Homeಸುದ್ದಿಗಳುಸ್ನೇಹಜೀವಿ ಬಳಗದ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ

ಸ್ನೇಹಜೀವಿ ಬಳಗದ ಹೃದಯಸ್ಪರ್ಶಿ ಸನ್ಮಾನ ಕಾರ್ಯಕ್ರಮ

ಸವದತ್ತಿ ತಾಲೂಕಿನ ಮುನವಳ್ಳಿ ಐತಿಹಾಸಿಕ ನೆಲೆಯನ್ನು ಹೊಂದಿದ ಹಾಗೂ ಪುರಸಭೆ ಹೊಂದಿದ ಪಟ್ಟಣ. ಇಲ್ಲಿ “ಸ್ನೇಹ ಜೀವಿ ಬಳಗ” ಎಂಬ ಸಹಪಾಠಿಗಳ ತಂಡ ಯುವ ಶಿಕ್ಷಕರನ್ನೊಳಗೊಂಡು ರಚಿತವಾಗಿದೆ.

ಮುನವಳ್ಳಿಯಲ್ಲಿ ನೆಲೆಸಿ ಎಲ್ಲೆಡೆ ವಿವಿಧ ಉದ್ಯೋಗಗಳಲ್ಲಿರುವ ಯುವ ಬಳಗ ರಜೆಯ ಅವಧಿ ಒಂದೆಡೆ ಸೇರುವರು.ಅಷ್ಟೇ ಅಲ್ಲ ತಮ್ಮ ಬಳಗದ ಸಾಧಕರು ಯಾರೇ ಇರಲಿ ಅವರನ್ನು ಗುರುತಿಸಿ ಪ್ರೋತ್ಸಾಹಿಸುವುದು. ಅವರ ಅನುವು ಆಪತ್ತುಗಳಿಗೆ ಸ್ಪಂಧಿಸುವುದು. ಹೀಗೆ ವಿಭಿನ್ನ ಕರ‍್ಯಗಳಲ್ಲಿ ತಮ್ಮನ್ನು ತೊಡಗಿಸುವ ಮೂಲಕ ಸಾಮಾಜಿಕ ಪ್ರಜ್ಞೆ ಬೆಳೆಸುತ್ತಿರುವುದು ನಿಜಕ್ಕೂ ಶ್ಲಾಘನೀಯ.

ಇವರು ಇತ್ತೀಚಿಗೆ ಗಣರಾಜ್ಯೋತ್ಸವ ಸಂದರ್ಭದಲ್ಲಿ ಸವದತ್ತಿ ತಾಲೂಕು ಆಡಳಿತದಿಂದ ಗೌರವ ಸನ್ಮಾನಕ್ಕೆ ಪಾತ್ರರಾದ ಶಿಕ್ಷಕ ಬಸನಗೌಡ ಹುಲಿಗೊಪ್ಪ ಇವರನ್ನು ಸನ್ಮಾನಿಸುವ ಕಾರ್ಯಕ್ರಮವನ್ನು ಅವರ ಮನೆಗೆ ಹೋಗಿ ದಂಪತಿಗಳನ್ನು ಸತ್ಕರಿಸಿದರು.

