ಕವನ: ಕಲಿಯುಗ

Must Read

ಕಲಿಯುಗ

ಕಲಿಯುಗದ ಕಾಲವಿದು
ಪ್ರತಿದಿನವು ಹೊಸದು
ಕಲಿಸುತಿದೆ ಹೊಸ ವಿಚಾರ
ಮಾಚಿ ಮರೆಯಾಗುತಿದೆ ಆಚಾರ

ಪ್ರೀತಿಯ ಬೆಲೆ ಅಳಿದು ಹೋಯಿತು
ಕಾಮದ ಸೆಲೆಯಲಿ ಜಗವು ಮುಳುಗಿತು
ಮಾನ ಮರ್ಯಾದೆ ಹೋದರೇನಂತೆ
ಮೊಬೈಲ್ ಒಂದು ಜೊತೆಯಿರಬೇಕಂತೆ

ನನ್ನವರು ತನ್ನವರು ಯಾರು ಕಾಣುತ್ತಿಲ್ಲ
ಸಂಬಂಧ ಸಂಧರ್ಭ ಅರಿವಿಗೆ ಬರುತ್ತಿಲ್ಲ
ಸಂಭ್ರಮಕ್ಕೆ ಸಂಭಾವನೆ ಬೇಕಾಗುತಿದೆಯಲ್ಲ
ಸಂಪತ್ತು ಹೊತ್ತು ತರುತಿದೆ ಆಪತ್ತು ತಿಳಿತಿಲ್ಲ

ಸಿಕ್ಕ ಸಿಕ್ಕವರ ಜೊತೆ ಮುದ್ದಾಟ ಗುದ್ದಾಟ
ಬಿಕ್ಕಿ ಅಳುತ್ತಿದ್ದರು ಕೆಳಲ್ಲ ಹೆತ್ತವರ ನರಳಾಟ
ಅಜ್ಞಾನದ ಬೆನ್ನಟ್ಟಿ ನಡೆಯುತಿದೆ ಡೊಂಬರಾಟ
ಹಾದಿ ಬೀದಿಗಳಲಿ ನಾ ನನ್ನದೆಂದು ಕಿತ್ತಾಟ

ಬಾಬರ್ ಟಿ ಇಂಗಳಗಿ

- Advertisement -
- Advertisement -

Latest News

ಜಾನಪದದಿಂದ ಮಾನವೀಯ ಮೌಲ್ಯ ಹೆಚ್ಚಳ – ಎಸ್ ಆರ್ ಪಿ

ಬಾಗಲಕೋಟೆ- ಎಲ್ಲ ಸಾಹಿತ್ಯಕ್ಕೂ ಮೂಲ ಆಸರೆಯಾಗಿ ಜಾತಿ, ಮಥ, ಪಂಥಗಳನ್ನು ಮೀರಿ ಮಾನವೀಯ ಮೌಲ್ಯವನ್ನು ಎತ್ತಿಹಿಡಿಯುವ ಸಾಹಿತ್ಯ ಯಾವುದಾರೂ ಇದ್ದರೆ ಅದುವೇ ಜಾನಪದ ಸಾಹಿತ್ಯ. ಅದು...
- Advertisement -

More Articles Like This

- Advertisement -
close
error: Content is protected !!
Join WhatsApp Group