Homeಸುದ್ದಿಗಳುಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಶ್ಲಾಘನೀಯ; ಅಶೋಕ ಅಲ್ಲಾಪೂರ

ಕನ್ನಡ ಸಾಹಿತ್ಯ ಪರಿಷತ್ತಿನಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರ ಶ್ಲಾಘನೀಯ; ಅಶೋಕ ಅಲ್ಲಾಪೂರ

ಸಿಂದಗಿ: ಕನ್ನಡ ಸಾಹಿತ್ಯ ಪರಿಷತ್ತು ಹತ್ತು ಜನ ಸಾಧಕರಿಗೆ ಗೌರವ ಪುರಸ್ಕಾರ ನೀಡಿದ್ದು ಅತ್ಯಂತ  ಶ್ಲಾಘನೀಯ ಎಂದು ರಾಜ್ಯ ಲಿಂಬೆ ಅಭಿವೃದ್ಧಿಯ ಮಂಡಳಿ ಮಾಜಿ ಅಧ್ಯಕ್ಷ ಅಶೋಕ ಅಲ್ಲಾಪೂರ  ಅಭಿಪ್ರಾಯ ವ್ಯಕ್ತಪಡಿಸಿದರು

ಪಟ್ಟಣದ ಸರಕಾರಿ ಆದರ್ಶ ವಿದ್ಯಾಲಯದಲ್ಲಿ ಜಿಲ್ಲಾ ಹಾಗೂ ತಾಲೂಕ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಸರಕಾರಿ ಆದರ್ಶ ವಿದ್ಯಾಲಯ ಇವರ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ನಿಮಿತ್ತ ಕರ್ನಾಟಕ ಸಂಭ್ರಮ 50 ಸಮಾರಂಭದಲ್ಲಿ ಜಿಲ್ಲಾ ರಾಜ್ಯೋತ್ಸವ ಗೌರವ ಪುರಷ್ಕೃತರಾಗಿ ಮಾತನಾಡಿ, ಸಾಹಿತ್ಯ ಕನ್ನಡ ಪ್ರಜ್ಞೆ ಅಪ್ಪಟ ಜಾತ್ಯತೀತವಾಗಿದ್ದು, ಇದಕ್ಕೆ ಜಾತಿ ಧರ್ಮ ಎನ್ನುವ ಭೇದವಿಲ್ಲ ಎಲ್ಲರನ್ನು ಒಗ್ಗೂಡಿಸುವ ಕಾರ್ಯ ಕನ್ನಡ ಸಾಹಿತ್ಯ ಪರಿಷತ್ತು ಹಲವಾರು ಕಾರ್ಯಕ್ರಮಗಳ ಮೂಲಕ  ಸಾವಿರ ಜನಸೇರಿ ಸಂಭ್ರಮಿಸಿ ಕನ್ನಡ ಪ್ರ್ರಜ್ಞೆ  ಮೂಡಿಸುತ್ತಿದೆ  ಕನ್ನಡ ನಾಡಿನ ಜನರೆಲ್ಲರನ್ನು ಒಟ್ಟುಕೂಡಿಸಿ ಅವರನ್ನು ಭಾಷಾ ವಿಷಯದನ್ವಯ ಪರಸ್ಪರ ಐಕ್ಯತೆಯನ್ನು, ಸೌಹಾರ್ದತೆಯನ್ನು ಹಚ್ಚುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ  ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಹಿರಿಯ ಚಿಂತನಾ ಶರಣಪ್ಪ ವಾರದ ಮಾತನಾಡಿ, ಸಿಂದಗಿ ಸಾಹಿತ್ಯ ಪರಿಷತ್ತು ನೂರಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಲುವ ಮೂಲಕ ಸಮಾಜಮುಖಿಯಾಗಿ ಜಿಲ್ಲೆಯಲ್ಲಿ ನೂರಾರೂ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಒಂದಾದ  ಕಾರ್ಯಕ್ರಮ ಇದಾಗಿದೆ ಎಂದರು. 

