ಮೂಡಲಗಿ – ಸ್ಥಳೀಯ ಶ್ರೀ ಶಿವಬೋಧರಂಗ ಪದವಿ ಪೂರ್ವ ಕಾಲೇಜು ಮೂಡಲಗಿಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಒಂದು ದಿನದ ಕೈಗಾರಿಕಾ ಉದ್ಯಮ ಕುರಿತಾಗಿ ಮಾಹಿತಿಯನ್ನು ಪಡೆಯುವ ಸಲುವಾಗಿ ಮೂಡಲಗಿ ತಾಲೂಕಿನ ಹುಣಶ್ಯಾಳ ಗ್ರಾಮದ ಸತೀಶ ಶುಗರ್ಸ್ ಲಿಮಿಟೆಡ್ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ಕಬ್ಬು ನುರಿಸುವ ಹಾಗೂ ವಿದ್ಯುತ್ ಉತ್ಪಾದನಾ ಘಟಕದ ಉತ್ಪಾದನೆಯ ಬಗ್ಗೆ ಮಾಹಿತಿಯನ್ನು ಪಡೆಯಲಾಯಿತು
ಜೊತೆಗೆ ಕಚ್ಚಾ ವಸ್ತು ಸಿದ್ದ ವಸ್ತುವಾಗಿ ತಯಾರಾಗಲು ಹಂತ ಹಂತವಾಗಿ ಕೈಗೊಳ್ಳುವ ಕ್ರಮದ ಬಗ್ಗೆ ತಿಳಿವಳಿಕೆ ಪಡೆಯಲಾಯಿತು. ಉತ್ಪಾದನೆಯಾದ ಸಕ್ಕರೆಯನ್ನು ದಾಸ್ತಾನುಗಾರಿಕೆ ಮಾಡುವ ಕುರಿತಾಗಿ ಮತ್ತು ಸಾರಿಗೆ ವಿಧಾನಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯಲಾಯಿತು.
ವಿದ್ಯಾರ್ಥಿಗಳಿಗೆ ನೇರ ಕಾರ್ಯಕ್ರಮ ಕೈಗೊಳ್ಳುವುದರ ಮೂಲಕ ಕಾರ್ಖಾನೆಯ ಹೆಚ್.ಆರ್. ಮ್ಯಾನೇಜರ್ ಸದಾಶಿವ ಮಾಲಗಾರವರು ಮಾನವ ಸಂಪನ್ಮೂಲ ವಿಭಾಗದ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿದರು.
ಈ ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಎಚ್.ಎಮ್.ಹತ್ತರಕಿ ಹಾಗೂ ಕಾಲೇಜಿನ ಪ್ರಾಚಾರ್ಯರಾದ ಎಮ್.ಎಸ್.ಪಾಟೀಲ ರವರು ಉಪಸ್ಥಿತರಿದ್ದರು.

