spot_img
spot_img

ನೂತನ ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಗೆ ಸ್ವಾಗತ; ಕನ್ನಡ ಬಳಸದ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮಕ್ಕೆ ಒತ್ತಾಯ

Must Read

spot_img
- Advertisement -

ಮೈಸೂರು – ಹಾರ-ತುರಾಯಿ, ಶಾಲು -ಶಲ್ಯಗಳ ಸನ್ಮಾನವನ್ನು ತಿರಸ್ಕರಿಸಿದ  ಕನ್ನಡಿಗರ  ಮೆಚ್ಚಿನ  ಮುಖ್ಯಮಂತ್ರಿ  ಸಿದ್ದರಾಮಯ್ಯ ಅವರಿಗೆ ಕೃತಜ್ಞತೆ ಗಳು. ಅವುಗಳ ಬದಲಿಗೆ ಪುಸ್ತಕಗಳನ್ನು ಅಭಿನಂದನೆಯ ಸಂದರ್ಭದಲ್ಲಿ ನೀಡಿ ಎಂದು ನೀಡಿರುವ ಅವರ ಹೇಳಿಕೆ ಸ್ವಾಗತಾರ್ಹ ಎಂದು ಹಿರಿಯ ಸಾಹಿತಿ, ಪತ್ರಕರ್ತರು ಹಾಗೂ ಮೈಸೂರು ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಡಾ.ಭೇರ್ಯ ರಾಮಕುಮಾರ್ ಶ್ಲಾಘಿಸಿದ್ದಾರೆ.

ತಮ್ಮನ್ನು ಅಭಿನಂದಿಸುವ ಸಂದರ್ಭದಲ್ಲಿ  ಕಡ್ಡಾಯವಾಗಿ ಕನ್ನಡ ಪುಸ್ತಕಗಳನ್ನೇ ನೀಡಬೇಕೆಂದು ಮುಖ್ಯಮಂತ್ರಿಗಳು ಸೂಚಿಸಲಿ.ತಮಗೆ ಬಂದ ಪುಸ್ತಕಗಳನ್ನು ಶಾಲಾ-ಕಾಲೇಜುಗಳ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಲಿ. ಆ ಮೂಲಕ ಭವಿಷ್ಯತ್ತಿನಲ್ಲಿ ಕನ್ನಡ ನಾಡು-ನುಡಿಯ ಉಳಿವಿಗೆ ಕಾರಣರಾಗಲಿ ಎಂದವರು ಆಶಿಸಿದ್ದಾರೆ.

ಕನ್ನಡ ಕಾವಲು ಸಮಿತಿಯ  ಪ್ರಥಮ ಅಧ್ಯಕ್ಷರಾಗುವ ಮೂಲಕ ರಾಜ್ಯದಾದ್ಯಂತ ಕನ್ನಡ ನಾಡು-ನುಡಿಯ ಅಭ್ಯುದಯದ ಕಹಳೆ ಮೊಳಗಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು  ಆಡಳಿತದಲ್ಲಿ ಶೇಕಡಾ ನೂರಕ್ಕೆ  ನೂರರಷ್ಟು ಕನ್ನಡ ಬಳಸುವಂತೆ  ಕ್ರಮಕೈಗೊಳ್ಳಲಿ. ಕನ್ನಡದ ಬಗ್ಗೆ ಅಸಡ್ಡೆ ತೋರುವ ಅಧಿಕಾರಿಗಳ ಮೇಲೆ ಶಿಸ್ತಿನಕ್ರಮ ಜರುಗಿಸಲಿ ಎಂಬುದೇ ನಮ್ಮ ಆಶಯ.ಎಂದವರು ತಿಳಿಸಿದ್ದಾರೆ.

- Advertisement -
- Advertisement -

Latest News

ಕಸಾಪ ಹುಕ್ಕೇರಿ ಘಟಕದಿಂದ ಷ.ಬ್ರ. ಶ್ರೀ ಚಂದ್ರಶೇಖರ ಸ್ವಾಮೀಜಿ ಸತ್ಕಾರ

ಹುಕ್ಕೇರಿ ತಾಲೂಕಿನ 12ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ನಿಮಿತ್ತ ಹುಕ್ಕೇರಿಯ ಹಿರೇಮಠದಲ್ಲಿ ಪರಮಪೂಜ್ಯರಾದ ಶ್ರೀ ಷಟಸ್ಥಳ ಬ್ರಹ್ಮ ಶ್ರೀ ಚಂದ್ರಶೇಖರ ಸ್ವಾಮೀಜಿ ಅವರನ್ನು...
- Advertisement -

More Articles Like This

- Advertisement -
close
error: Content is protected !!
Join WhatsApp Group