ಕವನ: ಅಳಿವಿನಂಚಿಗೆ ಬಂತು ಅಳತೆಗೋಲು

Must Read

ಅಳಿವಿನಂಚಿಗೆ ಬಂತು ಅಳತೆಗೋಲು

ಸೊಲಗಿ ಅದ್ದನಗಿ ಗಿದ್ದನಗಿ ಕೊಳವಿ

ಮೊದಲಿನವ್ರು ಧಾನ್ಯ ಇದರಾಗ ಅಳದೀವಿ

ಉಬ್ಬಲೇರಿ ಅಳದು ಕೊಡತಿದ್ರ ಆವಾಗ

ಅಳಿಯುವಾಗ ತೆಲಿಮ್ಯಾಲ ಇರ್ಬೇಕ ಸೆರಗ

ಕೊಳವಿ ಜ್ವಾಳಾ ಕೊಟ್ಟು ಪಾವ ಮೊಸರು ತಂದು

ನಲಿವ ಕಾಲವದು ಬರೀ ಕನಸಾಯ್ತು ಇಂದು

ಒಲೆಯ ಮೇಲಿನ ಅಡಿಗೆ ನೆನೆವೆನಡಿಗಡಿಗೆ

ತೊಲೆಯ ಜಂತಿಯ ಮನೆಯು ಸಿಗುತಿಲ್ಲ ನಮಗೆ

ಮುಳುಗುತಿವೆ ಎಲ್ಲವೂ ದಿನದಿಂದ ದಿನಕ್ಕೆ 

ಮೊಳ ಮೊಲ್ಲೆ ದರ ಹಾರುತಿದೆ ಆಗಸಕ್ಕೆ

ಹೊಳೆವ ಚೆಂದಿರ ನಕ್ಕ ಇಳೆಯ ಈ ಪರಿ ಕಂಡು

ಅಳಿವಿನಂಚಿಗೆ ಇಹವು ಜೇನ್ನೊಣಗಳ ದಂಡು

ಎಲ್ಲವೂ ಕೃತಕವೇ ಧನ ಧಾನ್ಯ ಕ್ಷೀರ

ಮೆಲ್ಲಗೆ ನಶಿಸುತಿದೆ ಚರಾಚರ ಪೂರ

ಎಲ್ಲಿಗೋಗಿ ತಲುಪುವುದೋ ಗೊತ್ತಿಲ್ಲ ಹಿಂಗೆ

ಮೆಲ್ಲ ಧರೆಗಿಳಿಯಪ್ಪ ಓ ದೇವ ತಂದೆ.


 ಶ್ರೀಮತಿ ಕಮಲಾಕ್ಷಿ ಕೌಜಲಗಿ, ಬೆಂಗಳೂರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group