ಸಹೃದಯದ ಸ್ನೇಹ ಜೀವಿ  ಜಿ. ಬಿ. ಸಾಲಕ್ಕಿ

Must Read

ನಾವು – ನಮ್ಮವರು

ಶರಣ ಸಂಸ್ಕೃತಿಯ ರಾಯಭಾರಿಯಂತಿರುವ ಶ್ರೀಯುತ ಜಿ. ಬಿ. ಸಾಲಕ್ಕಿ ಅವರು ನಮ್ಮ ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ-ಪುಣೆ ಸಂಸ್ಥೆಯ ಆಜೀವ ಸದಸ್ಯರು ಮತ್ತು ದತ್ತಿ ದಾಸೋಹಿಗಳು. ಒಬ್ಬ ಯಶಸ್ವಿ ಉದ್ಯಮಿಯಾಗಿ, ಸಂಘಟನಾ ಚತುರರಾಗಿ, ಎಲ್ಲರನ್ನೂ ಸಹೃದಯದಿಂದ ಮುನ್ನಡೆಸಿಕೊಂಡು ಹೋಗುವ ಸರಳ ಸಜ್ಜನ ಜೀವಿ.

ಇವರು 1952 ರ ಜೂನ್ 1 ರಂದು ದೇವರ ಹಿಪ್ಪರಗಿಯ ಸುಪ್ರಸಿದ್ಧ ಸಾಲಕ್ಕಿ ಮನೆತನದಲ್ಲಿ ಜನಿಸಿದರು. ಬಿ.ಎಸ್ಸಿ ಪದವಿಯನ್ನು ವಿಜಯಪುರದ ಕೆ.ಸಿ.ಪಿ ವಿಜ್ಞಾನ ಮಹಾವಿದ್ಯಾಲಯದಲ್ಲಿ ಮುಗಿಸಿದ ಬಳಿಕ ಇವರು ದೂರವಾಣಿ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಟೆಲಿಕಾಂ ಮತ್ತು ಬಿ.ಎಸ್. ಎನ್.ಎಲ್ ನಲ್ಲಿ 37 ವರ್ಷಗಳ ಸುಧೀರ್ಘ ಸೇವೆ ಮುಗಿಸಿ ಇವರು 2012 ಮೇ 30ರಂದು ನಿವೃತ್ತಿ ಹೊಂದಿದರು. ತಮ್ಮ ಸೇವಾ ಅವಧಿಯಲ್ಲಿ ದೂರವಾಣಿ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಕ್ಕೆ ಇವರು ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ವಿವಿಧ ಹುದ್ದೆಗಳ ಕಾರ್ಯ ನಿರ್ವಹಿಸಿದರು. ಇವರು 2007 ರಿಂದ 2012ರ ವರೆಗೆ ದಿಲ್ಲಿಯಲ್ಲಿ ಹೆಚ್ಚಿನ ವಾಸ್ತವ್ಯ ಮಾಡಿದರು. 2003 ರಲ್ಲಿ ಸರ್ಕಾರದ” ಭಾರತ ಸಂಚಾರ ಸಾಹಿತಿ” ಪ್ರಶಸ್ತಿಗೆ ಭಾಜನರಾದರು. 1976ರ ಫೆಬ್ರವರಿ 26ರಂದು ಶ್ರೀಮತಿ ಪ್ರಮೀಳಾ ಅವರೊಂದಿಗೆ ತಮ್ಮ ದಾಂಪತ್ಯ ಜೀವನ ಆರಂಭಿಸಿದರು. ಇವರಿಗೆ ಒಬ್ಬಳು ಮಗಳು ಮತ್ತು ಇಬ್ಬರು ಗಂಡು ಮಕ್ಕಳು.ಇಬ್ಬರೂ ಸಹ ಯಶಸ್ವಿ ಉದ್ದಿಮೆದಾರರು. ಕನ್ನಡ ಸಾಹಿತ್ಯ ಪರಿಷತ್, ಶರಣ ಸಾಹಿತ್ಯ ಪರಿಷತ್, ವೀರಶೈವ ಲಿಂಗಾಯತ ಮಹಾಸಭೆ ಹಾಗೂ ಶ್ರೀ ಸಿದ್ದೇಶ್ವರ ಸಂಸ್ಥೆಯ ವಿವಿಧ ಹುದ್ದೆಗಳ ಸೇವೆಗೈದ ಇವರು ನಾಲ್ಕು ಪುಸ್ತಕ ಪ್ರಕಟಿಸಿದ್ದಾರೆ.ದೇವರ ಹಿಪ್ಪರಗಿಯ ಬಿ ಎಲ್‌.ಡಿ. ಇ ಸಂಸ್ಥೆಯ ಎ.ಬಿ.ಸಾಲಕ್ಕಿ ಸಂಯುಕ್ತ ಜೂನಿಯರ್ ಕಾಲೇಜ್ ಆಡಳಿತ ಮಂಡಳಿ ಅಧ್ಯಕ್ಷರಾಗಿ ಸಹ ಸೇವೆ ಸಲಿಸಿದ್ದಾರೆ.

