ಕನಾ೯ಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಮಾಸಿಕ ಸಭೆ

Must Read

ನಿಪ್ಪಾಣಿ ತಾಲೂಕಿನ ಕನಾ೯ಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳ ಮಾಸಿಕ ಸಭೆಯು ರವಿವಾರ ಜರುಗಿತು.

ಅಧ್ಯಕ್ಷತೆಯನ್ನು ಮಸಾಪ ಅಧ್ಯಕ್ಷ ಪ್ರೋ ಮಿಥುನ ಅಂಕಲಿ ವಹಿಸಿದ್ದರು ಉಪಾಧ್ಯಕ್ಷ ಸಚಿನ ಕಾಂಬಳೆ, ಮಾರುತಿ ಕೊಣ್ಣುರಿ, ಉಮೇಶ ಪಾಟೀಲ, ವಿಷಯ ಮಂಡಿಸಿದರು

ಸಭೆಯ ಚಚಿ೯ತ ವಿಷಯಗಳು
🔳ನಿಪ್ಪಾಣಿ ತಾಲೂಕಿನಲ್ಲಿ ಮಕ್ಕಳ ಸಾಹಿತ್ಯ ಪೋಷಣೆ
🔳ಮಕ್ಕಳಿಗಾಗಿ ವಿವಿಧ ಕಾರ್ಯಕ್ರಮಗಳ ಆಯೋಜನೆ
🔳ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಸಕ್ರಿಯ ಭಾಗಿ
🔳ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಗೌರವವಿಸುವುದು
🔳ನಿಪ್ಪಾಣಿ ತಾಲೂಕಿನಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆ
🔳ಪ್ರತಿ ಪ್ರೌಢ ಶಾಲೆಗಳಲ್ಲಿ ಮಹಾವಿದ್ಯಾಲಯಗಳಲ್ಲಿ ವ್ಯಕ್ತಿತ್ವ ವಿಕಸನ ಉಪನ್ಯಾಸ ಆಯೋಜನೆ
🔳ಕನ್ನಡ ನಾಡು ನುಡಿ ಗಡಿ ರಕ್ಷಣೆ, ಕನ್ನಡ ಶಾಲೆಗಳ ದಾಖಲಾತಿಗೆ ಸಹಕರಿಸುವುದು
🔳ತಾಲೂಕಿನ ಮಕ್ಕಳಿಂದ ಕವನ,ಕಥೆ ಬರೆಸುವುದು

ಹೀಗೆ ವಿವಿಧ ವಿಷಯಗಳ ಮೇಲೆ ಸುದೀರ್ಘ ಚರ್ಚೆ ನಡೆದು ಸಭೆ ವಿರಾಮ ಕಂಡಿತು. ಆರಂಭದಲ್ಲಿ ಮಸಾಪ ಸಂಘಟನಾ ಕಾರ್ಯದರ್ಶಿ ಸೌ .ಸಮಿರಾ ಬಾಗೆವಾಡಿ ಎಲ್ಲರನ್ನೂ ಸ್ವಾಗತಿಸಿದರೆ ಸಂಘಟನಾ ಸದಸ್ಯರಾದ ಸಂತೋಷ ಮಗದುಮ್ಮ ವಂದಿಸಿದರು. ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ಶಿವಾನಂದ ಪುರಾಣಿಕಮಠ ಸಹಿತ ರಾಜು ಪಾಟೀಲ ಎಲ್ಲಾ ಪದಾಧಿಕಾರಿಗಳು ಉಪಸ್ಥಿತರಿದ್ದರು

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group