ಹಾಸನದ ಕಲಾಭವನದ ಹೊರ ಆವರಣದಲ್ಲಿ ಒಡನಾಡಿ ಚಿತ್ರಕಲಾ ಬಳಗ ಭಾನುವಾರ ಮತ್ತು ಸೋಮವಾರ ಎರಡು ದಿನ ಚಿತ್ರಕಲಾ ಶಿಕ್ಷಕರು, ಕಲಾವಿದರು ವಸಂತಕುಮಾರ್ ಅವರ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಏರ್ಪಡಿಸಿತ್ತು.
ಪ್ರದರ್ಶನದಲ್ಲಿ ಇವರ ಸೃಜನಾತ್ಮಕ ೨೭ ಕಲಾಕೃತಿಗಳು ವೀಕ್ಷಕರ ಗಮನ ಸೆಳೆದವು. ವಸಂತಕುಮಾರ್ ಸಾರಥ್ಯದ ಒಡನಾಡಿ ಪ್ರತಿ ವರ್ಷ ಜೂನ್ ೫ರ ವಿಶ್ವ ಪರಿಸರ ದಿನಾಚರಣೆ ದಿನದಂದು ಶಾಲಾ ಮಕ್ಕಳಿಗೆ ಚಿತ್ರಕಲೆ ಸ್ಫರ್ಧೆ ಏರ್ಪಡಿಸಿ ಬಹುಮಾನ ವಿತರಣೆ ದಿನ ತಮ್ಮ ಹೊಸ. ಪೇಂಟಿಂಗ್ಸ ಗಳನ್ನು ಪ್ರದರ್ಶಿಸುತ್ತಾ ಬಂದಿದ್ದಾರೆ. ಈ ಬಾರಿ ವಿಶೇಷವಾಗಿ ಪೊಟ್ರೆಂಟ್ ವರ್ಕ್ಸ್ನಲ್ಲಿ ಜಿಲ್ಲೆಯ ಸಾಧಕರನ್ನು ಕುಂಚದಲ್ಲಿ ಸೆರೆ ಹಿಡಿದಿದ್ದರು.
ಡ್ರಾಯಿಂಗ್ ಶೀಟ್ ಪೆನ್ಸಿಲ್ ವರ್ಕ್ಸನಲ್ಲಿ ಬೂಕರ್ ಪ್ರಶಸ್ತಿ ಪುರಸ್ಕೃತ ಕತೆಗಾರ್ತಿ ಶ್ರೀಮತಿ ಭಾನು ಮುಷ್ತಾಕ್ ಮೇಡಂರನ್ನು ಚಿತ್ರಿಸಿದ್ದರೆ ಚಾರ್ಕೋಲ್ ಪೆನ್ಸಿಲ್ ವರ್ಕ್ಸ್ನಲ್ಲಿ ಭಾರತದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಚಿತ್ರಕಲೆಯಲ್ಲಿ ಅಂತರಾಷ್ಟ್ರೀಯ ಮನ್ನಣೆ ಪಡೆದ ಕೆ.ಟಿ.ಶಿವಪ್ರಸಾದ್ ಹಾಗೂ ಇಸ್ರೋ ಮಾಜಿ ಅಧ್ಯಕ್ಷರು ಕಿರಣ್ಕುಮಾರ್ ಇವರ ಭಾವಚಿತ್ರವನ್ನು ರಚಿಸಿ ತಮ್ಮ ಕಲಾಕೌಶಲ್ಯದಿ ಸಾಧಕರಿಗೆ ಗೌರವ ಸಮರ್ಪಿಸಿದ್ದರು.
