ಡಿ.28ಕ್ಕೆ  ಡಾ.ಲೀಲಾ ಬಸವರಾಜು ಅಭಿನಯಿಸುವ  ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’ಯ ಪ್ರದರ್ಶನ

Must Read

ಸ್ತ್ರೀಯ ಸೀಮಿತತೆಯೊಳಗೆ ಬಂದಿಯಾಗಿಸುವ ಕುಟುಂಬ , ಸಮಾಜದ ನಡುವೆಯೂ ಅವಳು ತನ್ನೊಳಗನ್ನು ಕಂಡುಕೊಳ್ಳಬೇಕೆನ್ನುವ ಹಿರಿಯ ರಂಗಭೂಮಿ ಕಲಾವಿದೆ ಡಾ.ಲೀಲಾ ಬಸವರಾಜು ಅಭಿನಯಿಸುವ  ಏಕವ್ಯಕ್ತಿ ಪ್ರಯೋಗ ‘ಅವ್ವರಸಿ’  ಯಶಸ್ವಿ ಪ್ರದರ್ಶನದ ನಂತರ ಇದೀಗ ಮತ್ತೊಂದು ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.

ಮಹಿಳಾ ಸಬಲೀಕರಣಕ್ಕೆ ಎರಡು ಶತಮಾನದ ಹಿಂದೆಯೇ ಪೋರ್ಚಗೀಸರ ವಿರುದ್ದ ಹೋರಾಡಿದ ವೀರ ವನಿತೆ ರಾಣಿ ಚೆನ್ನಭೈರಾದೇವಿ ಯ ಜೀವನ ಕಥಾನಕವೇ ಬಲುರೋಚಕ. ದಕ್ಷಿಣ ಕೊಂಕಣ ಹಾಗೂ ಮಲೆನಾಡನ್ನು 54 ವರ್ಷಗಳವರೆಗೂ ಆಳಿದ ಚೆನ್ನಭೈರಾದೇವಿ, ಕರಿಮೆಣಸಿನ ರಾಣಿಯ ಅಕಳಂಕ ಚರಿತೆಯನ್ನು ಡಾ. ಗಜಾನನ ಶರ್ಮ ಅವರು ಕಾದಂಬರಿ ರೂಪದಲ್ಲಿ ಬರೆದ ಈ ಕೃತಿ. ರಾಜನೀತಿ, ಜೀವನ ವಿಧಾನ, ಧೀಮಂತಿಕೆ, ಉತ್ಕಟವಾದ ಪ್ರೇಮ ಮತ್ತು ಹೆಣ್ಣಿನ ಅಂತಃಸತ್ವವನ್ನು ತೆರೆದಿಡುವ ಮೂಲಕ ಕನ್ನಡ ಚಾರಿತ್ರಿಕ ಕಥನಗಳ ಪಟ್ಟಿಗೆ ಅಮೂಲ್ಯ ಸೇರ್ಪಡೆ. 450 ಪುಟಗಳ  ಬೃಹತ್  ಐತಿಹಾಸಿಕ ಕಾದಂಬರಿಯ ಆಯ್ದ ಭಾಗಗಳನ್ನು ರಂಗರೂಪಾಂತರಗೊಳಿಸುವುದು ಸಾಮಾನ್ಯ ವಿಷಯವಲ್ಲ.

ಡಿ.28 ಸಂಜೆ 6.15ಕ್ಕೆ ನಗರದ ಜೆ.ಸಿ.ರಸ್ತೆಯ  ಸಭಾಂಗಣದಲ್ಲಿ ಸೆಂಟರ್ ಫಾರ್ ಡಿವೈನ್ ಆರ್ಟ್ಸ್ ರವರು ಸ್ವಾತಂತ್ರ್ಯ ಅಮೃತಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಿರುವ ಈ ಪ್ರದರ್ಶನಕ್ಕೆ  ಸಂಸ್ಕಾರ ಭಾರತಿಯ ಬೆಂಗಳೂರು ದಕ್ಷಿಣ ಸಂಘಟನಾ ಮಹಾಮಂತ್ರಿ ರಾಮಚಂದ್ರ , ಹಿರಿಯ ರಂಗಕರ್ಮಿ ಸುಚೇಂದ್ರ ಪ್ರ್ರಸಾದ್, ಚಲನಚಿತ್ರ ನಿರ್ದೇಶಕ  ಕೆ.ಎಂ.ಚೈತನ್ಯ ವಿಶೇಷ ಆಹ್ಷಾನಿತರಾಗಿ ಆಗಮಿಸವರು ಎಂದು ಆಯೋಜಕರಾದ ಎಂ.ಬಸವರಾಜು ರವರು ತಿಳಿಸಿದ್ದಾರೆ.

ಕಲಾ ಸೇವೆಯಲ್ಲಿ ತಮ್ಮನ್ನು ಅರ್ಧ ಶತಮಾನದಿಂದಲೂ ತೊಡಗಿಸಿಕೊಂಡಿರುವ ಕಲಾವಿದೆ ಡಾ.ಲೀಲಾ ಬಸವರಾಜು 75ರ  ವಯೋಮಾನದಲ್ಲೂ ಲವಲವಿಕೆಯಿಂದ ಒಂದು ಗಂಟೆ ಇಪ್ಪತ್ತು ನಿಮಿಷ  ಅಸ್ಖಲಿತ ನಿರೂಪಣೆಯಿಂದ ಅಭಿನಯಿಸುವುದು ಈ ಪ್ರಯೋಗದ ವಿಶೇಷತೆ. ಅವರ ಸಂಭಾಷಣೆಯಲ್ಲಿನ ದೃಢತೆ , ಸನ್ನಿವೇಶಕ್ಕೆ ತಕ್ಕಂತೆ ರಸಭಾವ , ಬಾಡಿ ಲ್ಯಾಂಗ್ವೇಜ್ ಎಲ್ಲವೂ ಪ್ರೇಕ್ಷಕರನನ್ನು ಮಂತ್ರಮುಗ್ದರನ್ನಾಗಿ ಮಾಡುತ್ತವೆ.

ತಮ್ಮ ಏಕವ್ಯಕ್ತಿ ಪ್ರಯೋಗಗಳಿಂದ ನಾಡಿನ ಮನೆಮಾತಾಗಿರುವ ನಟ- ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರು ‘ಅವ್ವರಸಿ’ ಪ್ರಯೋಗದ ರಂಗ ರೂಪ, ವಿನ್ಯಾಸ ಮತ್ತು ನಿರ್ದೇಶನದ  ಹೊಣೆಹೊತ್ತಿದ್ದಾರೆ. ಸಚಿನ್ ಶಿವರುದ್ರಪ್ಪ – ಸಂಗೀತ ; ಕೆ.ವಿ.ಸುಬ್ಬಣ್ಣ ಆಪ್ತ ರಂಗಮಂದಿರ ಸಂಸ್ಥಾಪಕ ಗೋಪಿನಾಥ್ ಬಿ.ಆರ್ ಬೆಳಕು; ಶ್ರೀಮತಿ ಸುಧಾ ಪ್ರಸನ್ನ- ಧ್ವನಿ ನೀಡಿದ್ದಾರೆ.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group