ಮಾನವೀಯ ಮೌಲ್ಯಗಳ ಜೊತೆಗೆ ಸದಾ ಸಹೃದಯದ ಸ್ನೇಹ ಜೀವಿ  ಜಿ ಬಿ ಸಾಲಕ್ಕಿ ಅವರು . ಮಾತು ಕಠೋರ, ಮನಸ್ಸು ಮೃದು,ಬದುಕನ್ನು ಅತ್ಯಂತ ಗಾಢವಾಗಿ ಪ್ರೀತಿಸುವ
ಸೃಜನಶೀಲ ಮನಸ್ಸಿನವರು .ಬಿ.ಎಸ್.ಎನ್. ಎಲ್ ನಲ್ಲಿ ತಮ್ಮ ಬದುಕನ್ನು ಕಟ್ಟಿಕೊಂಡು ಕಾರ್ಮಿಕ ಸಂಘಟನೆ, ಸಂಘರ್ಷ, ಹೋರಾಟದ ಜೊತೆಗೆ ಇವರ ಸಾಹಿತ್ಯ ಪ್ರೇಮ, ಆಧ್ಯಾತ್ಮಿಕ ಚಿಂತನೆ, ಸಾಮಾಜಿಕ ಸೇವೆ ಅಗಮ್ಯವಾದದ್ದು .” ಆಧ್ಯಾತ್ಮಿಕ ಚಿಂತನೆಯು ಆತ್ಮ ಅಥವಾ ಆತ್ಮವನ್ನು ಅವಲೋಕಿ ಸುವುದರ ಮೂಲಕ ನಾವು ಈ ದೇಹವಲ್ಲ ಎಂದು ನಾವು ಅರಿತುಕೊಳ್ಳುತ್ತೇವೆ.

