Homeಸುದ್ದಿಗಳುಪ್ರಿಯಾಂಕ ಖರ್ಗೆಗೆ ಜೀವಬೆದರಿಕೆ ; ಖಂಡನೆ

ಪ್ರಿಯಾಂಕ ಖರ್ಗೆಗೆ ಜೀವಬೆದರಿಕೆ ; ಖಂಡನೆ

ಸಿಂದಗಿ: ಕಲಬುರ್ಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದ ಶಾಸಕ ಪ್ರಿಯಾಂಕ ಖರ್ಗೆ ಅವರಿಗೆ ಜೀವಬೆದರಿಕೆ ಹಾಕಿರುವ  ಮಣಿಕಂಠ ರಾಠೋಡ ಅವರ ಧೋರಣೆಯನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಸಂಚಾಲಕ ಪರಶುರಾಮ ಕಾಂಬಳೆ ಉಗ್ರವಾಗಿ ಖಂಡಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, 50 ವರ್ಷಗಳ ಸತತ ರಾಜಕಾರಣ ಮನೆತನದ ರಾಜಕಾರಣಿಯಾದ ಪ್ರಿಯಾಂಕ ಖರ್ಗೆಯವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಿ ಹಗಲಿನಲ್ಲಿ ಗುಂಡು ಹಾರಿಸುತ್ತೇನೆ ಎಂದು ಹೇಳಿಕೆ ನೀಡಿದ ಮಣಿಕಂಠನನ್ನು ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳು ನಿರ್ಲಕ್ಷ್ಯ ಮಾಡಿದ್ದು ಈ ಅಧಿಕಾರಿಯ ಧೋರಣೆಯನ್ನು ಈ ಸಂದರ್ಭದಲ್ಲಿ ಖಂಡಿಸುತ್ತೇವೆ. ಇಂತಹ ಹೇಳಿಕೆಗೆ ಸರ್ಕಾರ ತೆರೆಮರೆಯಲ್ಲಿ ಪ್ರಚೋದನೆ ನೀಡುತ್ತಿರುವುದು ಕಂಡುಬರುತ್ತದೆ. ಯಾಕೆಂದರೆ ಇವರನ್ನು  ಗಡಿಪಾರು ಮಾಡಿದ್ದರೂ ಕೂಡಾ ಸರ್ಕಾರದ ನೆರವಿನಿಂದ ಗಡಿಪಾರು ಆದೇಶ ವಾಪಸ್ ಮಾಡಿದ್ದಾರೆ.

ಕೋಮುವಾದ, ಜಾತಿವಾದ ಇಂತಹ ವ್ಯಕ್ತಿಗಳಿಂದ ಮಾಡಿಸುತ್ತಿರುವದು ಕೈಗನ್ನಡಿಯಾಗಿದೆ. ಆದ್ದರಿಂದ ಸರ್ಕಾರ ಎಚ್ಚೆತ್ತುಗೊಂಡು ಇವರ ಮೇಲೆ ಕಠಿಣ ಕ್ರಮ ಜರುಗಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ನಾಗವಾರ ಬಣ) ಆಗ್ರಹಿಸುವುದಾಗಿ ತಿಳಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group