ಬೀದರ – ಕಾಡುಮೃಗವೊಂದು ಪತ್ರಕರ್ತನ ಮೇಲೆ ದಾಳಿ ಮಾಡಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಬೀದರ್ ಜಿಲ್ಲೆಯ ಜನವಾಡ ಗ್ರಾಮದ ಹತ್ತಿರ ಇರುವ ಮಾಂಜ್ರಾ ನದಿಯಲ್ಲಿ ಪತ್ರಕರ್ತ ಸಂಜು ಬುಕಾ ಅವರು ಪೂಜಾ ಸಾಮಗ್ರಿಗಳನ್ನು ನದಿಯಲ್ಲಿ ಬಿಡಲು ಹೋಗಿದ್ದ ಸಂದರ್ಭದಲ್ಲಿ ಚಿರತೆ ದಾಳಿ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ಮತ್ತೊಮ್ಮೆ ತನ್ನ ಮೇಲೆ ದಾಳಿ ಮಾಡಿದ್ದು ಕತ್ತೆ ಕಿರುಬ ಎಂಬ ಸಂದೇಹ ವ್ಯಕ್ತಪಡಿಸಿದ್ದಾರೆ. ಪತ್ರಕರ್ತನ ಹೇಳಿಕೆಯಿಂದ ಅರಣ್ಯ ಇಲಾಖೆ ಎಚ್ಚತ್ತುಗೊಂಡು ಕಾಡುಮೃಗ ದಾಳಿ ಮಾಡಿದ ಸ್ಥಳ ಮತ್ತು ಹೆಜ್ಜೆ ಗುರುತು ಪರಿಶೀಲನೆ ಮಾಡಬೇಕಾಗಿದೆ.
ದಾಳಿಗೆ ಒಳಗಾದ ಪತ್ರಕರ್ತನನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು ಚಿಕಿತ್ಸೆ ನಡೆಯುತ್ತಿದೆ. ಜೀವಕ್ಕೆ ಯಾವ ಅಪಾಯವಿಲ್ಲ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.
ವರದಿ: ನಂದಕುಮಾರ ಕರಂಜೆ,ಬೀದರ