ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ ಕಾರ್ಯಕ್ರಮ

Must Read

ಬೆಳಗಾವಿ – ವಚನ ಪಿತಾಮಹ ಡಾ ಫ ಗು ಹಳಕಟ್ಟಿ ಭವನ ಮಹಾಂತೇಶ ನಗರ ಲಿಂಗಾಯತ ಸಂಘಟನೆ ಬೆಳಗಾವಿಯಲ್ಲಿ ದಿನಾಂಕ.09.11.2025ರಂದು ಸಾಮೂಹಿಕ ಪ್ರಾರ್ಥನೆ ವಚನ ವಿಶ್ಲೇಷಣೆ, ವಚನಸಾಹಿತ್ಯ ಕುರಿತು ಶರಣ ಜಲತ್ಕುಮಾರ ಪುನಜಗೌಡ್ರಅವರಿಂದ ಕನಾ೯ಟಕ ರಾಜ್ಯೋತ್ಸವ ಕುರಿತು ಉಪನ್ಯಾಸ ಜರುಗಿತು.

ರಾಜ್ಯೋತ್ಸವ ನವ್ಹಂಬರ ಒಂದರಂದು ಆಚರಿಲಾಗುತ್ತಿದೆ. ಎರಡನೇ ರಾಜಧಾನಿ ಬೆಳಗಾವಿ ಸುವಣ೯ಸೌಧ ಕಟ್ಟಿ ಅಧೀವೇಶನ ನಡೆಸುವರು.ಉತ್ತರ ಕನಾ೯ಟಕ ಅಭಿವೃದ್ದಿ ಇನ್ನೂ ಆಗಬೇಕಾಗಿದೆ.ಪ್ರಗತಿಗಾಗಿ ಇನ್ನೂ ತುಲನೆ ಮಾಡಿ ಅಭಿವೃದ್ದಿ ಆಗಬೇಕು.ಆದಾಯ ಉತ್ತರ ಕನಾ೯ಟಕ ಹೆಚ್ಚಿಗೆ ಇದೆ.ರಾಜಧಾನಿ ಆದಾಯ ರಾಜ್ಯಕ್ಕೆ ಸಮನಾಗಿ ಹಂಚಿಕೆ ಆಗಬೇಕು.ಪ್ರಗತಿ ಪಥದಲ್ಲಿ ಸಾಗಬೇಕಾಗಿದೆ ಎಂದರು.

ಸುನಿಲ ಸಾಣಿಕೊಪ್ಪ ಮಾತನಾಡುತ್ತ ಸುವಣ೯ಸೌಧದಲ್ಲಿ ಎಲ್ಲ ಕಛೇರಿಗಳು ಪ್ರಾರಂಭಗೊಳ್ಳಲಿ ಎಂದರು.

ಅಧ್ಯಕತೆ ವಹಿಸಿದ ಈರಣ್ಣಾ ದೇಯಣ್ಣವರು ಮಾತನಾಡುತ್ತಾ ಉತ್ತರ ದಕ್ಷಿಣ ಸಮನಾಗಿ ಕಾಣಬೇಕಾಗಿದೆ. ರಾಜ್ಯೋತ್ಸವ ಈ ಸಲ ಬೆಳಗಾವಿಯಲ್ಲಿ ವಿಜೃಂಭಣೆಯಿಂದ ಆಚರಿಸಿದೆವು ಎಂದರು.

ಪ್ರಾರಂಭದಲ್ಲಿ ಬಿ ಪಿ.ಜೇವಣಿ ಅವರುಸಾಮೂಹಿಕ ಪ್ರಾಥ೯ನೆ ನಡೆಸಿಕೊಟ್ಟರು.ಉಪನ್ಯಾಸಕರ ಪರಿಚಯ ವನ್ನು ಮಹಾಂತೇಶ ಮೆಣಸಿನಕಾಯಿ ಅವರು ಮಾಡಿದರು. ಆನಂದ ಕರಕಿ ನಿರೂಪಿಸಿದರು.ಅಕ್ಕಮಹಾದೇವಿ ತೆಗ್ಗಿ,ವಿ ಕೆ ಪಾಟೀಲ,ಬಸವರಾಜ ಬಿಜ್ಜರಗಿ,ಸುವಣಾ೯ಗುಡಸ, ಜಯಶ್ರೀ ಚಾವಲಗಿ,ಶರಣಶರಣೆಯರು ವಚನ ವಿಶ್ಲೇಷಣೆ ಮಾಡಿದರು. ಬಸವರಾಜ ಬಿಜ್ಜರಗಿ,ಶಿವಾನಂದ ರೂಡಬಸನ್ನವರ, ಶಿವಾನಂದ ನಾಯಕ,ಬಸವರಾಜ ಕರಡಿಮಠ, ಕುಂಬಾರ, ಬಸನಗೌಡ ಪಾಟೀಲ,ಕಮಲಾ ಗಣಾಚಾರಿ,ಬಿ. ಬಿ. ಮಠಪತಿ, ಶಶಿಭೂಷಣ ಪಾಟೀಲ,ಸುಶೀಲಾ ಗುರವ,ಲಕ್ಷೀಕಾಂತ ಗುರವ, ಅನೀಲ ರಘಶೆಟ್ಟಿ,ಶರಣಶರಣೆಯರು ಉಪಸ್ಥಿತರಿದ್ದರು.     ಬಿ ಪಿ. ಜೇವಣಿ ವಂದಿಸಿದರು.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group