ಧಾರವಾಡ-.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲ್ಲೂಕಿನ ಹಳ್ಳೂರ ಗ್ರಾಮದ ಮುರಿಗೆಪ್ಪ ಮಾಲಗಾರ ಅವರ ಸಮಾಜ ಸೇವೆಯ ಜೊತೆ ಪತ್ರಿಕೋದ್ಯಮದಲ್ಲಿ ಸೇವೆಯನ್ನು ಪರಿಗಣಿಸಿ ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘ ರಿ ಅವರು ಧಾರವಾಡ ರಂಗಾಯಣ ಸಭಾ ಭವನದಲ್ಲಿ ನಡೆದ ಅಖಿಲ ಕರ್ನಾಟಕ ತೃತೀಯ ಬೈಲಾಟ ಉತ್ಸವ ವಿಚಾರ ಸಂಕಿರ್ಣ ಕೌಜಲಗಿ ನಿಂಗಮ್ಮ ರಾಷ್ಟ್ರೀಯ, ರಾಜ್ಯ ಪ್ರಶಸ್ತಿ 2025 ನೇ ಸಾಲಿನ “ಕನ್ನಡ ರತ್ನ ” ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಈ ಸಮಯದಲ್ಲಿ ಕಾಡಯ್ಯ ಹಿರೇಮಠ ದಿವ್ಯ ಸಾನ್ನಿಧ್ಯ ವಹಿಸಿದ್ದರು. ಡಾ. ಸಿ ಕೆ ನಾವಲಗಿ, ಡಾ ಸಿದ್ದಣ್ಣ ಬಾಡಗಿ, ಶ್ರೀ ಲಕ್ಕಮ್ಮ ದೇವಿ ಕಲಾ ಪೋಷಕ ಸಂಘದ ಅಧ್ಯಕ್ಷರಾದ ಸಿದ್ರಾಮ ನೀಲಜಗಿ, ಮುಖ್ಯ ಅತಿಥಿಗಳಾದ ಎಸ್ ಎಚ್ ಮಿಟ್ಟಲಕೋಡ, ಶಂಕರ ಕುಂಬಿ, ಡಾ ಎಸ್ ಎಸ್ಪಾಪಾಟೀಲ, ಡಾ ಟಿ ತ್ಯಾಗರಾಜ, ಜೆ ಕೆ ಹುಸೇನ್ಬಾಯಿ, ಅಶ್ವಿನಿ ಅಂಗಡಿ, ಡಾ ಜೆ ಎಂ ಬಾದಾಮಿ, ಉಪನ್ಯಾಸಕ ಮಾದೇವ ಪೋತರಾಜ್ ರಿದಂತೆ ರಾಜ್ಯದ ವಿವಿಧ ಕಡೆಯಿಂದ ಆಗಮಿಸಿದ ಪ್ರಶಸ್ತಿ ಪುರಸ್ಕೃತರಿದ್ದರು.