Homeಸುದ್ದಿಗಳುವಿಶ್ವ ಏಡ್ಸ್ ದಿನ, ವಿಶೇಷ ಚೇತನರ ದಿನ ಮತ್ತು ಕ್ರಿಸ್ಮಸ್ ಕಾರ್ಯಕ್ರಮದ ಉದ್ಘಾಟನೆ

ವಿಶ್ವ ಏಡ್ಸ್ ದಿನ, ವಿಶೇಷ ಚೇತನರ ದಿನ ಮತ್ತು ಕ್ರಿಸ್ಮಸ್ ಕಾರ್ಯಕ್ರಮದ ಉದ್ಘಾಟನೆ

ಕ್ಷಮೆ, ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿ ಪ್ರಭುಕ್ರಿಸ್ತರ ಈ ಮೌಲ್ಯಗಳು ಜೀವನ ಕ್ಕೆ ಪೂರಕ; ನಾಗರತ್ನ ಮನಗೂಳಿ

ಸಿಂದಗಿ: ಕಳೆದ 33 ವರ್ಷಗಳಿಂದ ಈ ದಿನ ಆಚರಿಸಲಾಗುತ್ತಿದೆ, 2023ರ ವಿಶ್ವ ಏಡ್ಸ್ ದಿನಾಚರಣೆಯ ದ್ಯೇಯವಾಕ್ಯ ಸಮುದಾಯಗಳು ಮುನ್ನಡೆಸಲಿ. ಡಿಸೆಂಬರ್ 3 ರಂದು, ವಿಶ್ವ ವಿಶೇಷ ಚೇತನರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ ಎಂದು  ಇನ್ನರ್ ಕ್ಲಬ್ ಮಾಜಿ ಅದ್ಯಕ್ಷೆ ಶ್ರೀಮತಿ ನಾಗರತ್ನ ಅಶೋಕ ಮನಗೂಳಿ ಹೇಳಿದರು.

ಪಟ್ಟಣದ ಸಂಗಮ ಸಮಗ್ರ ಗ್ರಾಮೀಣ ಅಭಿವೃದ್ದಿ ಕೇಂದ್ರದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್, ವಿಶೇಷ ಚೇತನರ ದಿನ ಮತ್ತು  ಕ್ರಿಸ್ಮಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಪ್ರತಿ ವರ್ಷ ಡಿಸೆಂಬರ್ 1 ವಿಶ್ವ ಏಡ್ಸ್ ದಿನ ಸ್ಮರಿಸುತ್ತದೆ, ಪ್ರಪಂಚದಾದ್ಯಂತ ಜನರು ಹೆಚ್.ಐ.ವಿಯೊಂದಿಗೆ ವಾಸಿಸುವ ಮತ್ತು ಪೀಡಿತ ಜನರಿಗೆ ಬೆಂಬಲವನ್ನು ತೋರಿಸಲು, ಏಡ್ಸ್ ನಿಂದ ತಮ್ಮ ಜೀವಗಳನ್ನು ಕಳೆದುಕೊಂಡವರನ್ನು ನೆನಪಿಸಿಕೊಳ್ಳಲು ಹಾಗೂ ಏಡ್ಸ್ ಬಾರದಂತೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲು ಒಂದಾಗುತ್ತಾರೆ. 1992ರಲ್ಲಿ ಡಿಸೆಂಬರ್ 3 ರಂದು ವಿಶ್ವಸಂಸ್ಥೆ ಈ ದಿನವನ್ನು ಮೊದಲ ಸಲ ಆಚರಿಸಲು ಕರೆ ನೀಡಿತು. ವಿಶೇಷ ಚೇತನರಿಗೂ ಭಾವನೆಗಳಿವೆ, ಜಗತ್ತಿನ ಆಗು ಹೋಗುಗಳಿಗೆ ಸ್ಪಂದಿಸುವ ಭೌತಿಕ ಸಾಮರ್ಥ್ಯವಿದೆ, ಸ್ವಾಭಿಮಾನದಿಂದ ಬದುಕುವ ಹಕ್ಕಿದೆ. ಅವರು ಸಮಾಜದ ಮುಖ್ಯ ವಾಹಿನಿಗಳಲ್ಲಿ ಗುರುತಿಸಕೊಳ್ಳಬಲ್ಲರು. ರಾಜಕೀಯ, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ, ಮಾಹಿತಿ ಮತು ತಂತ್ರಜ್ಞಾನ, ಮನರಂಜನೆ ಮುಂತಾದ ಕ್ಷೇತ್ರಗಳಲ್ಲಿ ಗುರುತಿಸಬಲ್ಲರು. ಡಿಸಂಬರ್ 25 ರಂದು ನಾವು ಕ್ರಿಸ್ಮಸ್ ಆಚರಿಸುತ್ತೇವೆ. ಕ್ರಿಸ್ಮಸ್ ಅಂದರೆ ಕ್ರಿಸ್ತನ ಹುಟ್ಟುಹಬ್ಬ. ಕ್ರಿಸ್ತನ ಜನನದಂದು ನಮಗೆ ಸಿಗುವ ಸಂದೇಶವೆಂದರೆ ಕ್ಷಮೆ, ಪ್ರೀತಿ, ಸಹನೆ, ಸಹಬಾಳ್ವೆ ಮತ್ತು ಶಾಂತಿ. ಈ ಮೌಲ್ಯಗಳನ್ನು ನಮ್ಮ ದಿನನಿತ್ಯ ಜೀವನದಲ್ಲಿ ಅಳವಡಿಸಲು ಪ್ರಯತ್ನಿಸುವ ಎಂದರು. 

