ಬಸವಲಿಂಗ ಅವಧೂತರ ಭಕ್ತರಿಂದ ನರ್ತನ; ಓಮಿಕ್ರಾನ್ ವೈರಸ್ ನಿರ್ಲಕ್ಷ್ಯ

Must Read

ಬೀದರ – ಗಡಿ ಜಿಲ್ಲೆಯ ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದಲ್ಲಿ ಓಮಿಕ್ರಾನ್ ವೈರಸ್ ಭಯ ಇಲ್ಲದೇ ಬಸವಲಿಂಗ ಅವಧೂತರ ಭಕ್ತರು ಡಾನ್ಸ್ ಮಾಡಿದರುು.

ಖಟಕ್ ಚಿಂಚೋಳಿ ಗ್ರಾಮದಲ್ಲಿ ನಡೆದ ಜನಸ್ತೋಮ ಕಾರ್ಯಕ್ರಮದಲ್ಲಿ ನೂರಾರು ಜನರು ಒಬ್ಬರು ಕೂಡ ಮಾಸ್ಕ ಹಾಕದೆ ಡ್ಯಾನ್ಸ್ ಮಾಡಿದರು. ರಾಜ್ಯದಲ್ಲಿ ಈಗಾಗಲೇ ಹನ್ನೆರಡು ಜನರಿಗೆ ಓಮಿಕ್ರಾನ್ ವೈರಸ್ ವಕ್ಕರಿಸಿದ್ದು.

ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕ್ರಿಸ್ಮಸ್ ಹಬ್ಬ ಮತ್ತು ಹೊಸ ವರ್ಷ ಆಚರಣೆಗೆ ಬ್ರೇಕ್ ಹಾಕಿದೆ ಆದರು ಕೂಡ ಬಸವಲಿಂಗ ಅವಧೂತರ ಭಕ್ತರು ಮಾತ್ರ ಓಮಿಕ್ರಾನ್ ವೈರಸ್ ಭಯ ಇಲ್ಲದೆ ಡ್ಯಾನ್ಸ್ ಮಾಡಿ, ಪೊಲೀಸ ಇಲಾಖೆ ರಾಜ್ಯ ಸರ್ಕಾರದ ಕೋವಿಡ್ ನಿಯಮಗಳನ್ನು ಗಾಳಿಗೆ ತೂರಿದರು.. ಕೋವಿಡ್ ಸಂದರ್ಭದಲ್ಲಿ ಪೊಲೀಸ ಇಲಾಖೆ ಯಾವ ಆಧಾರದ ಮೇಲೆ ಈ ನೃತ್ಯಕ್ಕೆ ಅನುಮತಿ ನೀಡಿದರು ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಡುತ್ತದೆ ಅಲ್ಲದೆ ಬೀದರ ಜಿಲ್ಲೆಗೆ ಓಮಿಕ್ರಾನ್ ವಕ್ಕರಿಸಿದರೆ ಯಾರು ಹೊಣೆಗಾರರು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.


ವರದಿ: ನಂದಕುಮಾರ ಕರಂಜೆ
ಟೈಮ್ಸ್ ಆಫ್ ಕರ್ನಾಟಕ, ಬೀದರ

Latest News

ಅನ್ನದಾನೇಶ್ವರ ಶ್ರೀಗಳು ಪಂಚಭೂತಗಳಲ್ಲಿ ಲೀನ

ಶ್ರೀಶೈಲ ಜಗದ್ಗುರುಗಳು, ನಾಡಿನ ಹರಗುರು ಚರಮೂರ್ತಿಗಳು ಭಕ್ತರು ಭಾಗಿಮೂಡಲಗಿ - ರಬಕವಿ ಬನಹಟ್ಟಿ ತಾಲೂಕಿನ ಬಂಡಿಗಣಿ ಗ್ರಾಮದ ಶ್ರೀ ಬಸವ ಗೋಪಾಲ ನೀಲಮಾಣಿಕ ಮಠದ ಶ್ರೀ...

More Articles Like This

error: Content is protected !!
Join WhatsApp Group