Homeದೇಶ/ವಿದೇಶಸುಶಾಂತ ಆತ್ಮಹತ್ಯೆ; ಆಘಾತ

ಸುಶಾಂತ ಆತ್ಮಹತ್ಯೆ; ಆಘಾತ

ಆತ್ಮಹತ್ಯೆ ಮಾಡಿಕೊಂಡಿರುವ ಖ್ಯಾತ ಬಾಲಿವುಡ್ ನಟ ಸುಶಾಂತ ಸಿಂಗ್ ಕೆಲ ತಿಂಗಳಿಂದ ಡಿಪ್ರೆಶನ್ ನಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ.

ಕಳೆದ ಒಂದು ತಿಂಗಳಿನಲ್ಲಿ ಈ ಲೋಕವನ್ನಗಲಿದ ಶ್ರೇಷ್ಠ ಬಾಲಿವುಡ್ ಕಲಾವಿದರಲ್ಲಿ ಸುಶಾಂತ ನಾಲ್ಕನೆಯವರು. ಕಳೆದ ತಿಂಗಳಲ್ಲಿ ರಿಷಿ ಕಪೂರ್, ಇರ್ಫಾನ್ ಹಾಗೂ ಸಂಗೀತ ನಿರ್ದೇಶಕ ವಾಜಿದ್ ಖಾನ್ ರನ್ನು ದೇಶದ ಚಿತ್ರರಂಗ ಕಳೆದುಕೊಂಡಿದೆ.

‘ಚಿಚ್ಚೋರೆ’ ಎಂಬ ಚಿತ್ರ ಸುಶಾಂತ ಸಿಂಗ ರಾಜಪೂತ ಅವರಿಗೆ ಹಣ ತಂದು ಕೊಟ್ಟ ಚಿತ್ರ. ಇತ್ತೀಚೆಗೆ ಅವರು ಖ್ಯಾತ ಕ್ರಿಕೆಟಿಗ ಮಹೇಂದ್ರಸಿಂಗ್ ಧೋನಿ ಪಾತ್ರದಲ್ಲಿ ‘ ಎಮ್ಎಸ್ ಧೋನಿ ‘ ಎಂಬ ಚಿತ್ರದಲ್ಲಿ ಕಾಣಿಸಿಕೊಂಡು ಗಮನ ಸೆಳೆದಿದ್ದರು.

ಸುಶಾಂತ ನಿಧನಕ್ಕೆ ಖ್ಯಾತ ಕ್ರಿಕೆಟ್ ಆಟಗಾರರಾದ ವೀರೇಂದ್ರ ಸೆಹ್ವಾಗ್, ಹರಭಜನ್ ಸಿಂಗ್, ಕಮೆಂಟೇಟರ್ ಹರ್ಷ ಭೋಗಲೆ ಅಲ್ಲದೆ ಹಲವರು ಆಘಾತ ವ್ಯಕ್ತಪಡಿಸಿದ್ದಾರೆ.

RELATED ARTICLES

Most Popular

error: Content is protected !!
Join WhatsApp Group