- Advertisement -
ಮೈಸೂರು -ಶ್ರೀ ಶ್ರೀ ಶ್ರೀ ಶ್ರೀರಂಗಂ ಶ್ರೀಮದ್ ಆಂಡವನ್ ಶ್ರೀ ವರಾಹ ಮಹದೇಸಿಕನ್ ಸ್ವಾಮಿಗಳ ‘ವಿಜಯ ಯಾತ್ರೆ’ ಡಿ.೯ ಸೋಮವಾರ ಹಾಗೂ ೧೦ರಂದು ಮಂಗಳವಾರ ಬೆಳಿಗ್ಗೆ ೧೦ರಿಂದ ರಾತ್ರಿ ೯ರವರೆಗೆ ಜಗನ್ಮೋಹನ ಅರಮನೆ ಸಮೀಪವಿರುವ ಶ್ರೀ ಪರಕಾಲ ಮಠದಲ್ಲಿ ನೆರವೇರಲಿದೆ.
ಈ ಸುವರ್ಣಾವಕಾಶವನ್ನು ಶ್ರೀ ವೈಷ್ಣವ ಸಮೂಹ ಉಪಯೋಗಿಸಿಕೊಂಡು ಪಂಚ ಸಂಸ್ಕಾರ ಮತ್ತು ಭರಣ್ಯಾಸ ಮಾಡಿಸಿಕೊಳ್ಳಬಹುದು. ನಗರದ ಭಕ್ತಮಹಾಶಯರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸುವರ್ಣಾವಕಾಶವನ್ನು ಬಳಸಿಕೊಂಡು ಶ್ರೀಗಳ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಸ್ಥಾನದ ಮುಖ್ಯಸ್ಥ ವಿದ್ವಾನ್ ಕೆ.ಆರ್.ಯೋಗಾನರಸಿಂಹನ್ (ಮುರುಳಿ ಅಯ್ಯಂಗಾರ್) ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಾಹಿತಿಗಾಗಿ ಮೊಬೈಲ್ ೯೩೪೨೧೮೮೩೨೩ ಅಥವಾ ೭೫೯೮೮೩೨೨೭೧ ಸಂಪರ್ಕಿಸಬಹುದು.