ಕವನ : ನನ್ನೊಲವಿನ ಜಾಣೆ

Must Read

ನನ್ನೊಲವಿನ ಜಾಣೆ

ಇದ್ದಾರೆ ಅದೆಷ್ಟೋ ಜನರು
ನನ್ನ ನಿನ್ನ ಸುತ್ತ ಮುತ್ತ
ಭಾವಗಳ ಅರಿಯದವರು
ಶಬ್ದಗಳ ಮೆರವಣಿಗೆ
ಮಾಡುವವರು
ಪದ ಅಕ್ಷರಗಳ ಜೋಡಿಸಿ
ಕವನ ಕಾವ್ಯ ಹೊಸೆಯುವವರು
ವೇದಿಕೆಯಲ್ಲಿ ಹಾರ ತುರಾಯಿ
ಸತ್ಕಾರ ಸಮ್ಮಾನ
ಮಾಡಿ ಕೊಳ್ಳುವವರು
ಪತ್ರಿಕೆ ಟಿವಿ ಮಾಧ್ಯಮದಲ್ಲಿ
ಬಿಟ್ಟಿ ಪ್ರಚಾರ
ಮಾಡಿಕೊಂಡವರು ನೂರು
ನಿನ್ನಂತೆ ಅಂತರಂಗದಲ್ಲಿ
ದೀಪ ಹಚ್ಚಿ
ಮನಸ್ಸು ಹಸನು
ಮಾಡಿದವರನು
ನಿನ್ನ ಬಿಟ್ಟು
ನಾನೊಬ್ಬರನ್ನು ಕಾಣೆ
ನೀನು ಹೃದಯದ ಒಡತಿ
ನನ್ನೊಲವಿನ ಜಾಣೆ
_________________________

ಡಾ ಶಶಿಕಾಂತ ಪಟ್ಟಣ ರಾಮದುರ್ಗ

Latest News

ಡಾ. ಕೋರೆ ಅವರಿಗೆ ಪದ್ಮಶ್ರೀ – ಶಾಸಕ ಬಾಲಚಂದ್ರ ಜಾರಕಿಹೊಳಿ ಅಭಿನಂದನೆ

ಬೆಳಗಾವಿ - ಶಿಕ್ಷಣ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆ ಮಾಡಿದ ಬೆಳಗಾವಿಯವರೇ ಆದ ಡಾ.ಪ್ರಭಾಕರ ಕೋರೆ ಅವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪುರಸ್ಕಾರಕ್ಕೆ ಆಯ್ಕೆ ಮಾಡಿರುವುದು ಅಭಿನಂದನೀಯವಾದುದು...

More Articles Like This

error: Content is protected !!
Join WhatsApp Group