ಈ ಸಂದರ್ಭದಲ್ಲಿ ಹಿರಿಯ ಶಿಕ್ಷಕರಾದ ಎ.ಎ.ಅಣ್ಣೀಗೇರಿ, ಎಂ.ಬಿ.ಮಲಗೌಡರ.ಎ.ಎಂ.ಹಿರೇಮಠ.ವೀರಣ್ಣ ಕೊಳಕಿ.ವೈ.ಬಿ.ಕಡಕೋಳ.ಆರ್.ಎಸ್.ನೀಲೂಗಲ್.ಸುರೇಶ ಬೇವಿನಗಿಡದ. ಹಾಗೂ ಸ್ನೇಹಜೀವಿ ಬಳಗದ ಶಿಕ್ಷಕರಾದ ಸುಧೀರ ವಾಘೇರಿ.ಜಿ.ಎಸ್.ಚಿಪ್ಪಲಕಟ್ಟಿ.ಶಿವೂ ಕಾಟೆ.ರಾಜು.ಹಟ್ಟಿ.ರವಿ ಸಣಕಲ್.ಮಹಾಂತೇಶ ಜೇವೂರ.ವೈನುದ್ಧೀನ ಕೊಳಚಿ ಸೇರಿದಂತೆ ಸ್ನೇಹಿತರೆಲ್ಲ ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಪ್ರಾರಂಭದಲ್ಲಿ ಸುಧೀರ ವಾಘೇರಿ ಸ್ವಾಗತಿಸಿದರು.ನಂತರ ಬಸನಗೌಡ ಹುಲಿಗೊಪ್ಪ ದಂಪತಿಗಳನ್ನು ಸತ್ಕರಿಸಲಾಯಿತು. ಈ ಸಂದರ್ಭದಲ್ಲಿ ಗುರುನಾಥ ಪತ್ತಾರ ಮಾತನಾಡಿ “ಬಿ.ಬಿ.ಹುಲಿಗೊಪ್ಪ ಗುರುಗಳು ಶ್ರೀ ಕುಮಾರೇಶ್ವರ ಶಾಲೆಯಲ್ಲಿ ಸೇವೆ ಸಲ್ಲಿಸುವ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಅವರೊಂದಿಗೆ ವಿಷಯ ಬೋಧನೆಯ ಸವಿನೆನಪನ್ನು ನೆನಪಿಸುತ್ತ ವಯಸ್ಸಿನಲ್ಲಿ ಹಿರಿಯರಾದ ಹುಲಿಗೊಪ್ಪ ಅವರು ಇತಿಹಾಸವನ್ನು ಪ್ರಯೋಗಾತ್ಮಕವಾಗಿ ಬೋಧಿಸಿದ ಉದಾಹರಣೆಯನ್ನು ತಿಳಿಸಿ ಅವರ ಬೋಧನೆಯನ್ನು ಅನುಕರಿಸಿದ ರೀತಿಯನ್ನು ಒಬ್ಬರಿಗೊಬ್ಬರು ಇಂದಿಗೂ ಹಲವು ಸಂಗತಿಗಳನ್ನು ಚರ್ಚಿಸುತ್ತಿರುವುದಾಗಿಯೂ ನಮ್ಮಲ್ಲಿ ವಯಸ್ಸಿನ ಬೇಧವಿಲ್ಲ” ಎಂಬುದನ್ನು ತಿಳಿಸಿದರು.

ವೈ.ಬಿ.ಕಡಕೋಳ ಮಾತನಾಡಿ “ಹುಲಿಗೊಪ್ಪ ಗುರುಗಳ ತಂದೆಯವರು ತಮಗೆ ಕಲಿಸಿದ್ದನ್ನು ಸ್ಮರಿಸುತ್ತ ಅವರ ಸಹೋದರ ಯಲ್ಲನಗೌಡರ ಧಾರವಾಡದ ಕಾಲೇಜು ದಿನಗಳನ್ನು ಮೆಲಕು ಹಾಕುತ್ತ ಸೋಮಶೇಖರ ಮಠದಲ್ಲಿ ಅವರ ಕಾರ್ಯಕ್ರಮ ನಿರೂಪಣೆ ಶೈಲಿಯ ಕುರಿತು” ತಿಳಿಸಿದರು.

ಶಿಕ್ಷಕ ವೀರಣ್ಣ ಕೊಳಕಿ ಮಾತನಾಡಿ “ ಹುಲಿಗೊಪ್ಪ ಅವರ ಹಾಸ್ಯ ಪ್ರಜ್ಞೆಯನ್ನು ಮತ್ತು ಸಮಯೋಜಿತ ನಿರೂಪಣೆ ಶೈಲಿ”ಯ ಕುರಿತು ತಿಳಿಸದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಬಿ.ಬಿ.ಹುಲಿಗೊಪ್ಪ ಗುರುಗಳು “ ಬದುಕಿನಲ್ಲಿ ಪ್ರಶಸ್ತಿಗಳು ಮುಖ್ಯವಲ್ಲ.ತಾವೆಲ್ಲರೂ ಮನೆಗೆ ಬಂದು ಗೌರವಿಸುವ ಮೂಲಕ ನನಗೆ ತಾಲೂಕ ಆಡಳಿತದವರು ನೀಡಿದ ಗೌರವಕ್ಕೆ ಇನ್ನಷ್ಟು ಕಲಶಪ್ರಾಯರಾಗಿ ಶುಭ ಕೋರಿದಿರಿ.ಇದೊಂದು ಮರೆಯಲಾಗದ ಅನುಭೂತಿ.ಇದು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿತು.ಮುಂದೆಯೂ ಕೂಡ ನನ್ನ ವಿದ್ಯಾರ್ಥಿಗಳೊಂದಿಗಿನ ನನ್ನ ಬೋಧನೆಯನ್ನು ಎಲ್ಲರೊಡನೆ ಚರ್ಚಿಸುತ್ತ ಇನ್ನಷ್ಟು ವಿಶಿಷ್ಟತೆಯನ್ನು ಹೊಂದುವೆನು. ತಮಗೆಲ್ಲರಿಗೂ ಧನ್ಯವಾದಗಳು’ಎಂದು ಕೃತಜ್ಞತಾ ಭಾವದ ನುಡಿಗಳನ್ನು ನುಡಿದರು. ಕಾರ್ಯಕ್ರಮದ ಕೊನೆಗೆ ಶಿವೂ ಕಾಟೆ ವಂದಿಸಿದರು.

