ಪ್ರಧಾನ ಮಂತ್ರಿ ಮೋದಿ ಅವರ ಮಾತೋಶ್ರಿ ಹೀರಾ ಬೆನ್ ನಿಧನ – ಸಂಸದ ಈರಣ್ಣ ಕಡಾಡಿ ಸಂತಾಪ

Must Read

ಮೂಡಲಗಿ: ವಿಶ್ವವೇ ನಿಬ್ಬೆರಗಾಗುವಂತೆ ಪ್ರಧಾನಿ ಕರ್ತವ್ಯವನ್ನು ನಿರ್ವಹಿಸುತ್ತಿರುವ ಹೆಮ್ಮಯ ಸುಪುತ್ರನಿಗೆ ಜನ್ಮನೀಡಿದ ಶತಾಯುಷಿ ಶ್ರೀಮತಿ ಹೀರಾ ಬೆನ್ ಅವರ ನಿಧನದಿಂದ ಮನಸ್ಸಿಗೆ ತೀವ್ರ ನೋವುಂಟಾಗಿದೆ ಎಂದು ರಾಜ್ಯಸಭಾ ಸಂಸದ ಹಾಗೂ ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಈರಣ್ಣ ಕಡಾಡಿ ಅವರು ಸಂತಾಪ ವ್ಯಕ್ತಪಡಿಸಿದರು.

ಈ ದುಃಖದ ಸಮಯದಲ್ಲೂ ದೇಶದ ಯಾವುದೇ ಕೆಲಸಗಳು ನಿಲ್ಲದಂತೆ ಸೂಚನೆ ನೀಡಿ ತಮ್ಮ ತಾಯಿಯ ಅಂತಿಮ ವಿಧಿ ವಿಧಾನಗಳನ್ನು ನೇರವೇರಿಸುವ ಮೂಲಕ ಅವರ ಪುತ್ರ ಧರ್ಮವನ್ನು ನಿಭಾಯಿಸಿದರು ಮತ್ತು ತಕ್ಷಣ ಸರ್ಕಾರಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಮೂಲಕ ತಮ್ಮ ರಾಜಧರ್ಮವನ್ನೂ ಕೂಡಾ ಪಾಲಿಸಿದರು ಪ್ರಧಾನಿ ಮೋದಿ.

ಆದರೂ ಕೂಡಾ ಅವರ ಮನಸ್ಸಿನಲ್ಲಿ ಇರುವ ದುಃಖ ದುಃಮಾನಗಳಲ್ಲಿ ಈ ದೇಶದ ಜನ ಭಾಗಿಯಾಗಿದ್ದಾರೆ. ಅವರ ತಾಯಿಯ ಅಗಲುವಿಕೆಯ ನೋವನ್ನು ನಿಭಾಯಿಸುವ ಶಕ್ತಿಯನ್ನು ಭಗವಂತ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನೀಡಲಿ ಎಂದು ಪ್ರಾರ್ಥಿಸುತ್ತೇನೆಂದು ಸಂಸದ ಈರಣ್ಣ ಕಡಾಡಿ ಹೇಳಿದರು.

Latest News

ಸ್ವಾತಂತ್ರ ಹೋರಾಟಗಾರ, ಹೈ. ಕ. ವಿಮೋಚನಾ ರೂವಾರಿ ಚಂದ್ರಶೇಖರ ಪಾಟೀಲ ಮಹಾಗಾಂವ

ಚಂದ್ರಶೇಖರ ಸಂಗಶೆಟ್ಟಿ ಪಾಟೀಲ , ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ಗೆ ಸೇರಿದ ಶಾಸಕಾಂಗ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ ಹೋರಾಟಗಾರ ಮತ್ತು ರಾಜಕಾರಣಿ. ಸ್ವಾತಂತ್ರ ಹೋರಾಟಗಾರ ಹೈದ್ರಾಬಾದ...

More Articles Like This

error: Content is protected !!
Join WhatsApp Group