ಮೂಡಲಗಿ -ತಾಲೂಕಿನ ಶಿವಾಪೂರ (ಹ) ಗ್ರಾಮದ ಶ್ರೀ ಅಡವಿಸಿದ್ದೇಶ್ವರ ಮಠದಲ್ಲಿ ನಡೆದಿರುವುದು ಗುರು-ಭಕ್ತರ ಸಂಬಂಧ ಅಷ್ಟೇ ಎಂದ ಅಡವಿಸಿದ್ದೇಶ್ವರ ಸ್ವಾಮೀಜಿ ಹೇಳಿದರು.
ಭಕ್ತರ ಸಹಾಯ, ಸಹಕಾರದಿಂದ ಎರಡು ವರ್ಷಗಳಿಂದ ಧಾರ್ಮಿಕ ಕಾರ್ಯಕ್ರಮಗಳು ಮಠದಲ್ಲಿ ನಡೆದಿದ್ದವು. ಈಗಲು ಭಕ್ತರ ಆಸೆಯಂತೆಯೇ ನಾನು ನಡೆದುಕೊಳ್ಳವೆ.ನನಗೆ ನೋವು ಆಗಿರುವುದು ಸತ್ಯ, ಆದ್ರೆ ನಾನು ಯಾರ ಮೇಲು ಗೂಬೆ ಕೂರಿಸುವುದಿಲ್ಲ.ನನ್ನ ನೋವು ನನ್ನ ಜೊತೆಯಲ್ಲಿ ಇರಲಿ, ನನ್ನಿಂದ ಯಾರ ಮನಸ್ಸಿಗೆ ನೋವುಂಟು ಮಾಡಲು ನನಗೆ ಇಚ್ಛೆ ಇಲ್ಲ.
ಈಗಲು ನಾನು ತಪ್ಪು ಮಾಡಿಲ್ಲ ಅಂತ ಹೇಳುವೇ, ಮಠಕ್ಕೆ ಯಾರೇ.. ಬರಲಿ ಜಾತಿ ಭೇದ ಇಲ್ಲ.ನಾನು ಯಾವತ್ತೂ ಜಾತಿಯ ತಾರತಮ್ಯ ಮಾಡಿರುವುದಿಲ್ಲ.ನಾನು ಸನ್ಯಾಸಿ ನನಗೆ ಜೋಳಿಗೆ ಇದೆ, ಭಕ್ತರ ಸಹಕಾರ ಕೂಡಾ ಇರುವುದು, ನಾನು ಎಲ್ಲಿದ್ದರೂ ಭಕ್ತರ ಸುಖ ದುಃಖಗಳಲ್ಲಿ ಭಾಗಿಯಾಗುವೆ. ಮಠದಲ್ಲಿ ಎಲ್ಲರೂ ಸಮಾನರು. ಮಠಕ್ಕೆ ಬಂದಂಥ ಭಕ್ತರನ್ನು ಕರೆಯುವುದು ನಮ್ಮ ಸೌಜನ್ಯದ ಸಂಕೇತ ಎಂದರು
ಭಕ್ತರ ದಾರಿಯೇ..ನನ್ನ ದಾರಿ ಎಂದು ನೊಂದ ಮನಸ್ಸಿನಿಂದ ಅಡವಿಸಿದ್ದರಾಮ ಸ್ವಾಮೀಜಿ ಹೇಳಿದರು.
ಶಿವಾಪೂರ (ಹ) ಗ್ರಾಮದ ಶ್ರೀ ಅಡವಿ ಸಿದ್ದೇಶ್ವರ ಮಠದ ಸ್ವಾಮೀಜಿಗಳಾದ ಸಿದ್ಧರಾಮ ಶ್ರೀಗಳ ವಿರುದ್ಧ ಇತ್ತೀಚೆಗೆ ಮಹಿಳೆಯರನ್ನು ಮಠದಲ್ಲಿ ಉಳಿದುಕೊಳ್ಳು ಬಿಟ್ಟ ಆರೋಪ ಗ್ರಾಮಸ್ಥರಿಂದ ಬಂದು ಅವರನ್ನು ಮಠದಿಂದ ಹೊರಹಾಕಲಾಗಿತ್ತು ಆದರೆ ಘಟನೆಯ ಕುರಿತಂತೆ ಗ್ರಾಮದಲ್ಲಿಯೇ ಎರಡು ಬಣಗಳಾಗಿದ್ದು ಒಂದು ಬಣ ಸ್ವಾಮೀಜಿಯವರ ತಪ್ಪಿದೆ ಎಂದರೆ ಇನ್ನೊಂದು ಬಣ ತಪ್ಪಿಲ್ಲ ಎಂದಿದೆ.
ಹಾಗೆ ನೋಡಿದರೆ ಮಠದಲ್ಲಿ ಯಾವುದೇ ಅಶ್ಲೀಲ ಘಟನೆಗಳು ನಡೆದಿಲ್ಲ ಆದರೆ ದೂರದಿಂದ ಮಠಕ್ಕೆ ಬಂದಿದ್ದ ಇಬ್ಬರು ಮಹಿಳೆಯರು ರಾತ್ರಿ ಹೊತ್ತಿನಲ್ಲಿ ಮಠದಲ್ಲಿಯೇ ಉಳಿದುಕೊಂಡಿದ್ದನ್ನು ಅಕ್ಷೇಪಿಸಿದ ಕೆಲವು ಗ್ರಾಮಸ್ಥರು ಕೋಪಗೊಂಡು ಸ್ವಾಮೀಜಿಯವರ ಮೇಲೆ ಹಲ್ಲೆ ಮಾಡಿ ಹೊರಹಾಕಿದ್ದರು.
ಆದರೆ ಗ್ರಾಮದಲ್ಲಿ ಸ್ವಾಮೀಜಿಯವರನ್ನು ಕಂಡರಾಗದ ಕೆಲವು ವ್ಯಕ್ತಿಗಳು ಅವರ ವಿರುದ್ಧ ಪಿತೂರಿ ಮಾಡಿದ್ದಾರೆ ಎಂಬ ಒಂದು ಅಭಿಪ್ರಾಯವೂ ವ್ಯಕ್ತವಾಗಿದ್ದು ಕೆಲವು ಗ್ರಾಮಸ್ಥರು ಸೇರಿ ಗೋಕಾಕದ ಶೂನ್ಯ ಸಂಪಾದನ ಮಠಕ್ಕೆ ಹೋಗಿ ಸಿದ್ಧರಾಮ ಸ್ವಾಮೀಜಿಯವರನ್ನು ಮತ್ತೆ ಮಠಕ್ಕೆ ಕರೆತಂದಿದ್ದಾರೆ ಎನ್ನಲಾಗಿದೆ.
ಈ ಎಲ್ಲ ಘಟನೆಯಲ್ಲಿ ಯಾವುದೇ ಅಹಿತಕರ ಘಟನೆಗಳಾಗದಂತೆ ಮೂಡಲಗಿಯ ಸಿಪಿಐ ಶ್ರೀಶೈಲ ಬ್ಯಾಕೂಡ ಹಾಗೂ ಪಿಎಸ್ಐ ರಾಜು ಪೂಜೇರಿ ಮುತುವರ್ಜಿ ವಹಿಸಿ ಘಟನೆಯನ್ನು ನಿಭಾಯಿಸಿದ್ದು ಎಲ್ಲವೂ ಸುಖಾಂತವಾಗಲಿದೆ ಎಂಬ ನಿರೀಕ್ಷೆಯಿದೆ ಎನ್ನಲಾಗಿದೆ.
ಉಮೇಶ ಬೆಳಕೂಡ