ಸಿಂದಗಿಯಲ್ಲಿ ಕಂಪ್ಯೂಟರ್ ಆಪರೇಟರ್ ದಿನ ಆಚರಣೆ

Must Read

ಸಿಂದಗಿ – ೧೮-೧೯ ನೇ ಶತಮಾನದಲ್ಲಿ ವಿಜ್ಞಾನಿ, ಗಣಿತ ತಜ್ಞರು, ತತ್ವಶಾಸ್ತ್ರಜ್ಞರು ಆದ ಚಾರ್ಲ್ಸ್ ಬ್ಯಾಬೇಜ್ ರವರು  ಯುದ್ಧದ ಸಂದರ್ಭದಲ್ಲಿ ಯುದ್ಧ ಸಾಮಗ್ರಿ ಸಲಕರಣೆಗಳನ್ನು ಲೆಕ್ಕ ಪತ್ರ ಇಡಲು ತೊಂದರೆಯಾದ ಸಮಯದಲ್ಲಿ ಅವಿಸ್ಕರಿಸಿದ ತಂತ್ರವೇ ಗಣಕಯಂತ್ರ ಅದುವೇ ಇಂದು ಇಲಾಖೆಯಲ್ಲಿ ಬಳಸಲು ಅನುಕೂಲವಾಗಿದೆ ಎಂದು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ರಾಮು ಜಿ ಅಗ್ನಿ ತಿಳಿಸಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಗಣಕ ಯಂತ್ರ ಪಿತಾಮಹ ಚಾರ್ಲ್ಸ್ ಬ್ಯಾಬೇಜ್ ರವರ ಜನ್ಮ ದಿನೋತ್ಸವವನ್ನು ಕರ್ನಾಟಕ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶದಂತೆ ಕಂಪ್ಯೂಟರ್ ಆಪರೇಟರ್ ದಿವಸ ಆಚರಣೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಣಕ ಯಂತ್ರ ನಿರ್ವಾಹಕರು ಎಲ್ಲರು ಸೇರಿ ಮೂರು ತಾಲೂಕಿನ ಕಾರ್ಯನಿರ್ವಾಹಕ ಅಧಿಕಾರಿಗಳು ಇವರಿಗೆ ಸೇವಾ ಭದ್ರತೆ, ಕೆಲಸಕ್ಕೆ ತಕ್ಕಂತೆ ಸಂಬಳ ನೀಡುವಂತೆ ಬೇಡಿಕೆ ಸಲ್ಲಿಸಿದರು ಹಾಗೂ ಹೆಚ್ಚುವರಿ ಕೆಲಸ ಉಳಿದ ಸಿಬ್ಬಂದಿಗಳಿಗೆ ಹಂಚಿಕೆ ಮಾಡಿಕೊಡುವಂತೆ ಮನವಿ ಮಾಡಿದರು.

ದೇವರ ಹಿಪ್ಪರಗಿ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಭಾರತಿ ಚಲುವಯ್ಯ, ಆಲಮೇಲ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಪರಿದ ಪಟಾಣ ರವರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಹಾಯಕ ನಿರ್ದೇಶಕ ನಿತ್ಯಾನಂದ ಯಲಗೋಡ, ಸಹಾಯಕ ನಿರ್ದೇಶಕರ ಪಂಚಾಯತ್ ರಾಜ್ ಎ ಎ ದುರ್ಗದ, ಶಿವಾನಂದ ಮೂಲಿಮನಿ, ಶಾಂತನಗೌಡ ನ್ಯಾಮಣ್ಣವರ, ಆಲಮೇಲ ಸಹಾಯಕ ನಿರ್ದೇಶಕ ಶೋಭಾ ಮುದುಗಲ, ಪಿಡಿಒ ನೌಕರರ ಸಂಘದ ಅಧ್ಯಕ್ಷ ಸಂಜೀವ ಕುಮಾರ ದೊಡಮನಿ, ಕಂಪ್ಯೂಟರ್ ಆಪರೇಟರ್ ಸಂಘದ ಅಧ್ಯಕ್ಷರು ಗಳಾದ ಸಂಪತ್ ಕುಮಾರ ಜೈನ ಸಿಂದಗಿ, ಅಕ್ಬರ್  ಇನಾಮದಾರ ಆಲಮೇಲ, ರವಿ ಗೊಟೂರ ದೇವರ ಹಿಪ್ಪರಗಿ ಮತ್ತು ಮೂರು ತಾಲೂಕಿನ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಯವರು, ಕಂಪ್ಯೂಟರ್ ಆಪರೇಟರ್ ಗಳು, ಬಿಲ್ ಕಲೆಕ್ಟರ್ ಗಳು ಮತ್ತು ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group