ದೇಹವು ನಿರಂತರವಾಗಿ ಬದಲಾಗುತ್ತಿರುತ್ತದೆ. ಮೊದಲು ನಾವು ಹುಟ್ಟಿದಾಗ ಮಗು, ನಂತರ ನಾವು ಬೆಳೆಯುತ್ತೇವೆ, ನಾಳೆ ನಾವು ವಯಸ್ಸಾಗುತ್ತೇವೆ ಮತ್ತು ಅಂತಿಮವಾಗಿ ದೇಹವು ಸಾಯುತ್ತದೆ. ನಾವು ಇದರ ಬಗೆಗೆ ಆಲೋಚಿಸಿದಾಗ, ನಾವು ಈ ದೇಹವಲ್ಲ ಎಂದು ಮತ್ತು ಆತ್ಮಾವಲೋಕನ ಮಾಡಿದಾಗ, ನಾವು ಆತ್ಮ ಎಂಬ ದಿವ್ಯ ಸತ್ಯವನ್ನು ತಿಳಿದುಕೊಳ್ಳುತ್ತೇವೆ. ಇದು ಆಧ್ಯಾತ್ಮಿಕ ಚಿಂತನೆ. ನೀವು ಏನೂ ಅಲ್ಲ, ನೀವು ದೇಹವಲ್ಲ, ನೀವು ಮನಸ್ಸು ಕೂಡ ಅಲ್ಲ, ಏಕೆಂದರೆ ನೀವು ಮನಸ್ಸನ್ನು ಹುಡುಕಲು ಸಾಧ್ಯವಿಲ್ಲ ಎಂಬುದನ್ನು ಅರಿತುಕೊಂಡು ನೀವು ಅದನ್ನು ಮಾಡುತ್ತೀರಿ. ಆದರೆ ನೀನಿರುವೆ, ಇರುವವನು ಯಾರು? ಇದು ಸಾವಿನ ಸಮಯದಲ್ಲಿ ನಿರ್ಗಮಿಸುವ ಆತ್ಮ, ನಂತರ ಉಸಿರು ಇಲ್ಲ. ನಾವು ಆ ಜೀವ ಶಕ್ತಿ, ಇದು ಆಧ್ಯಾತ್ಮಿಕ ಚಿಂತನೆ ” ಇಂತಹ ಗಂಭೀರ ಚಿಂತನೆಯಲ್ಲಿ ವಿಜಯಪುರದ ಪುಣ್ಯ ಪುರುಷ ಶ್ರೀ ಸಿದ್ದೇಶ್ವರ ಸ್ವಾಮಿಗಳ ಗರಡಿಯಲ್ಲಿ ಬೆಳೆದ ಶ್ರೀ ಜಿ. ಬಿ. ಸಾಲಕ್ಕಿ ಅವರು ತಮ್ಮ ಬದುಕಿಗೆ ತಾವೇ ಶಿಲ್ಪಿ ಎಂದರೆ ತಪ್ಪಾಗಲಾರದು.

