ಎಸ್.ಆರ್.ಕೆ ಸಂಸ್ಮರಣ ಗ್ರಂಥಕ್ಕೆ ಲೇಖನ ಆಹ್ವಾನ

Must Read

ಹುನಗುಂದ: ಮಾಜಿ ಸಚಿವ ಜನನಾಯಕ ಎಸ್.ಆರ್. ಕಾಶಪ್ಪನವರ ಅವರ ಜನ್ಮ ಅಮೃತ ಮಹೋತ್ಸವವನ್ನು ೨೦೨೬ ರಲ್ಲಿ ಹಮ್ಮಿಕೊಳ್ಳಲಾಗಿದೆ.

ಆ ನಿಮಿತ್ತ ಸಂಸ್ಮರಣ ಗ್ರಂಥವನ್ನು ಪ್ರಕಟಿಸಲಾಗುವುದು. ಅವರ ಒಡನಾಡಿಗಳು, ಆಪ್ತರು, ಸಂಪರ್ಕದಲ್ಲಿ ಇದ್ದವರು ಅವರ ಬಗ್ಗೆ ಲೇಖನ ಕಳಿಸಬಹುದು. ಅಲ್ಲದೆ ಅವರ ಜೊತೆಗಿನ ಅಥವಾ ವಿವಿಧ ಸಂದರ್ಭಗಳಲ್ಲಿ ತೆಗೆದ ಫೋಟೋಗಳನ್ನು ಕೂಡ ಕಳಿಸಬಹುದು.

ಸ್ಕ್ಯಾನ್ ಮಾಡಿಕೊಂಡು ಮತ್ತೆ ತಮಗೆ ಫೋಟೋಗಳನ್ನು ಮರಳಿಸಲಾಗುವುದು. ಲೇಖನ ನಾಲ್ಕು ಪುಟಗಳಲ್ಲಿ ಇರಲಿ. ಬರೆದಿರಬಹುದು ಅಥವಾ ಡಿ.ಟಿ.ಪಿ. ಮಾಡಿರಬಹುದು. ತಮ್ಮ ಲೇಖನಗಳನ್ನು ಸಿದ್ದಲಿಂಗಪ್ಪ ಬೀಳಗಿ ಸಂಪಾದಕರು ಹಾಗೂ ನಿವೃತ್ತ ಉಪನ್ಯಾಸಕರು ಮಹಾಂತನಗರ ಹುನಗುಂದ ೫೮೭೧೧೮ (ಮೊ.೭೮೯೨೮೩೪೧೪೪) ಇವರಿಗೆ ಡಿಸೆಂಬರ್ ೩೧ ರೊಳಗೆ ಕಳಿಸಬೇಕು ಎಂದು ಪ್ರಧಾನ ಸಂಪಾದಕ ಎಸ್ಕೆ ಕೊನೆಸಾಗರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

ಶರಣರ ಪೂಜೆ ಮಾಡುವುದಕ್ಕಿಂತ ತತ್ವ ಅಳವಡಿಸಿಕೊಳ್ಳಬೇಕು

ಸಿಂದಗಿ; ೧೨ನೇ ಶತಮಾನದಲ್ಲಿ ಸಮ ಸಮಾಜದ ನಿರ್ಮಾಣ ಮಾಡಿದ ಶರಣರ ಜಯಂತಿಗಳ ಮೂಲಕ ಭಾವ ಚಿತ್ರಗಳನ್ನು ಪೂಜೆ ಮಾಡುವುದಕ್ಕಿಂತಲೂ ಶರಣರ ತತ್ವ ಸಿದಾಂತಗಳನ್ನು ನಾವೆಲ್ಲರು ಮೈಗೂಡಿಸಿಕೊಂಡು...

More Articles Like This

error: Content is protected !!
Join WhatsApp Group