ಕೂಲಿಕಾರರ ಸಾವು ; ಬಡವರ ಬಾಳಲ್ಲಿ ಬಿರುಗಾಳಿ

Must Read

ಮೂಡಲಗಿ:- ಜಿಲ್ಲಾ ಪ್ರದೇಶದಲ್ಲಿ ನಡೆಯುವ ಕಾಮಗಾರಿಗಳಲ್ಲಿ ಕೆಲಸ ಮಾಡಿ ಸಾಕಷ್ಟು ಹಣ ಗಳಿಸಿ ಕುಟುಂಬವನ್ನು ಸುಖವಾಗಿ ಸಾಕುವ ಕನಸಿನೊಂದಿಗೆ ಬೆಳಗಾವಿಗೆ ಹೋಗಿದ್ದ ಗ್ರಾಮೀಣರಿಬ್ಬರು ಕೆಲಸ ಮಾಡುವಾಗಲೇ ಮಣ್ಣು ಕುಸಿದು ದುರ್ಮರಣಕ್ಕೀಡಾದ ದುರಂತ ಎಲ್ಲರ ಮನ ಕಲಕಿದೆ

ಬೆಳಗಾವಿ ಕನಕದಾಸ ವೃತ್ತದಲ್ಲಿ ನಡೆಸುತ್ತಿರುವ ಕಾಮಗಾರಿ, ಅಪಾರ ಪ್ರಮಾಣದ ಮಣ್ಣು ಕುಸಿದು ಮೂಡಲಗಿ ತಾಲೂಕಿನ ಪಟಗುಂದಿ ಗ್ರಾಮದ ಬಸವರಾಜ ಸರವಿ ಹಾಗೂ ಶಿವಲಿಂಗ ಸರವಿ ಇಬ್ಬರು ಸಾವಿಗೀಡಾಗಿದ್ದು ಸುದ್ದಿ ತಿಳಿದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.

ಮನೆಗೆ ಬೆಳಕಾಗಬೇಕಾದವರು ಮಸಣದ ದಾರಿ ಹಿಡಿದರೆ ಬಡವರ ಬಾಳಲ್ಲಿ ಬಿರುಗಾಳಿ ಬಂದಂತಾಗಿದೆ. ಕುಟುಂಬಸ್ಥರ  ಬದುಕು ಕಣ್ಣೀರಿನಲ್ಲಿ  ಮುಳುಗಿ ಹೋದಂತಾಗಿದೆ.
ಈ ಸಾವು ನ್ಯಾಯವೇ.? ಎಂದು,ಪ್ರಶ್ನಿಸುವುದು ಯಾರನ್ನು!

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group