ಬೆಂಗಳೂರಿನ ಬಸವನಗುಡಿ ಉತ್ತರಾದಿ ಮಠದಲ್ಲಿ ವಾಗ್ದೇವಿ ಭಜನಾ ಮಂಡಳಿಯ 35ನೇ ವಾರ್ಷಿಕೋತ್ಸವ ಹರಿದಾಸನಮನ ಕಾರ್ಯಕ್ರಮ ಕ್ಕೆ ಪೂಜ್ಯ ಸುವಿದ್ಯೇಂದ್ರ ತೀರ್ಥ ಶ್ರೀಪಾದರು ದೀಪ ಬೆಳಗಿ ಚಾಲನೆ ನೀಡಿ ಮಾತನಾಡಿ ಕಳೆದ 35 ವರ್ಷಗಳಿಂದ ಮಾತೆಯರಿಗೆ ನಮ್ಮ ಸನಾತನ ಪರಂಪರೆಯ ಸಾರರೂಪವಾದ ಹರಿದಾಸ ಸಾಹಿತ್ಯ ಅನೇಕ ಪ್ರಕಾರ ಗಳನ್ನು ಹೇಳಿಕೊಟ್ಟು ಸಂಸ್ಕೃತಿ ಪ್ರವರ್ಧನೆ ಯಲ್ಲಿ ಅನನ್ಯ ಕೊಡುಗೆ ನೀಡಿತ್ತಿರುವ ಡಾ ಎ ಕುಮುದ ರವರ ಕಾರ್ಯ ಶ್ಲಾಘನೀಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಡಾ. ಎ ಕುಮುದ ರವರು ಸಂಕಲನ ಮತ್ತು ಸಂಪಾದನೆ ಮಾಡಿರುವ ಶ್ರೀ ಲಕ್ಷ್ಮಿ ನರಸಿಂಹ ಭಜನಾವಳಿ ಕೃತಿಯನ್ನು ಖ್ಯಾತ ಹರಿದಾಸಸಾಹಿತ್ಯ ವಿದ್ವಾಂಸ ಡಾ ಅರಳುಮಲ್ಲಿಗೆ ಪಾರ್ಥಸಾರಥಿ ಲೋಕಾರ್ಪಣೆ ಗೊಳಿಸಿದರು.
ಡಾ ಎ ಕುಮುದರವರು’ಹರಿದಾಸ ಸಾಹಿತ್ಯದಲ್ಲಿ ಮಹಾಲಕ್ಷ್ಮಿಯ ಪರಿಕಲ್ಪನೆ’ಎಂಬ ಸಂಶೋಧನಾತ್ಮಕ ಪ್ರಬಂಧ ಸಲ್ಲಿಸಿ ಶ್ರೀಪಾದರಾಜಮಠದ ಅಂಗಸಂಸ್ಥೆಯಾದ ರಾಷ್ಟ್ರೀಯ ವೇದ ವಿಜ್ಞಾನ ಸಂಸ್ಥೆಯಿಂದ ಡಾಕ್ಟರೇಟ್ ಪದವಿಯನ್ನು ಪಡೆದಿರುತ್ತಾರೆ .
ಜಯತೀರ್ಥ ವಿದ್ಯಾಪೀಠದ ಪ್ರಾಂಶುಪಾಲ ಡಾ ಸತ್ಯಧ್ಯಾನಾಚಾರ್ಯ ಕಟ್ಟಿ, ಹರಿದಾಸ ಸಾಹಿತ್ಯ ಚಿಂತಕಿ ಡಾ ರಾಜಲಕ್ಷ್ಮಿ ಪಾರ್ಥಸಾರಥಿ, ಶ್ರೀನಿವಾಸ ಉತ್ಸವ ಬಳಗ ಸಂಸ್ಥಾಪಕ ಡಾ ವಾದಿರಾಜ ತಾಯಲೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.