ಕವನ: ಕಲಿಯುಗ

Must Read

ಕಲಿಯುಗ

ಕಲಿಯುಗದ ಕಾಲವಿದು
ಪ್ರತಿದಿನವು ಹೊಸದು
ಕಲಿಸುತಿದೆ ಹೊಸ ವಿಚಾರ
ಮಾಚಿ ಮರೆಯಾಗುತಿದೆ ಆಚಾರ

ಪ್ರೀತಿಯ ಬೆಲೆ ಅಳಿದು ಹೋಯಿತು
ಕಾಮದ ಸೆಲೆಯಲಿ ಜಗವು ಮುಳುಗಿತು
ಮಾನ ಮರ್ಯಾದೆ ಹೋದರೇನಂತೆ
ಮೊಬೈಲ್ ಒಂದು ಜೊತೆಯಿರಬೇಕಂತೆ

ನನ್ನವರು ತನ್ನವರು ಯಾರು ಕಾಣುತ್ತಿಲ್ಲ
ಸಂಬಂಧ ಸಂಧರ್ಭ ಅರಿವಿಗೆ ಬರುತ್ತಿಲ್ಲ
ಸಂಭ್ರಮಕ್ಕೆ ಸಂಭಾವನೆ ಬೇಕಾಗುತಿದೆಯಲ್ಲ
ಸಂಪತ್ತು ಹೊತ್ತು ತರುತಿದೆ ಆಪತ್ತು ತಿಳಿತಿಲ್ಲ

ಸಿಕ್ಕ ಸಿಕ್ಕವರ ಜೊತೆ ಮುದ್ದಾಟ ಗುದ್ದಾಟ
ಬಿಕ್ಕಿ ಅಳುತ್ತಿದ್ದರು ಕೆಳಲ್ಲ ಹೆತ್ತವರ ನರಳಾಟ
ಅಜ್ಞಾನದ ಬೆನ್ನಟ್ಟಿ ನಡೆಯುತಿದೆ ಡೊಂಬರಾಟ
ಹಾದಿ ಬೀದಿಗಳಲಿ ನಾ ನನ್ನದೆಂದು ಕಿತ್ತಾಟ

ಬಾಬರ್ ಟಿ ಇಂಗಳಗಿ

Latest News

ಕವನ : ಸಮಾನತೆಯ ಬೆಳದಿಂಗಳ ಪಲ್ಲವಿ

ಸಮಾನತೆಯ ಬೆಳದಿಂಗಳ ಪಲ್ಲವಿಭಾರತಾಂಬೆಗೆ ಹೊನ್ನ ಕಿರೀಟವಿದು ಸರಳ ಸಂವಿಧಾನ ನಮ್ಮ ಸಂವಿಧಾನಪೀಠಿಕೆಯ ಪರಿಧಿಯಲಿ ಜಾತ್ಯತೀತ,ಬ್ರಾತೃತ್ವ, ಸಮಾಜವಾದಿ ಸಾರ್ವಭೌಮತೆ,ಗಣತಂತ್ರ ನ್ಯಾಯ, ಸಮಾನತೆ ಸ್ವಾತಂತ್ರ್ಯದ ದುಂದುಭಿ ಜೀವದಾಯಿನಿ ಇದು ಭಾರತದ ಪಾಲಿಗೆ ಮುಕ್ತಿದಾಯಿನಿ ಇದು ದಾಸ್ಯದ ಸಂಕೋಲೆಗೆ ನಮ್ಮ ಸಂವಿಧಾನ ನಮಗೆ ಸುವಿಧಾನಲಿಖಿತವೂ ಧೀರ್ಘವೂ ಭಾರತಕ್ಕಿದು ಮಾರ್ಗವು ಅಸಮಾನತೆಯ...

More Articles Like This

error: Content is protected !!
Join WhatsApp Group