲ್ಲಿ ನಿಜವಾಗಲೂ ರಕ್ತ ಹರಿಸಿದವರು ಝೀರೋ ಆಗಿದ್ದಾರೆ ರಕ್ತ ಹರಿಸದವರು ಹೀರೋ ಆಗಿದ್ದಾರೆ ಎಂದು ಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಹೇಳಿದರು.

ಜಿಲ್ಲೆಯ ಹುಮನಾಬಾದ ನಗರದಲ್ಲಿ ಜಲಸಾ ರಹಮತುಲ್ ಅಲ್ ಅಮೀನ್ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಆರ್ ಎಸ್ ಎಸ್ ಮತ್ತು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ಭಾರತ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ ಮಹಾನ್ ವ್ಯಕ್ತಿ ಮಹಮದ್ ಹಸಾನಿಯಿಂದ. ಈ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ ಮೇಲೆ 1925 ನಂತರ ಬಂದಿದ್ದ ಇವರು ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ಮಹಾನ್ ವ್ಯಕ್ತಿ ನೆನಪು ಮಾಡಿ, ಯಾರು ರಕ್ತ ಹರಿಸಿದರೋ ಅವರು ಜೀರೋ ಆದರು ಯಾರು ರಕ್ತ ಹರಸಿಲ್ಲ ಅವರು ಹೀರೊ ಆದರು ಎಂದು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಓವೈಸಿ, ನೀವು ಮುಸ್ಲಿಮರಿಗೆ ಮೀಸಲಾತಿ ಕೊಡುವುದು ಬಿಡಿ ಆದರೆ 40 ಪರ್ಸೆಂಟ್ ಕಮಿಷನ್ ತಿನ್ನಬೇಡಿ ಎಂದರು.

ದೆಹಲಿಯಲ್ಲಿ ಕೂತ ಪ್ರಧಾನಿ ನರೇಂದ್ರ ಮೋದಿ ಹೇಳುತ್ತಾರೆ ನಾನೂ ತಿನ್ನಲ್ಲ ತಿನ್ನೋದಕ್ಕೂ ಬಿಡಲ್ಲ ಎಂದು.ಆದರೆ ಇಲ್ಲಿ ಬಿಜೆಪಿ ನಾಯಕರು ಇನ್ನೂ ಇನ್ನೂ ಬೇಕು ಎನ್ನುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಆರ್ ಎಸ್ ಎಸ್ ಹೇಳುವಂತೆ ನಾವು ಮಕ್ಕಳನ್ನು ಹೆಚ್ಚು ಹುಟ್ಟಿಸುವುದಿಲ್ಲ ಎಂದು ಓವೈಸಿ ನುಡಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group