Homeಸುದ್ದಿಗಳುಜೆಡಿಎಸ್ ಪಕ್ಷದ ನಿಂದ ನಗರಸಭೆಗೆ ಮುತ್ತಿಗೆಗೆ ಯತ್ನ

ಜೆಡಿಎಸ್ ಪಕ್ಷದ ನಿಂದ ನಗರಸಭೆಗೆ ಮುತ್ತಿಗೆಗೆ ಯತ್ನ

ಬೀದರ – ನಗರ ಸಭೆಯ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆ ಮಾಡದ ಹಿನ್ನೆಲೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಸೋಲಪೂರೆ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರಿಂದ ನಗರ ಸಭೆ ಮುತ್ತಿಗೆಗೆ ಯತ್ನ ನಡೆಯಿತು.

1 ವರ್ಷ 6 ತಿಂಗಳಾದರೂ ನಗರ ಸಭೆಗೆ ಅಧ್ಯಕ್ಷ – ಉಪಾಧ್ಯಕ್ಷರನ್ನು ಆಯ್ಕೆ ‌ಮಾಡದ್ದಕ್ಕೆ ಬೃಹತ್ ಪ್ರತಿಭಟನಾ ರ್ಯಾಲಿ ಹಮ್ಮಿಕೊಂಡ ಜೆಡಿಎಸ್ ಕಾರ್ಯಕರ್ತರು ಕಚೇರಿಯಿಂದ ವಿವಿಧ ವೃತ್ತಗಳ ಮೂಲಕ ನಗರಸಭೆ ವರೆಗೆ ಬೃಹತ್ ಪ್ರತಿಭಟನೆ‌‌‌ ನಡೆಸಿದರು.

ನಗರಸಭೆ ಕಚೇರಿಗೆ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿದ್ದರೂ ಬಿಉಗ ಹಾಕಲು ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು.


ವರದಿ: ನಂದಕುಮಾರ ಕರಂಜೆ, ಬೀದರ

RELATED ARTICLES

Most Popular

error: Content is protected !!
Join WhatsApp Group