ಇವರ ಸಾಹಿತ್ಯದ ಓದು ಅಪಾರ. ಎಲ್ಲ ಬಗೆಯ ಸಾಹಿತ್ಯವನ್ನು ಓದುತ್ತಾ ಬರೆಯುತ್ತಾ ಬೆಳೆದವರು. ಎಲ್ಲಾ ಸಾಹಿತ್ಯವು ಸಿಂಹಾವಲೋಕನವಾಗಿದೆ. ಲೇಖಕರು ಅನುಭವಿಸಿದ ಅಥವಾ ಊಹಿಸಿದಂತೆ ಹಿಂದಿನದನ್ನು ದಾಖಲಿಸುತ್ತದೆ. ಅತ್ಯಂತ ಕಾಲ್ಪನಿಕ ಸಾಹಿತ್ಯವೂ (ನೀತಿಕಥೆಗಳು, ವೈಜ್ಞಾನಿಕ ಕಾದಂಬರಿಗಳು, ಕಾವ್ಯಗಳು) ಹಿಂದಿನ ಅನುಭವದ ಸಂಶ್ಲೇಷಿತ ಸಂಯೋಜನೆಗಳಾಗಿವೆ. ನಾವು ನೋಡಿರದ ಹೊಸ ಬಣ್ಣವನ್ನು ನಾವು ಊಹಿಸಲು ಸಾಧ್ಯವಿಲ್ಲ ಅಥವಾ ನಾವು ಅನುಭವಿಸದ, ಕಾಲ್ಪನಿಕ ದೈತ್ಯಾಕಾರದ ನಿರ್ಮಾಣವನ್ನು ನಾವು ಮಾಡಲಾಗುವುದಿಲ್ಲ. ಓದುಗನ ಶಬ್ದಕೋಶ, ಬುದ್ಧಿವಂತಿಕೆ ಮತ್ತು ಸಂಚಿತ ಅನುಭವದ ಪರಿಭಾಷೆಯ ಸಾಮರ್ಥ್ಯದಿಂದ ಸಾಹಿತ್ಯಕ್ಕೆ ಹೊಸ ಅರ್ಥವನ್ನು ನೀಡಲಾಗುತ್ತದೆ ಮತ್ತು ಸುತ್ತುವರಿಯಲಾಗುತ್ತದೆ. ನಾವು ಒಂದೇ ನದಿಗೆ ಎರಡು ಬಾರಿ ಕಾಲಿಡಲು ಸಾಧ್ಯವಿಲ್ಲ. ನದಿ ಎಂದಿಗೂ ಒಂದೇ ಆಗಿರುವುದಿಲ್ಲ ಮತ್ತು ನಾವು ಎರಡನೇ ಬಾರಿಗೆ ಒಂದೇ ಆಗಿರುವುದಿಲ್ಲ. ಕೆಲವು ಹಂತಗಳಲ್ಲಿ ಕ್ಲಾಸಿಕ್ ಎಂದು ಪರಿಗಣಿಸಲಾದ ನಿರಂತರತೆಯ ಸಾಹಿತ್ಯವು ಮಾನವ ಜೀವನದ ಸಾರ್ವತ್ರಿಕ ವಿಷಯಗಳೊಂದಿಗೆ ಅನುರಣಿಸುತ್ತದೆ. ವೈಯಕ್ತಿಕ ಓದುಗನಿಗೆ ಮಂಚೂಣಿ ಯಲ್ಲಿರುವ ಸಾಹಿತ್ಯವು ಓದುಗರ ಅನುಭವವನ್ನು ದೃಢೀಕರಿಸುತ್ತದೆ ಮತ್ತು ಒಮ್ಮೊಮ್ಮೆ ಮೌಲ್ಯಗಳು ಸಹ ಕಡಿಮೆ ಮೌಲ್ಯಯುತ ಅಥವಾ ಬೋಧಪ್ರದವಾಗಿದೆ ಮತ್ತು ಲೇಖಕರ ಉದ್ದೇಶಗಳನ್ನು ವಿವೇಚಿಸಲು, ಪರಿಗಣಿಸಿ ತಿಳಿಸಲು (ಪುಸ್ತಕಗಳು, ನೀತಿಬೋಧಕ ಕೃತಿಗಳು, ಅಡುಗೆ ಪುಸ್ತಕಗಳು ) ನಿರ್ದೇಶಿಸಲು (ವಚನ ಸಾಹಿತ್ಯ , ಬಸವ ತತ್ವ ಪ್ರಸಾರ ಪ್ರಚಾರ) ಮನರಂಜನೆಗಾಗಿ ಹಾಸ್ಯ , ಲಘು ಸಾಹಿತ್ಯ, ಉದ್ದೇಶಪೂರ್ವಕವಾಗಿ ಮಾಹಿತಿ, ನಿರ್ದೇಶನ ಅಥವಾ ಮನರಂಜನೆಯ ಅತಿಕ್ರಮಣ ಮತ್ತು ಮಿಶ್ರಣದ ಬಗ್ಗೆ ಎಲ್ಲರೂ ಎಚ್ಚರವಾಗಿರಬೇಕು. ವಾಸ್ತವಕ್ಕೆ ಹೊಸ ಪ್ರವೇಶವನ್ನು ಬಯಸಿದವರು  ಸಾಲಕ್ಕಿಯವರು. ಜ್ಞಾನ (ವಿಕಸನೀಯ) ಮತ್ತು 7 ವರ್ಷಗಳ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ . ಸಾಮಾಜಿಕ ಸ್ವಾಸ್ಥ್ಯ, ಆರೋಗ್ಯದ ಬಗ್ಗೆ ಹಲವಾರು ಯೋಜನೆಗಳನ್ನು ಹಾಕಿ ಕೊಂಡಿದ್ದಾರೆ. ಬುದ್ಧ, ಬಸವರ ಆಶಯದಂತೆ ಸಮ ಸಮಾಜವನ್ನು ಕಟ್ಟಬೇಕೆನ್ನುವ ಸುಂದರ ಹೃದಯ ವೈಶಾಲ್ಯತೆ ಇವರದ್ದು.