ಈ ಸಂದರ್ಭದಲ್ಲಿ  ಕರ್ನಾಟಕ ಸಂಭ್ರಮ – 50 ಈ ಕಾರ್ಯಕ್ರಮದಲ್ಲಿ ಅಶೋಕ ಅಲ್ಲಾಪೂರ, ಶಿವಾನಂದ ಹಡಪದ, ಮಹಾದೇವಪ್ಪ ಗಾಯಕವಾಡ, ರವಿ ಗೋಲಾ, ಜ್ಯೋತಿ ನಂದಿಮಠ, ಎಮ್.ಎ.ಖತೀಬ, ಡಾ. ವಿದ್ಯಾ ಬಡಿಗೇರ, ಸಂಗನಗೌಡ ಪಾಟೀಲ, ಶೋಭಾ ಚಿಗರಿ, ಶರಣು ಚಟ್ಚಿ, ಡಿ. ಎಮ್. ಮಾಹುರ ಇವರಿಗೆ ಜಿಲ್ಲಾ ಗೌರವ ಪುರಸ್ಕಾರ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮವನನು ಉದ್ಘಾಟಿಸಿದ ಸರಕಾರಿ ಆದರ್ಶ ವಿದ್ಯಾಲಯದ ಮುಖ್ಯೋಪಾದ್ಯಯ ಎಸ್.ಕೆ. ಬಿರಾದಾರ, ಅಧ್ಯಕ್ಷತೆ ವಹಿಸಿದ  ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ, ತಾಲೂಕಾದ್ಯಕ್ಷ ಶಿವಾನಂದ ಬಡಾನೂರ,  ಗೌರವಾಧ್ಯಕ್ಷ ಮಹಾಂತೇಶ  ಪಟ್ಟಣಶೆಟ್ಟಿ,, ಶಿಲ್ಪಾ ಕುದರಗೊಂಡ, ಎಸ್ ಡಿಎಂಸಿ ಅಧ್ಯಕ್ಷ ರವಿ ಬೊಮ್ಮಣ್ಣಿ,  ದಸಂಸ ಸಂಚಾಲಕ ಅಶೋಕ ಸುಲ್ಪಿ ವೇದಿಕೆಯ ಮೇಲಿದ್ದರು.

ಕಾರ್ಯಕ್ರಮದಲ್ಲಿ ಶಿವಕುಮಾರ ಕಲ್ಲೂರ, ಖಾದರ ವಾಲೀಕಾರ, ರಾಜಶೇಖರ ಕಂಬಾರ, ಅಮರ ಗಾಯಕವಾಡ, ಶಾಂತಪ್ಪ ರಾಣಾಗೋಳ, ಡಾ. ವಿದ್ಯಾ ಬಡಿಗೇರ, ಅನ್ನಪೂರ್ಣ ಬೆಳೆನ್ನವರ. ಶಿಲ್ಪಾ  ಸಿ.ಪತ್ತಾರ, ಪದ್ಮಾ ಪೂಜಾರಿ,  ಆಕಾಶ ಮ್ಯಾಕೇರಿ,  ಜ್ಯೋತಿ ನಂದಿಮಠ, ರಾಮಪ್ಪ  ಹಡಪದ, ರಮೇಶ ಪವಾರ, ರಮೇಶ ಚಟ್ಟರಕಿ, ಮಲ್ಲಮ್ಮ ಬಿರಾದಾರ, ನಟರಾಜ ಕುಂಬಾರ, ಸಿ. ಎಮ್.  ಪಾಟೀಲ ಸೇರಿದಂತೆ  ಹಲವರರು  ಉಪಸ್ಥಿತರಿದ್ದರು.

ಕಸಾಪ ಮಾಜಿ ಅದ್ಯಕ್ಷ ಸಿದ್ದಲಿಂಗ ಚೌಧರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಭುವಿ ಪತ್ತಾರ ಹಾಗೂ ಸಂಗಡಿಗರು ಪ್ರಾರ್ಥನಾ ಗೀತೆ ಹಾಡಿದರು. ಕುಮಾರಿ ಶರಧಿ ಹಿರೇಮಠ  ನಿರೂಪಿಸಿದರು, ಸ್ವಾತಿ ಲೋಣಿ ನಾಡಗೀತೆ ಹಾಡಿದರು. ವರ್ಷಿಣಿ ನಾಯಕ ರೈತಗೀತೆ ಹಾಡಿದರು. ವರ್ಷಾ ಹೋಳಿ ಸ್ವಾಗತಿಸಿದರು. ಮಲ್ಲಮ್ಮ ಬಿರಾದಾರ, ಜ್ಯೋತಿ ನಂದಿಮಠ ಮಕ್ಕಳಗೀತೆ  ಹಾಡಿದರು, ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group