ಸ್ನೇಹ ಜೀವಿ ಬಳಗದ ಕುರಿತು ಪರಿಶುದ್ಧವಾದ, ನಿಸ್ವಾರ್ಥವಾದ,ತ್ಯಾಗದಿಂದ ಕೂಡಿದ ನಿಷ್ಕಲ್ಮಷವಾದ ವ್ಯಕ್ತಿಗೆ ಮತ್ತು ಸಮಾಜಕ್ಕೆ ಸ್ನೇಹ ಸದಾ ಒಳಿತನ್ನು ಮಾಡುತ್ತದೆ. ನಾವು ಮಾಡುವ ಸ್ನೇಹ ನಮ್ಮ ಸತ್ಕಾರ್ಯದಲ್ಲಿ ಹಾಗೂ ಸರಿಯಾದ ಮಾರ್ಗದಲ್ಲಿ ನಡೆಯಲು ಸಹಕಾರಿಯಾಗಬೇಕು ಎಂಬಂತಿದೆ ಈ ಸ್ನೇಹ ಜೀವಿ ಬಳಗ. ಇಂತಹ ಸ್ನೇಹಬಳಗ ಎಲ್ಲೆಡೆ ಇದ್ದರೆ ಸಮಾಜದಲ್ಲಿ ಸ್ವಾಸ್ಥö್ಯ ವಾತಾವರಣ ಮೂಡುವುದರಲ್ಲಿ ಯಾವ ಸಂದೇಹವಿಲ್ಲ.

ಅಂದ ಹಾಗೆ ಈ ಸದಸ್ಯರ ತಂಡದಲ್ಲಿರುವ ಶಿಕ್ಷಕರುಗಳೆಂದರೆ ಸುಧೀರ.ವಾಗೇರಿ.ರವಿ ಸಣಕಲ್.ಸೋಮು ಶೆಟ್ಟರ.ನಾಗರಾಜ ಯಲಿಗಾರ.ಬಸವರಾಜ ಕರೀಕಟ್ಟಿ.ವಿರೇಶ ಹನಸಿ.ಮುರುಘೇಂದ್ರ ಬೆಣಚಿನಮರಡಿ.ವಿಜಯ ಸೊಗಲದ.ರಮೇಶ ಜೇಡರ.ರಮೇಶ ಬೆಣ್ಣಿ.ಮಾಂತೇಶ ಅಣ್ಣೀಗೇರಿ.ಬಿ.ಎಸ್.ನಾವಿ.ಸಂತೋಷ ಕಳ್ಳೀಮಠ.ಪಂಚು ತಳವಾರ.ರಮೆಶ ಬಳಿಗಾರ.ಮಹಾಂತೇಶ ಜೇವೂರ.ಪ್ರಭು.ಹನಸಿ.ನಾಗಪ್ಪ ನೀಲಾಕಾರಿ, ಜಿ.ಎಸ್.ಚಿಪ್ಪಲಕಟ್ಟಿ, ಪಂಚು ತಾಂದಳೆ.ರಾಜು ಹಟ್ಟಿ.ಧರೆಪ್ಪ.ಮೇದಾರ.ಅರ್ಜುನ.ದೊಡಮನಿ.ಮಹೇಶ ಅಣ್ಣೀಗೇರಿ.ಅಜ್ಜಪ್ಪ.ಸೊಗಲದ.ದೇವರಾಜ ಕ್ಯಾತನ್ನವರ.ಫಾರೂಕ್.ಯಡ್ರಾವಿ.ವಿಜಯ ಕಟ್ಟೀಮನಿ.ಪಂಚಪ್ಪ ಕುಂಬಾರ.ಅರುಣ ನಡುವಿನಹಳ್ಳಿ.ಮಂಜುನಾಥ ಸಾಖರೆ,ಸಿದ್ದು ಗೋಮಾಡಿ.ಶ್ರೀನಿವಾಸ ರೇಣಕೆ.ರವಿ.ಕರಿಗಾರ. ಬಸವರಾಜ ಮಾಯಪ್ಪನವರ.ಧರೆಪ್ಪ ಮರಕುಂಬಿ, ಮಕ್ಕುಂ.ನದಾಫ್ಇ, ತರರು.