ಗಣಾಚಾರಿ -ಸಂಘಟನಾ ಚತುರರು

ಜಿ.ಬಿ. ಸಾಲಕ್ಕಿಯವರು ಸಂಘಟನಾ ಚತುರರು. ಅವರ ಅದ್ಭುತ ಪ್ರತಿಭೆಯಲ್ಲಿ ಅವರ ಸಂಘಟನಾ ಚಾತುರ‍್ಯ ಒಂದು. ಪಕ್ಷಾತೀತವಾಗಿ, ಜಾತ್ಯತೀತವಾಗಿ ಅವರು ಸಾವಿರಾರು ಜನರನ್ನು ಯಾವುದೇ ಹೋರಾಟದಲ್ಲಿ ಸೇರಿಸುತ್ತಾರೆ. ವಿಜಯಪುರದ ಲಿಂಗಾಯತ ಧರ್ಮ ಮಾನ್ಯತೆ ಹೋರಾಟ ,ರೈತರ ಪರ ಕಾಳಜಿ ಕಾರ್ಮಿಕರ ಸಮಸ್ಯೆಗೆ ಗಟ್ಟಿಯಾಗಿ ಗುಡುಗು ಹಾಕುವ ಶ್ರೀಮಂತಿಕೆ ಅವರನ್ನು ಎತ್ತರಕ್ಕೆ ಒಯ್ದ ಸತ್ಯ ಸಂಗತಿ.

ನಿತ್ಯ ವ್ಯಾಯಾಮ -ಆರೋಗ್ಯದ ಗುಟ್ಟು

ನಿಯಮಿತ ವ್ಯಾಯಾಮವು ಮಧುಮೇಹ, ಅಧಿಕ ರಕ್ತದೊತ್ತಡ, ಆಸ್ತಮಾ ಮತ್ತು ಬೆನ್ನು ಅಥವಾ ಕೀಲು ನೋವಿನಂತಹ ದೀರ್ಘಕಾಲದ ಕಾಯಿಲೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ಸುಧಾರಿಸಬಹುದು. ಕೆಲವು ರೋಗಗಳು ಜಂಟಿ ಅಥವಾ ದೇಹದ ನೋವನ್ನು ಅಭಿವೃದ್ಧಿಪಡಿಸಲು ಅಪಾಯಕಾರಿ ಅಂಶಗಳಾಗಿರಬಹುದು, ಇದು ನೋವು ಕಡಿತದ ದೃಷ್ಟಿಕೋನದಿಂದ ವ್ಯಾಯಾಮದ ಪ್ರಮುಖ ಪ್ರಯೋಜನವಾಗಿದೆ ಎಂದು ಮನಗಂಡು  ಜಿ.ಬಿ. ಸಾಲಕ್ಕಿಯವರು ನಿತ್ಯ ಕನಿಷ್ಠ 10 ಕಿಲೋಮೀಟರು ವಾಕಿಂಗ್ ಮಾಡುತ್ತಾರೆ. ವಾಕಿಂಗ್ ಸಂದರ್ಭದಲ್ಲಿ ಸ್ನೇಹಿತರಾದ ಶಿವಲಿಂಗಪ್ಪಣ್ಣ ಕಲಬುರ್ಗಿ ಮತ್ತಿತರ ಜೊತೆಗೆ ದೇಶ,ನಾಡು, ಭಾಷೆ ,ಸಂಸ್ಕೃತಿ ಸಾಹಿತ್ಯದ ಬಗ್ಗೆ ಚರ್ಚಿಸುತ್ತಾರೆ.

