ರಬಕವಿ -ಬನಹಟ್ಟಿಯ ನಾಗರಿಕರ ಸಭೆ

Must Read

ದಿನಾಂಕ 27 – 11- 2022 ರವಿವಾರ ದಿವಸ ಮುಂಜಾನೆ ಹನ್ನೊಂದು ಗಂಟೆಗೆ ರಬಕವಿಯಲ್ಲಿ , ಶ್ರೀ ಮಲ್ಲಿಕಾರ್ಜುನ ಸಮುದಾಯ ಭವನದಲ್ಲಿ ರಬಕವಿ – ಬನಹಟ್ಟಿಯ ಎಲ್ಲಾ ಸಂಘ ಸಂಸ್ಥೆಗಳ ಮುಖಂಡರ, ಮಹಿಳಾ ಸಂಘಟನೆಗಳ ಸಹೋದರಿಯರ ಸಭೆಯನ್ನು ಡಾಕ್ಟರ್ ರವಿ ಜಮಖಂಡಿ ಅವರ ನೇತೃತ್ವದಲ್ಲಿ ಕರೆಯಲಾಗಿದೆ.

ಸಭೆಯಲ್ಲಿ ಕುಡಚಿ- ಬಾಗಲಕೋಟ ರೈಲು ಮಾರ್ಗದ ಯೋಜನೆಯ ಬಗ್ಗೆ ಮೂಲತಃ ಮುಧೋಳದವರೆ ಆಗಿರುವ , ರೈಲ್ವೇ ಇಲಾಖೆಯ ಮಧ್ಯ ರೇಲ್ವೆಯ ಮುಂಬೈ ಡೊಂಬಿವಲಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇತ್ತೀಚೆಗೆ ನಿವೃತ್ತರಾಗಿರುವ ಗುರುರಾಜ ಪೋತನೀಸ್ ಅವರು ಎಲ್ಲರನ್ನು ಉದ್ದೇಶಿಸಿ ಮಾತನಾಡುವವರಿದ್ದಾರೆ.

ಸದರಿ ಸಭೆಯಲ್ಲಿ ದಯವಿಟ್ಟು ಎಲ್ಲರೂ ಭಾಗವಹಿಸಿ , ಕುಡಚಿ -ಬಾಗಲಕೋಟ ರೈಲು ಯೋಜನೆ ಜಾರಿಗೆ ಒತ್ತಾಯಿಸಿ ಹೋರಾಟ ಮಾಡುವ ಕುರಿತು ಚಿಂತನೆ ಮಾಡಬೇಕಾಗಿದೆ. ಕಾರಣ ಎಲ್ಲರೂ ಭಾಗವಹಿಸಬೇಕೆಂದು ಹಿರಿಯ ಪತ್ರಕರ್ತ ನೀಲಕಂಠ ದಾತಾರ ವಿನಂತಿಸಿಕೊಂಡಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group