ಕೆಲವೊಮ್ಮೆ ನಾವು ಕಷ್ಟವನ್ನಾಗಲಿ, ನೋವನ್ನಾಗಲಿ, ಮನೆಯವರೊಡನೆ ಹಂಚಿಕೊಳ್ಳದೇ ಆತ್ಮೀಯವಾದ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತೇವಲ್ಲದೇ ಬೇರಾರ ಮುಂದೆ ಹೇಳಿಕೊಳ್ಳುವುದಿಲ್ಲ. ಈ ರೀತಿ ನೋವಿರಲಿ ನಲಿವಿರಲಿ ಸ್ನೇಹಿತರೆಲ್ಲ ಒಬ್ಬರನ್ನೊಬ್ಬರು ಅರ್ಥಮಾಡಿಕೊಂಡು ಬದುಕುತ್ತಿರುವುದು “ಸ್ನೇಹಜೀವಿ ಬಳಗ”ದಲ್ಲಿ ಕಾಣಬಹುದು.ಇವರಿಗೆ ಮಾರ್ಗದರ್ಶಕರಾಗಿ ಹಿರಿಯ ಶಿಕ್ಷಕರಾದ ಎ.ಎ.ಅಣ್ಣೀಗೇರಿ, ಜಿ.ಪಿ.ಪತ್ತಾರ, ಎಂ.ಬಿ.ಮಲಗೌಡರ, ಆರ್.ವೈ.ಅಡಿಭಟ್ಟಿ, ವೈ.ಬಿ.ಕಡಕೋಳ, ಪಿ.ಪಿ.ಶೀಲವಂತ, ವೀರಣ್ಣ ಕೊಳಕಿz ಬಿ.ಬಿ.ಹುಲಿಗೊಪ್ಪ, ಎ.ಎಂ.ಹಿರೇಮಠ, ನಾಗರಾಜ ಕಿತ್ತೂರ.ಸುರೇಶ ಬೇವಿನಗಿಡದ, ಛಾಯಾಗ್ರಾಹಕ ಮಿತ್ರರಾದ ಬಸವರಾಜ ತುಳಜನ್ನವರ.ಪ್ರಶಾಂತ ತುಳಜನ್ನವರ, ರಾಜು ಲಿಗಾಡೆ, ಮೊದಲಾದವರು ಇವರು ಯಾವುದೇ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಿ ಇವರೊಡನೆ ಕೈ ಜೋಡಿಸುವರಲ್ಲದೇ ಸೂಕ್ತ ಮಾರ್ಗದರ್ಶನ ಮಾಡುತ್ತಿರುವರು.

ಪ್ರತಿ ವರ್ಷ ನಾವು ಸ್ನೇಹಿತರ ದಿನವನ್ನು ಆಚರಿಸುತ್ತೇವೆ. ನಮ್ಮ ಜೀವನದಲ್ಲಿ ತಮ್ಮ ಆಗಮನದಿಂದ ಜೀವನವನ್ನು ವಿಶೇಷವಾಗಿಸಿದ ಜೀವನದಲ್ಲಿ ಮುನ್ನಡೆಯಲು ಉತ್ತಮ ಮಾರ್ಗದರ್ಶನ ನೀಡಿದ ಅನೇಕ ಮಹನೀಯರನ್ನು ಸ್ನೇಹಿತರನ್ನು ಸ್ಮರಿಸಿಕೊಳ್ಳಲು ಈ “ಸ್ನೇಹ ಜೀವಿ ಬಳಗ” ನಿರಂತರ ಕಾರ್ಯ ಚಟುವಟಿಕೆಯಲ್ಲಿರುವುದು ನಿಜಕ್ಕೂ ಅಭಿನಂದನಾರ್ಹ.

