ಸಿಂದಗಿ: ಮೈಸೂರಿನಲ್ಲಿ ನಡೆದ “ಇಂಡಿಯನ್ ಕೌನ್ಸಿಲ್ ಫಾರ್ ಸ್ಪೋರ್ಟ್ಸ್ ಆಂಡ್ ಎಜ್ಯುಕೇಶನ್”(IESE) ವತಿಯಿಂದ ನ್ಯಾಷನಲ್ ಕರಾಟೆ ಚಾಂಪಿಯನಶಿಪ್ ನಲ್ಲಿ ಪಟ್ಟಣದ ಹೊರವಲಯದ ಕಾವ್ಯ ಪ್ರಾಥಮಿಕ ಶಾಲೆಯ ಶಾಲೆ ಸಿಂದಗಿಯ ವಿದ್ಯಾರ್ಥಿನಿ ಆಸ್ಮಾ ಬಾಬು ಮುಗುಳಿ ಅವಳು ಚಿನ್ನದ ಪದಕ ಗೆದ್ದು ಅಂತಾರಾಷ್ಟ್ರೀಯ ಕರಾಟೆ ಸ್ಪರ್ಧೆಗೆ ಆಯ್ಕೆಯಾಗಿರುತ್ತಾಳೆ.
ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಆರೀಫ್.ಹೆಚ್.ಬಿರಾದಾರ, ಕ್ಷೇತ್ರ ಸಮನ್ವಯಧಿಕಾರಿ ಆಯ್ ಎಸ್ ಟಕ್ಕೆ, ಸಂಸ್ಥೆಯ ಅಧ್ಯಕ್ಷೆ ಕಾಂಚನಾ ನಾಗರಬೆಟ್ಟ, ಕಾರ್ಯದರ್ಶಿ ಚಂದ್ರಶೇಖರ ನಾಗರಬೆಟ್ಟ, ಶಾಲೆಯ ಮುಖ್ಯೋಪಾಧ್ಯಾಯರಾದ ರಾಜಕುಮಾರ ಕಾಂಬಳೆ ಅಭಿನಂದಿಸಿದ್ದಾರೆ.