ಹಳ್ಳೂರ – ಮೂಡಲಗಿ ತಾಲೂಕಿನ ರಾಜಾಪುರ ಗ್ರಾಮದಲ್ಲಿ ರಾಷ್ಟ್ರೀಯ ಅಹಿಂದ ಸಂಘಟನೆ ಹಾಗೂ ಡಾಕ್ಟರ್ ನಾಗಲಕ್ಷ್ಮಿ ಚೌದ್ರಿ ಅಭಿಮಾನಿ ಬಳಗ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಎಂಟು ಸರಕಾರಿ ಶಾಲೆಗಳಲ್ಲಿ 1500 ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಉಚಿತವಾಗಿ ಸಂಘಟನೆ ವತಿಯಿಂದ ಹಾಗೂ ಮಹೇಂದ್ರ ಮನೋತೆರವರು ಸಮಾಜ ಸೇವಕರು ಅವರ ಸಹಕಾರದೊಂದಿಗೂ ರಾಜಾಪುರ ಗ್ರಾಮದ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಕಲಿಯೋದಕ್ಕಾಗಿ ನೋಟಬುಕ್ಕು ಹಾಗೂ ಪೆನ್ನು ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮದ ಹಿರಿಯರು ಎಸ್ ಎಲ್ ಡಿ ಬಿ ಬ್ಯಾಂಕಿನ ನಿರ್ದೇಶಕರು ರಾಜು ಎಸ್ ಬೈರೂಗೋಳ ಅವರು ವಹಿಸಿದ್ದರು.
ಭೀಮಶಿ ಪುಂ ಕೆಂಪವ್ವಗೋಳ ಜಿಲ್ಲಾಧ್ಯಕ್ಷರು ಯುವ ಘಟಕ ರಾಷ್ಟ್ರೀಯ ಅಹಿಂದ ಸಂಘಟನೆ (ರಿ) ಬೆಳಗಾವಿ, ರವಿಕುಮಾರ ರಾಯಣ್ಣ ಸಮಾಜ ಸೇವಕರು ಶ್ರೀಮತಿ ರೇಖಾ ಬ್ರಹ್ಮಾನಂದ ಪುಂಜಪ್ಪಗೋಳ ರಾಜ್ಯಾಧ್ಯಕ್ಷರು ಮಹಿಳಾ ರಾಷ್ಟ್ರೀಯ ಅಹಿಂದ ಸಂಘಟನೆ ಹಾಗೂ ಕಾಗವಾಡ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರು ಗೋಪಾಲ ಕಮತಿ, ಉದ್ದಪ್ಪ ಜೇಟ್ಟವನರ, ಮಹೇಶ ಸನದಿ, ಗೋಪಾಲ ಪುಂ ಕೆಂಪವ್ವಗೋಳ, ಬಾಳೇಶಿ ಮುನ್ನೋಳಿ, ರಾಜ್ಯಾಧ್ಯಕ್ಷರು ಯುವ ಘಟಕ ರಾಷ್ಟ್ರೀಯ ಅಹಿಂದ ಸಂಘಟನೆ (ರಿ) ಉತ್ತರ ಕರ್ನಾಟಕ ಕೆಂಪಣ್ಣ ಜಿವನಿ, ಗೋಪಾಲ ಪಾಕಪಟ್ಟಿ, ಸುರೇಶ ಬೈರುಗೋಳ, ಸುರೇಶ ಎಣ್ಣೆ, ರಾಘು ಬಡಿಗೇರ, ರುದ್ರಪ್ಪ ಮುತ್ನಾಳ, ಗೋಪಾಲ ಸವಸುದ್ದಿ, ಸಿದ್ದು ಯಕ್ಕುಂಡಿ, ಮಲಿಕ ನದಾಫ, ಲಗಮಣ್ಣ ದಂಡಿನ, ಚೊನಪ್ಪ ಲ ಪಾಕಪಟ್ಟಿ, ನಾಮದೇವ ಕಮತಿ, ಪರಸಪ್ಪ ಪವಾರ, ಸದಾಶಿವ ಹೂಸೂರ, ಮಾರುತಿ ಡೋಳಿ, ಮಲಿಕಸಾಬ ನಾಗಾರ್ಜಿ, ಲಲಾಸಾಬ ನದಾಫ , ಗೋಪಾಲ ಪವಾರ, ವಿಠ್ಠಲ ಬಾ ಪಾಟೀಲ, ರಮೇಶ ಪತ್ತಾರ, ರಾಘವೇಂದ್ರ ಪತ್ತಾರ, ಅನಿಲ ಪತ್ತಾರ, ಲಕ್ಷ್ಮಣ ಯಕ್ಸಂಬಿ ಹಾಗೂ ಎಂಟು ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷರು ಸರ್ವ ಸದಸ್ಯರು ಭಾಗವಹಿಸಿದ್ದರು.
ಪ್ರಧಾನ ಗುರುಗಳು ಸ್ವಾಗತಿಸಿದರು