ಬಾಗಲಕೋಟೆ : ಭಾರತೀಯ ಜೀವ ವಿಮಾ ನಿಗಮದ, ಎಲ್ಲಾ ಶಾಖೆಗಳಲ್ಲಿ ಜುಲೈ 11ರಂದು 2025 ರಂದು “ನವಜೀವನಶ್ರೀ” ಎಂಬ ಹೊಸ ಪಾಲಿಸಿಯನ್ನು ನವನಗರದ ಶಾಖೆಯಲ್ಲಿ ಶಾಖಾಧಿಕಾರಿ, ರಕ್ಷಿತ್ ಎಂ ಡಿ ನೇತೃತ್ವದಲ್ಲಿ ಅಭಿವೃದ್ಧಿ ಅಧಿಕಾರಿಗಳು, ಸಿಬ್ಬಂದಿಗಳು ಪ್ರತಿನಿಧಿಗಳು ಮತ್ತು ಪಾಲಿಸಿದಾರರೊಂದಿಗೆ ದೀಪ ಬೆಳಗಿಸುವ ಮುಖಾಂತರ ಮಾರಾಟಕ್ಕಾಗಿ ಬಿಡುಗಡೆ ಮಾಡಲಾಯಿತು
ನಂತರ ಶಾಖಾಧಿಕಾರಿ ರಕ್ಷಿತ್ ಎಂ ಡಿ ಮಾತನಾಡಿ ನವ ಜೀವನ್ ಶ್ರೀ ಪಾಲಿಸಿಯು ಭಾರತೀಯ ಜೀವ ವಿಮಾ ನಿಗಮ (LIC) ದಿಂದ ಒದಗಿಸಲಾದ ಉಳಿತಾಯ ಮತ್ತು ವಿಮಾ ರಕ್ಷಣೆ ಎರಡನ್ನೂ ಒದಗಿಸುವ ಒಂದು ವಿಮಾ ಯೋಜನೆಯಾಗಿದೆ. ಇದು ಸೀಮಿತ ಪ್ರೀಮಿಯಂ ಪಾವತಿ ಆಯ್ಕೆಯನ್ನು ಹೊಂದಿದ್ದು, ಕಡಿಮೆ ವಯಸ್ಸಿನಿಂದಲೇ ಉಳಿತಾಯ ಪ್ರಾರಂಭಿಸಿ ದೊಡ್ಡ ಮೊತ್ತದ ಹಣವನ್ನು ನಿವೃತ್ತಿಯ ಸಮಯದಲ್ಲಿ ಪಡೆಯಲು ಸಹಾಯ ಮಾಡುತ್ತದೆ.
ಈ ಯೋಜನೆಯ ಪ್ರಮುಖ ಅಂಶಗಳು:
ಸೀಮಿತ ಪ್ರೀಮಿಯಂ ಪಾವತಿ, 6, 8, 10, ಅಥವಾ 12 ವರ್ಷಗಳವರೆಗೆ ಪ್ರೀಮಿಯಂ ಪಾವತಿಸಬಹುದು ಮತ್ತು ಪಾಲಿಸಿ ಅವಧಿಯು 10 ರಿಂದ 16 ವರ್ಷಗಳವರೆಗೆ ಇರುತ್ತದೆ.
ಗರಿಷ್ಠ 20 ವರ್ಷಗಳ ಅವಧಿ:
ಪಾಲಿಸಿಯು ಗರಿಷ್ಠ 20 ವರ್ಷಗಳವರೆಗೆ ಮುಂದುವರಿಯುತ್ತದೆ.
ಕನಿಷ್ಠ ವಿಮಾ ಮೊತ್ತ:
ಕನಿಷ್ಠ ವಿಮಾ ಮೊತ್ತ 5 ಲಕ್ಷ ರೂಪಾಯಿಗಳು.
