ಬೆಳಗಾವಿ – ದಕ್ಷಿಣ ಮಹಾರಾಷ್ಟ್ರ ಶಿಕ್ಷಣ ಮಂಡಳಿಯ ಜ್ಯೋತಿ ಸೆಂಟ್ರಲ್ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರಾದ ಶ್ರೀಮತಿ ಸೋನಾಲಿ ಕಂಗ್ರಾಳ್ಕರ ಅವರ ಮಾರ್ಗದರ್ಶನದಲ್ಲಿ ಸಿಬಿಎಸ್ಇ ಶಿಕ್ಷಕರಿಗಾಗಿ “ವಿಮರ್ಶಾತ್ಮಕ ಮತ್ತು ಸೃಜನಶೀಲ ಚಿಂತನೆ” ಕುರಿತು ಎರಡು ದಿನಗಳ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
ಈ ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾಗಿ ಸಂಕೇಶ್ವರದ ಎ.ಬಿ. ಪಾಟೀಲ ಪಬ್ಲಿಕ್ ಶಾಲೆಯ ಸಂಯೋಜಕರಾದ ಶ್ರೀಮತಿ ಗುಲ್ತಾಜ್ ಖಾನ್ ಮತ್ತು ಬೆಳಗಾವಿಯ ಲವ್ಡೇಲ್ ಸೆಂಟ್ರಲ್ ಶಾಲೆಯ ಸಿಬಿಎಸ್ಇ ಆಡಳಿತಾಧಿಕಾರಿ ಶ್ರೀಮತಿ ಕವಿತಾ ಕುಲಕರ್ಣಿ ಈ ಕಾರ್ಯಾಗಾರವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
ಬೆಳಗಾವಿ ಜಿಲ್ಲೆಯ ಸಿಬಿಎಸ್ಇ ಶಾಲೆಗಳಿಂದ ಒಟ್ಟು 60 ಶಿಕ್ಷಕರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು ಮತ್ತು ಕಾರ್ಯಕ್ರಮವನ್ನು ಶಾಲಾ ಶಿಕ್ಷಕಿ ಶ್ರೀಮತಿ ಕೃಪಾ ಕದಮ ನಿರ್ವಹಿಸಿದರು.