ಅಧ್ಯಕ್ಷತೆ ವಹಿಸಿದ ಸಂಗಮ ಸಂಸ್ಥೆಯ ನಿರ್ದೇಶಕ ಫಾ. ಸಂತೋಷ ಮಾತನಾಡಿ, ಕ್ರಿಸ್ಮಸ್ ಕೇವಲ ಕ್ರೈಸ್ತರ ಹಬ್ಬ ಅಲ್ಲ, ಪ್ರತಿಯೊಬ್ಬರು ಒಂದುಗೂಡಿ ಆಚರಿಸುವ ಹಬ್ಬ. ಯಾಕೆಂದರೆ ಯೇಸು ಹುಟ್ಟಿದ್ದು ದನದ ಕೊಟ್ಟಿಗೆಯಲ್ಲಿ, ಹಸುಗಳನ್ನು ನಮ್ಮ ಹಿಂದು ಬಾಂಧವರು ಪೂಜಿಸುತ್ತಾರೆ, ಜ್ಞಾನಿಗಳು ನಕ್ಷತ್ರ ನೋಡಿ ಯೇಸುವನ್ನು ಆರಾಧಿಸಲು ಬಂದರು. ನಕ್ಷತ್ರ ಇಸ್ಲಾಮ್ ಧರ್ಮದ ಚಿಹ್ನೆಯಾಗಿದೆ. ದೇವರನ್ನು ನಾವು, ನಾವು ಮಾಡುವ ಕಾರ್ಯದಲ್ಲಿ ಕಾಣುತ್ತೇವೆ. ಕ್ರಿಸ್ತರು ಹಲವು ಬೋಧನೆಗಳನ್ನು ನೀಡಿದರು. ಹಾಗೆಯೇ ನಮ್ಮ ಕೆಲಸ ಸಮಾಜದ ಕೆಲಸ ಜನರಿಗೆ ಎಲ್ಲಾ ತರಹದ ಸೌಲಭ್ಯಗಳು ದೊರಕಲು ಸಹಾಯ ಮಾಡುವುದು. ಮತಾಂತರ ಎಂದರೆ ಧರ್ಮದಿಂದ ಧರ್ಮಕ್ಕೆ ಮತಾಂತರ ಆಗುವುದಲ್ಲ ಬದಲಾಗಿ ನಾವು ಮನುಷ್ಯತ್ವವನ್ನು ಬೆಳೆಸಿಕೊಳ್ಳುವುದು ಎಂದು ತಿಳಿಸಿದರು. 

ಸಂಗಮ ಸಂಸ್ಥೆಯ ಸಹನಿರ್ದೇಶಕಿ ಸಿಸ್ಟರ್ ಸಿಂತಿಯಾ ಡಿಮೆಲ್ಲೊ ಇವರು ಪ್ರಾಸ್ತಾವಿಕ ವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಹಿಳಾ ಸಂಘದ ಸದಸ್ಯರು, ವಿಶೇಷ ಚೇತನರು, ದೇವದಾಸಿ ತಾಯಂದಿರು, ಅಪೌಷ್ಟಿಕ ಮಕ್ಕಳು ಮತ್ತು ವಿಡಿಸಿ ಸದಸ್ಯರು ಉಪಸ್ಥಿತರಿದರು.

ತೇಜಶ್ವಿನಿ ರಮೇಶ ಹಳ್ಳದಕೇರಿ ನಿರೂಪಿಸಿದರು. ರಾಜೀವ ಕುರಿಮನಿ ಸ್ವಾಗತಿಸಿದರು. ಬಸವರಾಜ ಬಿಸನಾಳ ವಂದಿಸಿದರು.

RELATED ARTICLES

Most Popular

error: Content is protected !!
Join WhatsApp Group