ಸಿಡಿ ಪ್ರಕರಣ : ಬಂಧಿತ ಆಕಾಶ್ ಹೇಳಿದ್ದೇನು ?

Must Read

ಜಾರಕಿಹೊಳಿ ಸಿಡಿ ಪ್ರಕರಣದಲ್ಲಿ ಬಂಧಿತನಾಗಿರುವ ಆಕಾಶ ತಳವಾಡೆ ಎಂಬ ಯುವಕ ನ್ಯಾಯಾಧೀಶರ ಮುಂದೆ ಹೇಳಿಕೆಯನ್ನು ನೀಡಿದ್ದು ಪ್ರಕರಣದ ಪ್ರಮುಖ ಅಂಶವಾಗಿದೆ.

ಸಿಆರ್ಪಿಸಿ ೧೬೪ ರ ಕಲಂ ಅಡಿ ಆಕಾಶ್ ಹೇಳಿಕೆ ದಾಖಲು ಮಾಡಿದ್ದಾನೆ.
ಸಿಡಿಯನ್ನು ಹೇಗೆ ಮಾಡಲಾಯಿತು, ಆಮೇಲೆ ಅದನ್ನು ಹೇಗೆ ಬಿಡುಗಡೆ ಮಾಡಲಾಯಿತು, ಗೋವಾ ಹಾಗೂ ಹೈದರಾಬಾದ್ ಗೆ ಹೋಗಿ ಬಂದಿದ್ದು ….ಎಲ್ಲ ಅಂಶಗಳನ್ನು ಆಕಾಶ ನ್ಯಾಯಾಲಯದ ಎದುರು ಬಿಚ್ಚಿಟ್ಟಿದ್ದಾನೆ ಎನ್ನಲಾಗಿದೆ.

ಮಾರ್ಚ್ ೧ ರಂದು ರಮೇಶ ಜಾರಕಿಹೊಳಿಯವರ ಸಿಡಿ ವೈರಲ್ ಆಗಿತ್ತು ಅದರ ಹಿನ್ನೆಲೆಯಲ್ಲಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು.

ಪ್ರಕರಣದ ತನಿಖೆಗಾಗಿ ಸರ್ಕಾರದಿಂದ ಎಸ್ಐಟಿ ನೇಮಕ ಮಾಡಲಾಗಿದ್ದು ಈವರೆಗೆ ಒಂಬತ್ತು ಜನರನ್ನು ತನಿಖಾ ತಂಡ ಬಂಧಿಸಿತ್ತು ಅವರಲ್ಲಿ ಆಕಾಶ ತಳವಾಡೆ ಒಬ್ಬನಾಗಿದ್ದು ಇಂದು ಆತನನ್ನು ನ್ಯಾಯಲಯಕ್ಕೆ ಹಾಜರುಪಡಿಸಲಾಗಿತ್ತು.

Latest News

ಮಕ್ಕಳಲ್ಲಿ ಸಂಸ್ಕಾರದ ಗುಣಗಳು ಕಡಿಮೆಯಾಗುತ್ತಿರುವುದು ವಿಷಾದನೀಯ – ಕಲಶೆಟ್ಟಿ

ಸಿಂದಗಿ-ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಮಾನವೀಯ ಸಂಬಂಧಗಳನ್ನು ಬೆಳೆಸಿಕೊಳ್ಳಬೇಕು ಇಂದು ಸಂಸ್ಕಾರದ ಗುಣಗಳು ಮಕ್ಕಳಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಎಂದು ನಿವೃತ್ತ ಉಪನ್ಯಾಸಕ ಎಸ್.ಎಸ್.ಕಲಶೆಟ್ಟಿ ಹೇಳಿದರು.ಅವರು ಪಟ್ಟಣದ ಶ್ರೀ ಸಾತವೀರೇಶ್ವರ...

More Articles Like This

error: Content is protected !!
Join WhatsApp Group