ಖಾತರಿಪಡಿಸಿದ ಸೇರ್ಪಡೆಗಳು:
ಪಾಲಿಸಿಯಲ್ಲಿ ಖಾತರಿಪಡಿಸಿದ ಸೇರ್ಪಡೆಗಳು ಅನ್ವಯವಾಗುತ್ತವೆ, ಇದು ನಿಮ್ಮ ಪಾಲಿಸಿ ಅವಧಿಯನ್ನು ಅವಲಂಬಿಸಿರುತ್ತದೆ ಮತ್ತು ಪಾವತಿಸಿದ ಪ್ರೀಮಿಯಂನ 8.50% ರಿಂದ 9.50% ರಷ್ಟಿರುತ್ತದೆ.
ಪ್ರೀಮಿಯಂ ಪಾವತಿ ಆಯ್ಕೆಗಳು:
ಪ್ರೀಮಿಯಂಗಳನ್ನು ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ ಅಥವಾ ವಾರ್ಷಿಕವಾಗಿ ಪಾವತಿಸಬಹುದು.
ಯಾವುದೇ ಮಿತಿ ಇಲ್ಲ:
ಗರಿಷ್ಠ ವಿಮಾ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.
ಕುಟುಂಬಕ್ಕೆ ಆರ್ಥಿಕ ಭದ್ರತೆ:
ಉಳಿತಾಯದ ಜೊತೆಗೆ, ನಿಮ್ಮ ಕುಟುಂಬಕ್ಕೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತದೆ.
ಷೇರು ಮಾರುಕಟ್ಟೆಯ ಭಯವಿಲ್ಲ: ಈ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ಷೇರು ಮಾರುಕಟ್ಟೆಯ ಏರಿಳಿತದ ಭಯವಿಲ್ಲ. ಹೂಡಿಕೆ ಮತ್ತು ವಿಮೆಯ
ಸಂಯೋಜನೆ:
ಉಳಿತಾಯ ಮತ್ತು ವಿಮಾ ರಕ್ಷಣೆಯನ್ನು ಒದಗಿಸುವ ಒಂದು ವಿಶಿಷ್ಟವಾದ ಸಂಯೋಜನೆಯಾಗಿದೆ.
ತ್ವರಿತ ನಿರ್ಧಾರ: ಈ ಯೋಜನೆಗಳು ಕೇವಲ 9 ತಿಂಗಳ ಅವಧಿಗೆ ಮಾತ್ರ ಲಭ್ಯವಿರುವುದರಿಂದ ಬೇಗ ನಿರ್ಧಾರ ತೆಗೆದುಕೊಳ್ಳುವುದು ಉತ್ತಮ.
ಒಟ್ಟಾರೆಯಾಗಿ, ನವ ಜೀವನ್ ಶ್ರೀ ಪಾಲಿಸಿಯು ಉಳಿತಾಯ, ಹೂಡಿಕೆ ಮತ್ತು ವಿಮಾ ರಕ್ಷಣೆಯನ್ನು ಬಯಸುವ ವ್ಯಕ್ತಿಗಳಿಗೆ ಒಂದು ಉತ್ತಮ ಆಯ್ಕೆಯಾಗಿದೆ. ಅಭಿವೃದ್ಧಿ ಅಧಿಕಾರಿ ಎಆರ್ ಜಂಬಗಿ ಮಾತನಾಡಿ ಈ ಪಾಲಿಸಿಯನ್ನು ಎಲ್ಲ ವಯಸ್ಸಿನವರು ಖರೀದಿಸಬಹುದಾಗಿದೆ ಮುಖ್ಯವಾಗಿ ಮಕ್ಕಳಿಗೆ ಚಿಕ್ಕವಯಸ್ಸಿನಲ್ಲಿ ಖರೀದಿಸಿದರೆ ಹೆಚ್ಚು ಉಪಯುಕ್ತ ವಾಗುತ್ತದೆ ಎಂದು ಅವರು ವಿವರಿಸಿದರು. ಎಲ್ಐಸಿ ಕಚೇರಿಯ ಸಿಬ್ಬಂದಿಗಳು ಪ್ರತಿನಿಧಿಗಳು ಪಾಲಿಸಿದಾರರು ಭಾಗವಹಿಸಿದ್ದರು

