ಕವನ : ನಗಬೇಕು

Must Read

ನಗಬೇಕು

ನಗಬೇಕು ಅಳುವ ಮರೆತು
ಮುಂದೆ ಕಾದಿದೆ ಜೀವನ
ಕಷ್ಟ ನಷ್ಟ ಸಾವು ನೋವು
ದೈವ ವಿಧಿಸಿದ ಬಂಧನ

ಅತ್ತು ಅತ್ತು ಬಿಕ್ಕಬೇಡ
ಚಿಮ್ಮಲೊಮ್ಮೆ ಚಿಲುಮೆ
ಎಲೆ ಉದುರಿದ ಕಾಂಡದಿ
ಹಸಿರು ಚಿಗುರು ಚೇತನ

ನಕ್ಕುಬಿಡು ದುಃಖ ಮರೆತು
ಸೊಗಸು ಸಂತಸ ಸವಿ ಮನ
ದುಗುಡ ದೂರವಾಗಿ ತೊಲಗಲಿ
ಶಾಂತಿ ಪ್ರೀತಿ ಪಾವನ

ಕಿಟಕಿಯಾಚೆ ರವಿಯ ಬೆಳಕು
ಸಂಜೆ ಚಂದ್ರನ ಸ್ಪಂದನ
ನಗೆಯು ಮುಖದಿ ಮಾಸದಿರಲಿ
ಬಾಳು ನಿತ್ಯ ನೂತನ

_________________________
ಡಾ.ಶಶಿಕಾಂತ ಪಟ್ಟಣ, ರಾಮದುರ್ಗ

Latest News

ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಸಂವಿಧಾನವೇ ಆಧಾರ – ಈರಣ್ಣ ಕಡಾಡಿ

ಮೂಡಲಗಿ: ಬಲಿಷ್ಠ ಪ್ರಜಾಪ್ರಭುತ್ವ ಮೌಲ್ಯಗಳಿಗೆ ನಮ್ಮ ದೇಶದ ಶ್ರೇಷ್ಟ ಸಂವಿಧಾನವೇ ಆಧಾರ ಸ್ತಂಭವಾಗಿದೆ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜೊತೆಗೆ ದೇಶದ ಏಕತೆ, ವೈವಿಧ್ಯತೆ...

More Articles Like This

error: Content is protected !!
Join WhatsApp Group