ಮಹಾದಾಸೋಹಿ‌. ಡಾ.ಶರಣಬಸಪ್ಪ ಅಪ್ಪ ಲಿಂಗೈಕ್ಯ ; ಮುಗಳಖೋಡದಲ್ಲಿ ಶೋಕಾಚರಣೆ

Must Read

ಮುಧೋಳ –  ಧಾರ್ಮಿಕ ಧುರೀಣ ಮಹಾದಾಸೋಹಿ ಡಾ. ಶರಣಬಸಪ್ಪ ಅಪ್ಪಗಳ ಅಗಲಿಕೆ ತೀವ್ರತರದ ನೋವನ್ನುಂಟು ಮಾಡಿದೆ ಎಂದು ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಶರಣಬಸವ ಶಾಸ್ತ್ರಿಗಳು ಶೋಕ ವ್ಯಕ್ತಪಡಿಸಿದರು..

ತಾಲೂಕಿನ ಮುಗಳಖೋಡದಲ್ಲಿ ಶೋಕಾಚರಣೆಯಲ್ಲಿ ಮಾತನಾಡುತ್ತಾ ಕಲಬುರ್ಗಿಯ ಶರಣಬಸವೇಶ್ವರ ಶ್ರೀ ಮಠದ ಪೂಜ್ಯರಾದ ಶರಣಬಸಪ್ಪ ಅಪ್ಪಗಳು ಶೈಕ್ಷಣಿಕ,  ಧಾರ್ಮಿಕ, ಸಾಮಾಜಿಕವಾಗಿ ಕ್ರಾಂತಿ ಮಾಡಿದ ಹರಿಕಾರರು ಆಗಿದ್ದರು ಎಂದರು.

ಶೋಕಾಚರಣೆ ಯಲ್ಲಿ ಪಾಲ್ಗೊಂಡ ಶ್ರೀ ಮನ್ ನಿಜಗುಣ ಶಿವಯೋಗಿ ರಾಷ್ಟ್ರೀಯ ಪ್ರತಿಷ್ಠಾನದ ಮುಖಂಡರಾದ ಪಿ.ಬಿ.ಸುಣಗಾರ, ಶಂಕರಗೌಡ ಪಾಟೀಲ, ಶಂಕರ ಕುಲಕರ್ಣಿ, ಮಹಾಲಿಂಗಯ್ಯ ಹಿರೇಮಠ, ಚನ್ನಪ್ಪ ಕುಂಬಾರ, ಲೋಕನಾಯಕಿ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ಎಲ್.ಶ್ಯಾಮಲಾ.ಶಿವಲಿಂಗವ್ವ ಪೋಲಿಸ್ ಮುಂತಾದವರು ಶೋಕ ವ್ಯಕ್ತಪಡಿಸಿದರು.

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group