ಇನ್ನೂ ಇವರ ಹ್ಯಾಂಡ್ ಲ್ಯಾಂಡ್ ಸ್ಕೇಪ್ ಗೆ ಪಳಗಿದೆ. ಪ್ರಕೃತಿ ಚಿತ್ರಣಕ್ಕಾಗಿ ಇವರು ಈ ಬಾರಿ ರಸ್ತೆಬದಿಯ ಮರಗಳನ್ನು ಆರಿಸಿಕೊಂಡಿದ್ದರು. ಅಂತಹ ಮೂರು ಕಲಾಕೃತಿಗಳು ಅರಸೀಕೆರೆ ಹುಳಿಯಾರು ಮಾರ್ಗದಲ್ಲಿ ಕಣ್ಣಿಗೆ ಬಿದ್ದು ಮಳೆಗಾಳಿಗೆ ಉರುಳಿ ಬೀಳುವ ಮೊದಲು ತೈಲವರ್ಣದಲ್ಲಿ ಮರೂ ರೂಪ ಪಡೆದಿವೆ. ಇನ್ನೊಂದಿಷ್ಟು ಮರಗಳು ಹಾಸನ ತಿಪಟೂರು ರಸ್ತೆಯ ಚಿಂಡೇನಹಳ್ಳಿ ಗ್ರಾಮದಲ್ಲಿ ಕಂಡು ಹ್ಯಾಂಡ್ ಮೇಡ್ ಶೀಟ್ನಲ್ಲಿ ಜಲವರ್ಣದಲ್ಲಿ ಸೃಷ್ಟಿಯಾಗಿವೆ. ಚಾರ್ಕೋಲ್ ಶೀಟ್ಗಳಲ್ಲಿ ಎಂಟು ಚಾರ್ಕೋಲ್ ಪೆನ್ಸಿಲ್ ವರ್ಕ್ನ ರಚನೆಗಳ, ಏಳು ಡ್ರಾಯಿಂಗ್ ಶೀಟ್ನಲ್ಲಿ ಪೆನ್ಸಿಲ್ ವರ್ಕ್ಗಳು ಕ್ಯಾನವಾಸ್ ಕ್ಲಾತ್ ನ ಮೂರು ಅಕ್ರಾಲಿಕ್ ಮಾಧ್ಯಮದ ಕಲಾಕೃತಿಗಳು ಇವರ ನವ್ಯ ರಚನೆಗಳಾಗಿವೆ. ಇವರ ಕಲಾ ಸಾಧನೆ ಗುರುತಿಸಿ ಜಿಲ್ಲಾಡಳಿತವು ಈ ಹಿಂದೆಯೇ ಇವರಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ.
ಚಿತ್ರಕಲೆ ರಚನೆಯು ದುಬಾರಿ ಸಾಹಸವಾಗಿದೆ. ಅಕಾಡೆಮಿಯ ಸಹಕಾರವಿಲ್ಲದೇ ಕಲಾವಿದರು ತಮ್ಮ ಕಲಾಕೃತಿಗಳನ್ನು ಪ್ರದರ್ಶಿಸಲು ಮುಂದೆ ಬರುವುದೇ ಹರಸಾಹಸವಾಗಿದೆ. ಇಂತಿಪ್ಪ ವಸಂತಕುಮಾರ ತಮ್ಮ ಚಿತ್ರಕಲಾ ವೃತ್ತಿಯ ನಡುವೆ ಸಿಕ್ಕುವ ಬಿಡುವಿನಲ್ಲಿ ಸೃಜನಶೀಲ ಕಲಾಕೃತಿಗಳನ್ನು ರಚಿಸಿ ಪ್ರದರ್ಶಿಸುತ್ತಿರುವುದು ಸೋಜಿಗದ ಸೂಜಿ ಮಲ್ಲಿಗೆಯೇ ಸೈ.
ಗೊರೂರು ಅನಂತರಾಜು, ಹಾಸನ.
ಮೊ: ೯೪೪೯೪೬೨೮೭೯
ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ಶ್ರೀ ಶನೀಶ್ವರ ದೇವಸ್ಥಾನ ರಸ್ತೆ, ಹಾಸನ.