ವಚನ ಸಾಹಿತ್ಯ ಎಂದೆಂದಿಗೂ ಸಾರ್ವಕಾಲಿಕ ; ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಮತ

Must Read

ವಚನ ಸಾಹಿತ್ಯ ಎಂದೆಂದಿಗೂ ಸಾರ್ವಕಾಲಿಕ; ಸಾಮಾನ್ಯ ಜನರಿಗೆ ಮಾರ್ಗದರ್ಶಕ ಮತ್ತು ದಾರಿದೀಪ ಎಂದು ಡಾ.ಅರಳುಮಲ್ಲಿಗೆ ಪಾರ್ಥಸಾರಥಿ ಅಭಿಪ್ರಾಯಪಟ್ಟರು.

ನಗರದ ಬಿ.ಎಂಶ್ರೀ ಪ್ರತಿಷ್ಠಾನದಲ್ಲಿ ಯೋಗ ಯೂನಿವರ್ಸಿಟಿ ಆಫ್ ದಿ ಅಮೇರಿಕಾಸ್, ಕನ್ನಡ ವಿಭಾಗ ಸಾಹಿತ್ಯ ಸಂಭ್ರಮದ ವತಿಯಿಂದ ಆಯೋಜಿಸಿದ್ದ ವಚನ ಸಂಭ್ರಮ ಮತ್ತು ವಚನ ಗೋಷ್ಟಿಯ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇದನ್ನು ಬರೆದವರು ಪಂಡಿತರಲ್ಲ ಸರಳ ನುಡಿ ರೂಪದಲ್ಲಿ ಬರೆದ ವಚನ ಸಮಾಜ ಒಳಿತು ಕೆಡುಕಗಳ ನೀತಿ ಪಾಠದಂತಿದೆ ಎಂದು ತಿಳಿಸಿದರು.

ಸಂಶೋಧಕ ಡಾ.ಎಂ.ಜಿ.ನಾಗರಾಜ್ ಉದ್ಘಾಟಿಸಿದರು. ಶ್ರೀ ಕೃಷ್ಣ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಡಾ.ರುಕ್ಮಾಂಗದ ನಾಯ್ಡು ಮತ್ತು ಸಂಸ್ಕೃತಿ ಚಿಂತಕ ಡಾ.ಗುರುರಾಜ ಪೋಶೆಟ್ಟಿಹಳ್ಳಿ ವಿಶೇಷ ಆಹ್ವಾನಿತರಾಗಿ ಉಪಸ್ಥಿತರಿದ್ದರು. ವಿವಿಯ ಉಪಕುಲಪತಿ ಡಾ.ಯೋಗಿ ದೇವರಾಜು ಅಧ್ಯಕ್ಷತೆಯಲ್ಲಿ ಶೈಕ್ಷಣಿಕ ವಿಭಾಗದ ಡಾ.ರಾಜಶೇಖರ ರೆಡ್ಡಿ ವೇದಿಕೆಯಲ್ಲಿದ್ದರು,ಪ್ರಾಧ್ಯಾಪಕ ಡಾ.ಆರ್.ವಾದಿರಾಜು ಆಶಯ ನುಡಿಗಳನ್ನಾಡಿದರು. ಪ್ರಾಚೀನ ಮತ್ತು ಆಧುನಿಕ ವಚನ ಗೋಷ್ಠಿಯಲ್ಲಿ ಡಾ.ಹೆಚ್.ಎಸ್.ಭುವನೇಶ್ವರ್ ಅಧ್ಯಕ್ಷತೆಯಲ್ಲಿ ಪ್ರೋ.ಚಂದ್ರಿಕಾ ಪುರಾಣಿಕ ಮತ್ತು ಡಾ.ಲಕ್ಷ್ಮಿ.ಬಿ..ರಾವ್ ವಿಚಾರ ಮಂಡಿಸಿದರು.

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group