ವಿಭಾಗೀಯ ಮಟ್ಟಕ್ಕೆ ಆಯ್ಕೆ

Must Read

ಸಿಂದಗಿ : ಇಲ್ಲಿನ ತಾಲೂಕ ಶಿಕ್ಷಣ ಪ್ರಸಾರಕ ಮಂಡಳಿಯ ಎಚ್.ಜಿ. ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಜಯಪುರ ಜಿಲ್ಲಾಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಸ್ಥಳೀಯ ಪಿ.ಇ.ಎಸ್. ಗಂಗಾಧರ ಎನ್. ಬಿರಾದಾರ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಕುಮಾರ ಪ್ರೀತಮ್ ಶಾಬಾದಿ (ಪ್ರಥಮ) ಚಿತ್ರಕಲೆ, ಕುಮಾರಿ ಭವಾನಿ ಪಾಟೀಲ (ಪ್ರಥಮ) ಪ್ರಬಂಧ ಸ್ಪರ್ಧೆ ಹಾಗೂ ಕುಮಾರ ಸೋಮರಾಯ ಪೂಜಾರಿ (ದ್ವಿತೀಯ) ಜನಪದ ಗೀತೆ ಸ್ಥಾನ ಪಡೆಯುವುದರ ಮೂಲಕ ವಿಭಾಗೀಯ ಮಟ್ಟದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸ್ಪರ್ಧೆಗಳಿಗೆ ಆಯ್ಕೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಸಂತೋಷಕುಮಾರ ಭೀ. ಕರ್ಜಗಿ, ಗೌರವಕಾರ್ಯದರ್ಶಿಗಳಾದ ಬಿ.ಪಿ. ಕರ್ಜಗಿ, ಆಡಳಿತಾಧಿಕಾರಿಗಳಾದ ಆಯ್.ಬಿ. ಬಿರಾದಾರ, ಮಾರ್ಗದರ್ಶಕರಾದ ಕೆ.ಎಚ್. ಸೋಮಾಪೂರ, ಪ್ರಾಚಾರ್ಯರಾದ ಆರ್.ಬಿ. ಗೋಡಕರ, ಜಿ.ಎಸ್. ಕಡಣಿ ಹಾಗೂ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.

- Advertisement -
- Advertisement -

Latest News

ಹೃದಯ ವೈಶಾಲ್ಯದ ರಂಗ ಕಲಾವಿದ ಎಸ್ ಆರ್ ಪಾಟೀಲ

ಬಾಗಲಕೋಟೆ: ಸಜ್ಜನ,ಪ್ರಾಮಾಣಿಕ,ಪರೋಪಕಾರದ ದೂರದೃಷ್ಟಿ ಇರುವಂತಹ ಮಾಜಿ ಸಚಿವ ಎಸ್.ಆರ್.ಪಾಟೀಲ ಸಾವಿರಾರು ಕುಟುಂಬಗಳಿಗೆ ಊಟ, ಆಶ್ರಯ ನೀಡಿದಂತವರು. ಕಲಾವಿದರನ್ನು ಪ್ರೊತ್ಸಾಹಿಸುವಲ್ಲಿಯೂ ತಮ್ಮ ಹೃದಯ ವೈಶಾಲ್ಯತೆ ತೋರಿದವರು ಎಂದು...
- Advertisement -

More Articles Like This

- Advertisement -
close
error: Content is protected !!
Join WhatsApp Group