ಸ್ನೇಹ ನಮ್ಮ ಸಮಾನ ವಯಸ್ಕರೊಡನೆ ಆಗಬೇಕೆಂದೇನೂ ಇಲ್ಲ.ವಯಸ್ಸಿನ ಮೇರೆಯನ್ನು ಮೀರಿದ್ದು ಎಂತವರನ್ನೂ ಸ್ನೇಹ ತನ್ನ ಪಾಶದಲ್ಲಿ ಬಂಧಿಸಿಬಿಡುತ್ತದೆ.ಯಾಂತ್ರೀಕೃತ ಜಂಜಡರಹಿತ ಜೀವನದಲ್ಲಿ ಉತ್ಸಾಹ ತುಂಬಲು ಸಾಮಾಜಿಕ ಜೀವನದ ಬದುಕಿನಲ್ಲಿ ಸ್ನೇಹಿತರು ಇರಲೇಬೇಕು ಎನ್ನುವಷ್ಟರ ಮಟ್ಟಿಗೆ ಸ್ನೇಹಜೀವಿ ಬಳಗ ತನ್ನ ಕಾರ್ಯ ಮಾಡುತ್ತಿದೆ.

ಕೃಷ್ಣ ಸುಧಾಮ,ರಾಮ ಮತ್ತು ಸುಗ್ರೀವ,ಕರ್ಣ ಮತ್ತು ಧುರ್ಯೋಧನ,ಕೃಷ್ಣ ಅರ್ಜುನ,ಹೀಗೆ ವೈಶಿಷ್ಟö್ಯಪೂರ್ಣ ಸಂಬಂಧವನ್ನು ಸ್ನೇಹದ ದ್ಯೂತಕದಂತೆ ನಾವು ಪುರಾಣ ಇತಿಹಾಸದಿಂದ ಕಾಣುತ್ತೇವಲ್ಲವೇ.? ಇಂದಿಗೂ ಕೂಡ ಸ್ನೇಹಿತರ ಬಳಗ ಇದ್ದು ಅವರೆಲ್ಲ ತಮ್ಮ ವೃತ್ತಿ ಯಾವುದೇ ಇರಲಿ ತಮ್ಮೆಲ್ಲ ಸ್ನೇಹಿತರನ್ನು ಒಂದೆಡೆ ಸೇರಿಸುವ ಮೂಲಕ ತಮ್ಮ ಸ್ನೇಹದ ನಂಟನ್ನು ಬರೀ ಮಾತುಗಳಲ್ಲಿ ಬೆಸೆದು ಮನೆಗೆ ಹೋಗದೇ ಎಲ್ಲರೂ ಸೇರಿ ಸ್ಮರಣೀಯವಾದ ಚಟುವಟಿಕೆಗಳಲ್ಲಿ ತೊಡಗಿಸುವ ಮೂಲಕ ತಮ್ಮ ಸ್ನೇಹವನ್ನು ಇತರರೂ ಗೌರವಿಸುವಂತೆ ಬದುಕುತ್ತಿರುವುದು ವಿಶೇಷವಾಗಿದೆ. ಇತ್ತೀಚಿಗಷ್ಟೇ ಈ ಬಳಗದ ಸ್ನೇಹಿತರೆಲ್ಲ ಸೇರಿ ಬ್ಯಾಂಕೊಂದನ್ನು ಕೂಡ ಸಹಕಾರ ತತ್ವದಡಿ ಸ್ಥಾಪಿಸಿಕೊಂಡು ಆರ್ಥಿಕವಾಗಿಯೂ ಕೂಡ ತಾವೆಲ್ಲರೂ ಸಬಲರಾಗೋಣ ಎಂಬ ಸಂದೇಶ ಹೊತ್ತು ಸಾಗಿರುವುದು ಕೂಡ ಅಭಿನಂದನಾರ್ಹ ಕಾರ್ಯ.ಇವರ ಚಟುವಟಿಕೆಗಳು ಸಮಾಜಕ್ಕೆ ಸದಾ ಮಾದರಿಯಾಗುತ್ತ ಸಾಗಲಿ ಎಂದು ಆಶಿಸುವೆನು.


ವೈ.ಬಿ.ಕಡಕೋಳ
ಸಂಪನ್ಮೂಲ ಶಿಕ್ಷಕರು
ಮಾರುತಿ ಬಡಾವಣೆ,ಸಿಂದೋಗಿ ಕ್ರಾಸ್
ಮುನವಳ್ಳಿ-೫೯೧೧೧೭
ಸವದತ್ತಿ ತಾಲೂಕ ಬೆಳಗಾವಿ ಜಿಲ್ಲೆ
೯೪೪೯೫೧೮೪೦೦.೮೯೭೧೧೧೭೪೪೨

RELATED ARTICLES

Most Popular

close
error: Content is protected !!
Join WhatsApp Group