ಹಣ ಡಬಲ್ ನೀಡುವುದಾಗಿ ಮಾಜಿ ಸೈನಿಕರಿಂದ ವಂಚನೆ

Must Read

ಬೀದರ – ರಿಯಲ್‌ ಎಸ್ಟೇಟ್ ನಲ್ಲಿ ಹಣವನ್ನು ಡಬಲ್ ಮಾಡಿಕೊಡುತ್ತೇವೆ ಎಂದು ಮಾಜಿ ಸೈನಿಕರಿಬ್ಬರು ಜನರನ್ನು ನಂಬಿಸಿ ಕೋಟಿ ಕೋಟಿ ಹಣ ವಂಚನೆ ಮಾಡಿರುವ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಲ್ಲಿ ನಡೆದಿದೆ.

ಹರಿದಾಸ ತಂದೆ ನರಸಿಂಗರಾವ ಬಿರಾದಾರ ( ಮಾಜಿ ಸೈನಿಕ ) ಮತ್ತು ಸಂತೋಷ ತಂದೆ ಕೇಶವ ಶಿರೋಳೆ ( ಮಾಜಿ ಸೈನಿಕ) ಹಣ ಡಬಲ್ ಮಾಡಿಕೊಡುವುದಾಗಿ ಹೇಳಿ ಜನರಿಗೆ ಮೋಸ ಮಾಡಿರುವ ಆರೋಪಿಗಳು

ನಾವು ಭಾರತೀಯ ಸೇನೆಯಲ್ಲಿ ಕೆಲಸ ಮಾಡಿ ಬಂದವರಿದ್ದೇವೆ ಹಾಗಾಗಿ ನಾವು ಯಾರಿಗೂ ಮೋಸ ಮಾಡುವುದಿಲ್ಲ ಅಂತ ಜನರಿಗೆ ನಂಬಿಸಿದ ಆರೋಪಿಗಳು. ಜನರು ಮಾಜಿ ಸೈನಿಕರು ಅಂತಾ ನಂಬಿದ್ದರಿಂದ ಇವರು ಹಣ ಪಡೆದುಕೊಂಡು ಹಣ ಕೊಡದೆ ಮೋಸ ಮಾಡಿರುತ್ತಾರೆ.

ಈ ಇಬ್ಬರು ಮಾಜಿ ಸೈನಿಕರು ಸುಮಾರು 10 ರಿಂದ 15 ಜನರಿಗೆ ಇದೇ ರೀತಿ ಭಾಲ್ಕಿ ನಗರದಲ್ಲಿ ಮೋಸ ಮಾಡಿದ್ದು ಇವರಿಂದ ಮೋಸಕ್ಕೊಳಗಾದವರು ಪೋಲಿಸ ರಿಗೆ ಇವರ ವಿರುದ್ಧ ದೂರು ನೀಡಿದ್ದಾರೆ

ಆರೋಪಿಗಳಾದ ಹರಿದಾಸ ಮತ್ತು ಸಂತೋಷ ವಿರುದ್ಧ ಭಾಲ್ಕಿ ನಗರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here

Latest News

ವೈ ಬಿ ಕಡಕೋಳ ವರಿಗೆ ಗೌರವ ಸನ್ಮಾನ

ಸವದತ್ತಿ : ತಾಲೂಕಿನ ಶಿಕ್ಷಕ ಸಾಹಿತಿ ವೈ. ಬಿ. ಕಡಕೋಳ ಅವರಿಗೆ ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಸಲ್ಲಿಸಿದ ತಲ್ಲೂರು ರಾಯನಗೌಡರು, ಸಮಗ್ರ...

More Articles Like This

error: Content is protected !!
Join WhatsApp Group