ದಾಸೋಹಿ -ಉದ್ಯಮಿ- ಶರಣ ಸಂಸ್ಕೃತಿಯ ರಾಯಭಾರಿ

ಸಾಮಾಜಿಕ ಸಮಾನತೆ, ಮರ್ತ್ಯ ಲೋಕದ ಹಿರಿಮೆ, ಆತ್ಮವಿಮರ್ಶೆ, ನಡೆ-ನುಡಿಯಲ್ಲಿ ಒಂದಾಗುವಿಕೆ, ಸಂಸಾರದಲ್ಲಿ ಸಹಿಷ್ಣುತೆ, ಸಾಮಾಜಿಕ ಬದ್ಧತೆ, ವೈಚಾರಿಕತೆ, ಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ಎಂಬುದನ್ನು ಶರಣ ಸಂಸ್ಕೃತಿ ಪ್ರತಿಪಾದಿಸುತ್ತದೆ. ವಿಶ್ವಕ್ಕೆ ಮಾದರಿಯಾಗಿ ನಿಲ್ಲಬಲ್ಲ ಸಂಸ್ಕೃತಿ ಇದ್ದರೆ ಅದು ಶರಣ ಸಂಸ್ಕೃತಿ. ಹನ್ನೆರಡನೆಯ ಶತಮಾನದ ಶರಣರು ಸುಂದರ, ಸದೃಢ ಸಮಾಜ ನಿರ್ಮಾಣದಲ್ಲಿ ಕಾಯಕ ದಾಸೋಹ ಮಹತ್ವವನ್ನು ಆಚರಿಸುವ ಮೂಲಕ ಸರ್ವರಿಗೂ ಮಾರ್ಗದರ್ಶಿ ಸೂತ್ರಗಳನ್ನು ವಚನಗಳ ಮೂಲಕ ಸಮಾಜಕ್ಕೆ ನೀಡಿದ್ದಾರೆ ಎಂದೆನ್ನುವ  ಸಾಲಕ್ಕಿಯವರು ಅಂತಹ ಬಸವ ತತ್ವಗಳನ್ನು ಅಧ್ಯಯನ ಮಾಡುವ ಪ್ರಾಮಾಣಿಕ ಉದ್ಯಮಿ,ದಾಸೋಹಿ,ಸ್ನೇಹ ಜೀವಿ.

ಮನೆಗೆ ಬಂದವರಿಗೆ ವಚನಗಳ ಪುಸ್ತಕವನ್ನು ಉಡುಗೊರೆಯಾಗಿ ಕೊಡುತ್ತಾರೆ.ಒಟ್ಟಿನಲ್ಲಿ ಒಬ್ಬ ಶರಣ ಚಿಂತಕರು,ಲಿಂಗಾಯತ ಧರ್ಮದ ಪರಿಪಾಲಕರು ಮತ್ತು ಎಲ್ಲರೊಳಗೆ ಒಂದಾಗಿ ಜೀವಿಸುವವರು.

ಸುಧಾ ಪಾಟೀಲ
ವಿಶ್ವಸ್ಥರು
ಬಸವ ತಿಳಿವಳಿಕೆ ಮತ್ತು ಸಂಶೋಧನ ಕೇಂದ್ರ – ಪುಣೆ

LEAVE A REPLY

Please enter your comment!
Please enter your name here

Latest News

ಡಾ.ಮಹಾಂತೇಶ ಬೀಳಗಿ ಯುವಕರಿಗೆ ಸ್ಫೂರ್ತಿ – ಮೌಲಾಲಿ ಆಲಗೂರ

ಸಿಂದಗಿ: ಸ್ಪೂರ್ತಿದಾಯಕ ಮಾತುಗಳಿಂದ ಲಕ್ಷಾಂತರ ಸ್ಪರ್ಧಾತ್ಮಕ ಓದುಗರ ಕೀರ್ತಿ ಹೆಚ್ಚಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕ, ಐಎಎಸ್ ಅಧಿಕಾರಿ ಮಹಾಂತೇಶ...

More Articles Like This

error: Content is protected !!
Join WhatsApp Group