ಇಸ್ಲಾಮಿಕ್ ಉಗ್ರ ಸಂಘಟನೆಗಳ ಬಗ್ಗೆ ಯುವತಿಯರು ಎಚ್ಚರ ವಹಿಸಿ – ಭಗವಂತ ಖೂಬಾ

Must Read

ಬೀದರ – ಇಸ್ಲಾಮಿಕ್ ಮತ್ತು ಐಎಐಎಸ್ ಸಂಘಟನೆಗಳು  ದೇಶದಲ್ಲಿ ಹಿಂದೂ ಯುವತಿಯರನ್ನು ಟಾರ್ಗೆಟ್ ಮಾಡಿ ಉಗ್ರ ಕೆಲಸಕ್ಕೆ ಬಳಸಿಕೊಳ್ಳುತ್ತಿದ್ದು ಹಿಂದೂ ಯುವತಿಯರು ಎಚ್ಚರವಹಿಸಬೇಕು ಎಂದು ಕೇಂದ್ರ ಸಚಿವ ಭಗವಂತ ಖೂಬಾ ಹೇಳಿದ್ದಾರೆ.

ದಿ ಕೇರಳ ಸ್ಟೋರಿ ಚಲನ ಚಿತ್ರ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತ ಮಾತನಾಡಿದ ಅವರು, ಹಿಂದು ಯುವತಿಯರಿಗೆ ಪ್ರೀತಿ ಪ್ರೇಮ ಎಂಬ ಚಕ್ರ ವ್ಯೂಹದಲ್ಲಿ ಬೀಳಿಸಿ ಆಮೇಲೆ ಲವ್ ಜಿಹಾದ್ ನಲ್ಲಿ ಸಿಲುಕಿಸಿ ಉಗ್ರಗಾಮಿ ಸಂಘಟನೆಗೆ ಬಳಕೆ ಮಾಡಲಾಗುತ್ತಿದೆ. ಇಸ್ಲಾಮಿಕ್ ಮತ್ತು ಐಎಸ್ ಐ ಎಸ್ ಸಂಘಟನೆಗಳು ಈ ಕೆಲಸ ಮಾಡುತ್ತಿವೆ. ಈ ಬಗ್ಗೆ ನಮ್ಮ ಹಿಂದೂ ಯುವತಿಯರು ಜಾಗೃತಿ ವಹಿಸಬೇಕು ಎಂದರು.

ನಾನು ಹಿಂದು ಯುವತಿಯರಿಗೆ ಮನವಿ ಮಾಡುತ್ತೇನೆ. ಯಾರೂ ಪ್ರೀತಿ ಪ್ರೇಮ ಚಕ್ರವ್ಯೂಹದಲ್ಲಿ ಬೀಳಬೇಡಿ. ನಿಮ್ಮ ಕುಟುಂಬ ಸಮೇತ ದಿ ಕೇರಳ ಸ್ಟೋರಿ ಚಲನಚಿತ್ರ ನೋಡಿ ಎಂದು ಖೂಬಾ ಮನವಿ ಮಾಡಿದರು.

ನಾವು ನಮ್ಮ ಹೆಣ್ಣು ಮಕ್ಕಳಿಗೆ ನಮ್ಮ ಸಂಸ್ಕೃತಿ, ದೇವ ದೇವತೆಯರ ಬಗ್ಗೆ ಹೇಳಿಕೊಡಬೇಕು ಭಯೋತ್ಪಾದಕರ ಸಂಚಿಗೆ ಯಾರೂ ಬಲಿಯಾಗದಂತೆ ನೋಡಿಕೊಳ್ಳಬೇಕು ಎಂದರು.


ವರದಿ: ನಂದಕುಮಾರ ಕರಂಜೆ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group